Home / ಕವನ / ಕವಿತೆ / ಅಳಿವು-ಉಳಿವು

ಅಳಿವು-ಉಳಿವು

ಬೀಜ ಬೇರೂರಿ
ಕುಡಿ ಇಡುತ್ತಿರುವಾಗಲೇ
ಹತ್ತಿಕೊಂಡಿತ್ತು ಗೆದ್ದಲು
ಬಿಡಿಸಿಕೊಳ್ಳಲು ಹರಸಾಹಸಗೈದರೂ
ತಪ್ಪಿಸಿಕೊಳ್ಳಲು ಆಗಲೇ ಇಲ್ಲ

ಗೆದ್ದಲು ಹಿಡಿದ ಬೀಜ
ಸಾಯುವುದೇ ದಿಟ
ಎಂದುಕೊಂಡರೂ ಹಾಗಾಗಲಿಲ್ಲ
ಉಳಿವಿಗಾಗಿ ಹೋರಾಟ
ತುಸು ಉಸಿರುವವರೆಗೂ
ಚಿಗುರಿಕೊಂಡಿತು
ಬೀಜ ಮೆಲ್ಲನೆ ಗಿಡವಾಗಿ
ಆದರೆ,

“ಒಬ್ಬನ ಕತ್ತು ಇನ್ನೊಬ್ಬನ ತುತ್ತು”
ಹಿಡಿದ ಬೀಜದ ಬಿಡಲೊಲ್ಲದ
ಗೆದ್ದಲು ಕಾಯತೊಡಗಿತ್ತು
ಸಸಿಯ ಕ್ಷೀಣ ಕಾಲವ

ದಿನಕಳೆದಂತೆ ಬತ್ತಿದ ಉತ್ಸಾಹ
ಕುಗ್ಗಿದ ಹುಮ್ಮಸ್ಸು
ಆಸೆಕುಂದಿದ ಸಸಿ
ಬಲಿಯಾಗಿತ್ತು ಗೆದ್ದಲ ಬಾಯಿಗೆ
“ಸಬಲರ ಉಳಿವು ದುರ್ಬಲರ ಅಳಿವು”
ಪ್ರಕೃತಿ ನಿಯಮ

ಬಲಿಮೆದ್ದು ಹಿರಿಮೆಯಲ್ಲಿ
ಮೆರೆದಿತ್ತು ಗೆದ್ದಲು
ಹುತ್ತವ ಮಾಡಿ
ಹೂಡಿತ್ತು ಸಂಸಾರ

ಆದರೆ
ಉರಗವೊಂದು ತೆವಳಿ
ಬಂದಿತ್ತು ನೋಡಿ
ಗೆದ್ದಲ ಗೂಡು
ದಿನ ನಾಲ್ಕು ದೂಡಬಹುದು
ಕಷ್ಟವಿಲ್ಲದೆ ಪಾಡು
ನಡೆಸಿತ್ತು ಗೆದ್ದಲ
ಕೂಡು ಕುಟುಂಬದ
ಮಾರಣ ಹೋಮ

“ಕಾಲಾಯ ತಸ್ಮೈ ನಮಃ”


Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...