Home / ಕವನ / ಕವಿತೆ / ಅಳಿವು-ಉಳಿವು

ಅಳಿವು-ಉಳಿವು

ಬೀಜ ಬೇರೂರಿ
ಕುಡಿ ಇಡುತ್ತಿರುವಾಗಲೇ
ಹತ್ತಿಕೊಂಡಿತ್ತು ಗೆದ್ದಲು
ಬಿಡಿಸಿಕೊಳ್ಳಲು ಹರಸಾಹಸಗೈದರೂ
ತಪ್ಪಿಸಿಕೊಳ್ಳಲು ಆಗಲೇ ಇಲ್ಲ

ಗೆದ್ದಲು ಹಿಡಿದ ಬೀಜ
ಸಾಯುವುದೇ ದಿಟ
ಎಂದುಕೊಂಡರೂ ಹಾಗಾಗಲಿಲ್ಲ
ಉಳಿವಿಗಾಗಿ ಹೋರಾಟ
ತುಸು ಉಸಿರುವವರೆಗೂ
ಚಿಗುರಿಕೊಂಡಿತು
ಬೀಜ ಮೆಲ್ಲನೆ ಗಿಡವಾಗಿ
ಆದರೆ,

“ಒಬ್ಬನ ಕತ್ತು ಇನ್ನೊಬ್ಬನ ತುತ್ತು”
ಹಿಡಿದ ಬೀಜದ ಬಿಡಲೊಲ್ಲದ
ಗೆದ್ದಲು ಕಾಯತೊಡಗಿತ್ತು
ಸಸಿಯ ಕ್ಷೀಣ ಕಾಲವ

ದಿನಕಳೆದಂತೆ ಬತ್ತಿದ ಉತ್ಸಾಹ
ಕುಗ್ಗಿದ ಹುಮ್ಮಸ್ಸು
ಆಸೆಕುಂದಿದ ಸಸಿ
ಬಲಿಯಾಗಿತ್ತು ಗೆದ್ದಲ ಬಾಯಿಗೆ
“ಸಬಲರ ಉಳಿವು ದುರ್ಬಲರ ಅಳಿವು”
ಪ್ರಕೃತಿ ನಿಯಮ

ಬಲಿಮೆದ್ದು ಹಿರಿಮೆಯಲ್ಲಿ
ಮೆರೆದಿತ್ತು ಗೆದ್ದಲು
ಹುತ್ತವ ಮಾಡಿ
ಹೂಡಿತ್ತು ಸಂಸಾರ

ಆದರೆ
ಉರಗವೊಂದು ತೆವಳಿ
ಬಂದಿತ್ತು ನೋಡಿ
ಗೆದ್ದಲ ಗೂಡು
ದಿನ ನಾಲ್ಕು ದೂಡಬಹುದು
ಕಷ್ಟವಿಲ್ಲದೆ ಪಾಡು
ನಡೆಸಿತ್ತು ಗೆದ್ದಲ
ಕೂಡು ಕುಟುಂಬದ
ಮಾರಣ ಹೋಮ

“ಕಾಲಾಯ ತಸ್ಮೈ ನಮಃ”


Tagged:

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...