ಅಳಿವು-ಉಳಿವು

ಬೀಜ ಬೇರೂರಿ
ಕುಡಿ ಇಡುತ್ತಿರುವಾಗಲೇ
ಹತ್ತಿಕೊಂಡಿತ್ತು ಗೆದ್ದಲು
ಬಿಡಿಸಿಕೊಳ್ಳಲು ಹರಸಾಹಸಗೈದರೂ
ತಪ್ಪಿಸಿಕೊಳ್ಳಲು ಆಗಲೇ ಇಲ್ಲ

ಗೆದ್ದಲು ಹಿಡಿದ ಬೀಜ
ಸಾಯುವುದೇ ದಿಟ
ಎಂದುಕೊಂಡರೂ ಹಾಗಾಗಲಿಲ್ಲ
ಉಳಿವಿಗಾಗಿ ಹೋರಾಟ
ತುಸು ಉಸಿರುವವರೆಗೂ
ಚಿಗುರಿಕೊಂಡಿತು
ಬೀಜ ಮೆಲ್ಲನೆ ಗಿಡವಾಗಿ
ಆದರೆ,

“ಒಬ್ಬನ ಕತ್ತು ಇನ್ನೊಬ್ಬನ ತುತ್ತು”
ಹಿಡಿದ ಬೀಜದ ಬಿಡಲೊಲ್ಲದ
ಗೆದ್ದಲು ಕಾಯತೊಡಗಿತ್ತು
ಸಸಿಯ ಕ್ಷೀಣ ಕಾಲವ

ದಿನಕಳೆದಂತೆ ಬತ್ತಿದ ಉತ್ಸಾಹ
ಕುಗ್ಗಿದ ಹುಮ್ಮಸ್ಸು
ಆಸೆಕುಂದಿದ ಸಸಿ
ಬಲಿಯಾಗಿತ್ತು ಗೆದ್ದಲ ಬಾಯಿಗೆ
“ಸಬಲರ ಉಳಿವು ದುರ್ಬಲರ ಅಳಿವು”
ಪ್ರಕೃತಿ ನಿಯಮ

ಬಲಿಮೆದ್ದು ಹಿರಿಮೆಯಲ್ಲಿ
ಮೆರೆದಿತ್ತು ಗೆದ್ದಲು
ಹುತ್ತವ ಮಾಡಿ
ಹೂಡಿತ್ತು ಸಂಸಾರ

ಆದರೆ
ಉರಗವೊಂದು ತೆವಳಿ
ಬಂದಿತ್ತು ನೋಡಿ
ಗೆದ್ದಲ ಗೂಡು
ದಿನ ನಾಲ್ಕು ದೂಡಬಹುದು
ಕಷ್ಟವಿಲ್ಲದೆ ಪಾಡು
ನಡೆಸಿತ್ತು ಗೆದ್ದಲ
ಕೂಡು ಕುಟುಂಬದ
ಮಾರಣ ಹೋಮ

“ಕಾಲಾಯ ತಸ್ಮೈ ನಮಃ”


Previous post ಸ್ವಗತ
Next post ಪೋಸ್ಟರ್ ಬರೆಯುವ ಮಂದಿ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys