Home / ಲೇಖನ / ವಿಜ್ಞಾನ / ಯಂತ್ರ ವೈದ್ಯರು ಬರಲಿದ್ದಾರೆ!

ಯಂತ್ರ ವೈದ್ಯರು ಬರಲಿದ್ದಾರೆ!

೨೦೪೦ರ ಹೊತ್ತಿಗೆ ಅತಿಸೂಕ್ಷ್ಮ ಮತ್ತು ಪರಿಪೂರ್ಣ ರೋಬಟ್‌ಗಳನ್ನು ವಿಜ್ಞಾನಿಗಳು ಸಂಯೋಜಿಸುತ್ತಾರೆ. ಬ್ಯಾಕ್ಟೀರಿಯಾ ಗಾತ್ರದಲ್ಲೂ ಕೂಡ ಇವು ಇರುತ್ತವೆ. “ನ್ಯಾನೋ ಡಾಕ್ಸ್” ಎಂದು ಕರೆಯಲ್ಪಡುವ ರೋಬಟ್ ವೈದ್ಯನ ಶರೀರದಲ್ಲಿ ಸೂಕ್ಷ್ಮ ದರ್ಶಕಗಳನ್ನು ಅಳವಡಿಸಲಾಗಿದೆ. ಶರೀರಕ್ಕೆ ಹಾನಿಯುಂಟು ಮಾಡುವ ಸೂಕ್ಷ್ಮಜೀವಿಗಳು, ವಿಕೃತಗೊಂಡ ರಕ್ತಕಣಗಳು ಮತ್ತು ಕ್ಯಾನ್ಸರ್ ಕಣಗಳನ್ನು ಪತ್ತೆಹಚ್ಚುವ ದೃಶ್ಯ ವ್ಯವಸ್ಥೆಯ ‘ಮೆಮೋರಿ’ಯನ್ನು ಅಳವಡಿಸಲಾಗುತ್ತದೆ. ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಇವು ರಕ್ತವನ್ನು ಶುದ್ಧಿಗೊಳಿಸುತ್ತವೆ. ಈ ನ್ಯಾನೋ ಇಂಜಿನ್‌ಗಳು (ರೋಬಟ್ ವೈದ್ಯ) ರೋಗಕಾರಕ ಸೂಕ್ಷ್ಮ ಜೀವಿಗಳನ್ನು ಗುರುತಿಸಿ ಅವುಗಳ ಹೊರಕವಚವನ್ನು ಭೇಧಿಸುವದರಿಂದ ಬಿಳಿ ರಕ್ತಕಣಗಳಿಗೆ ಆ ಸೂಕ್ಷ್ಮ ಜೀವಿಗಳನ್ನು ನಾಶಪಡಿಸಲು ಅನುಕೂಲವಾಗುತ್ತದೆ. ಹಲವಾರು ವರ್ಷಗಳಿಂದ ಶರೀರದಲ್ಲಿ ನೆಲೆಗೊಂಡ ಸೂಕ್ಷ್ಮಜೀವಿಗಳನ್ನು ಈ ರೋಬಟ್ ಇಂಜಿನ್‌ಗಳು ಪತ್ತೆಹಚ್ಚುತ್ತವೆ. ಬೋಸ್ಟನ ಕಾಲೇಜಿಗೆ ಸೇರಿದ ಟಿ. ರಾಸ್‌ಕೆಲ್ಲಿ ಮತ್ತು ತಂಡವು ಕೇವಲ ೭೮ ಪರಮಾಣುಗಳ ಒಂದು ನ್ಯಾನೋ ಇಂಜಿನನ್ನು ರೂಪಿಸಿದ್ದಾರೆ. ಜೀವಕೋಶಗಳಂತೆ ಅದು ಕೂಡ (ATP) ಅಣುವಿನಿಂದ ಶಕ್ತಿ ಪಡೆದು ಗ್ರಹಿಸುವುದು ವಿಶೇಷವಾದ ಸಂಗತಿ.

ಇಂತಹ ರೋಬಟ್ ಸರ್ಜನ್‌ಗಳು ಆಸ್ಪತ್ರೆಗಳು ಕಾಲಿಡುವ ದಿನ ಹತ್ತಿರದಲ್ಲಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...