Home / ಲೇಖನ / ವಿಜ್ಞಾನ / ಯಂತ್ರ ವೈದ್ಯರು ಬರಲಿದ್ದಾರೆ!

ಯಂತ್ರ ವೈದ್ಯರು ಬರಲಿದ್ದಾರೆ!

೨೦೪೦ರ ಹೊತ್ತಿಗೆ ಅತಿಸೂಕ್ಷ್ಮ ಮತ್ತು ಪರಿಪೂರ್ಣ ರೋಬಟ್‌ಗಳನ್ನು ವಿಜ್ಞಾನಿಗಳು ಸಂಯೋಜಿಸುತ್ತಾರೆ. ಬ್ಯಾಕ್ಟೀರಿಯಾ ಗಾತ್ರದಲ್ಲೂ ಕೂಡ ಇವು ಇರುತ್ತವೆ. “ನ್ಯಾನೋ ಡಾಕ್ಸ್” ಎಂದು ಕರೆಯಲ್ಪಡುವ ರೋಬಟ್ ವೈದ್ಯನ ಶರೀರದಲ್ಲಿ ಸೂಕ್ಷ್ಮ ದರ್ಶಕಗಳನ್ನು ಅಳವಡಿಸಲಾಗಿದೆ. ಶರೀರಕ್ಕೆ ಹಾನಿಯುಂಟು ಮಾಡುವ ಸೂಕ್ಷ್ಮಜೀವಿಗಳು, ವಿಕೃತಗೊಂಡ ರಕ್ತಕಣಗಳು ಮತ್ತು ಕ್ಯಾನ್ಸರ್ ಕಣಗಳನ್ನು ಪತ್ತೆಹಚ್ಚುವ ದೃಶ್ಯ ವ್ಯವಸ್ಥೆಯ ‘ಮೆಮೋರಿ’ಯನ್ನು ಅಳವಡಿಸಲಾಗುತ್ತದೆ. ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಇವು ರಕ್ತವನ್ನು ಶುದ್ಧಿಗೊಳಿಸುತ್ತವೆ. ಈ ನ್ಯಾನೋ ಇಂಜಿನ್‌ಗಳು (ರೋಬಟ್ ವೈದ್ಯ) ರೋಗಕಾರಕ ಸೂಕ್ಷ್ಮ ಜೀವಿಗಳನ್ನು ಗುರುತಿಸಿ ಅವುಗಳ ಹೊರಕವಚವನ್ನು ಭೇಧಿಸುವದರಿಂದ ಬಿಳಿ ರಕ್ತಕಣಗಳಿಗೆ ಆ ಸೂಕ್ಷ್ಮ ಜೀವಿಗಳನ್ನು ನಾಶಪಡಿಸಲು ಅನುಕೂಲವಾಗುತ್ತದೆ. ಹಲವಾರು ವರ್ಷಗಳಿಂದ ಶರೀರದಲ್ಲಿ ನೆಲೆಗೊಂಡ ಸೂಕ್ಷ್ಮಜೀವಿಗಳನ್ನು ಈ ರೋಬಟ್ ಇಂಜಿನ್‌ಗಳು ಪತ್ತೆಹಚ್ಚುತ್ತವೆ. ಬೋಸ್ಟನ ಕಾಲೇಜಿಗೆ ಸೇರಿದ ಟಿ. ರಾಸ್‌ಕೆಲ್ಲಿ ಮತ್ತು ತಂಡವು ಕೇವಲ ೭೮ ಪರಮಾಣುಗಳ ಒಂದು ನ್ಯಾನೋ ಇಂಜಿನನ್ನು ರೂಪಿಸಿದ್ದಾರೆ. ಜೀವಕೋಶಗಳಂತೆ ಅದು ಕೂಡ (ATP) ಅಣುವಿನಿಂದ ಶಕ್ತಿ ಪಡೆದು ಗ್ರಹಿಸುವುದು ವಿಶೇಷವಾದ ಸಂಗತಿ.

ಇಂತಹ ರೋಬಟ್ ಸರ್ಜನ್‌ಗಳು ಆಸ್ಪತ್ರೆಗಳು ಕಾಲಿಡುವ ದಿನ ಹತ್ತಿರದಲ್ಲಿದೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...