ಅಳಿವು-ಉಳಿವು

ಬೀಜ ಬೇರೂರಿ
ಕುಡಿ ಇಡುತ್ತಿರುವಾಗಲೇ
ಹತ್ತಿಕೊಂಡಿತ್ತು ಗೆದ್ದಲು
ಬಿಡಿಸಿಕೊಳ್ಳಲು ಹರಸಾಹಸಗೈದರೂ
ತಪ್ಪಿಸಿಕೊಳ್ಳಲು ಆಗಲೇ ಇಲ್ಲ

ಗೆದ್ದಲು ಹಿಡಿದ ಬೀಜ
ಸಾಯುವುದೇ ದಿಟ
ಎಂದುಕೊಂಡರೂ ಹಾಗಾಗಲಿಲ್ಲ
ಉಳಿವಿಗಾಗಿ ಹೋರಾಟ
ತುಸು ಉಸಿರುವವರೆಗೂ
ಚಿಗುರಿಕೊಂಡಿತು
ಬೀಜ ಮೆಲ್ಲನೆ ಗಿಡವಾಗಿ
ಆದರೆ,

“ಒಬ್ಬನ ಕತ್ತು ಇನ್ನೊಬ್ಬನ ತುತ್ತು”
ಹಿಡಿದ ಬೀಜದ ಬಿಡಲೊಲ್ಲದ
ಗೆದ್ದಲು ಕಾಯತೊಡಗಿತ್ತು
ಸಸಿಯ ಕ್ಷೀಣ ಕಾಲವ

ದಿನಕಳೆದಂತೆ ಬತ್ತಿದ ಉತ್ಸಾಹ
ಕುಗ್ಗಿದ ಹುಮ್ಮಸ್ಸು
ಆಸೆಕುಂದಿದ ಸಸಿ
ಬಲಿಯಾಗಿತ್ತು ಗೆದ್ದಲ ಬಾಯಿಗೆ
“ಸಬಲರ ಉಳಿವು ದುರ್ಬಲರ ಅಳಿವು”
ಪ್ರಕೃತಿ ನಿಯಮ

ಬಲಿಮೆದ್ದು ಹಿರಿಮೆಯಲ್ಲಿ
ಮೆರೆದಿತ್ತು ಗೆದ್ದಲು
ಹುತ್ತವ ಮಾಡಿ
ಹೂಡಿತ್ತು ಸಂಸಾರ

ಆದರೆ
ಉರಗವೊಂದು ತೆವಳಿ
ಬಂದಿತ್ತು ನೋಡಿ
ಗೆದ್ದಲ ಗೂಡು
ದಿನ ನಾಲ್ಕು ದೂಡಬಹುದು
ಕಷ್ಟವಿಲ್ಲದೆ ಪಾಡು
ನಡೆಸಿತ್ತು ಗೆದ್ದಲ
ಕೂಡು ಕುಟುಂಬದ
ಮಾರಣ ಹೋಮ

“ಕಾಲಾಯ ತಸ್ಮೈ ನಮಃ”


Previous post ಸ್ವಗತ
Next post ಪೋಸ್ಟರ್ ಬರೆಯುವ ಮಂದಿ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…