Home / ಕವನ / ಕವಿತೆ / ಮಳೆ ಎಂದರೆ ಪ್ರೀತಿ ನನಗೆ

ಮಳೆ ಎಂದರೆ ಪ್ರೀತಿ ನನಗೆ

ಮೋಡ ಬಸಿರಿನೊಳಗೆ
ಹೂತಿಟ್ಟ ಬಯಕೆಗಳು ಒಂದೊಂದಾಗಿ
ಸುಡುತ್ತ ಬೂದಿಯಾಗುವಾಗ
ಫಳಾರನೆ ಹೊಡೆಯುವ
ಸಿಡಿಲಿನ ಶಬ್ದಕ್ಕೆ ಹೊಟ್ಟೆಯೊಡೆದು
ಹನಿ ಹನಿಗುಡುತ್ತ
ಸುರಿಯುತ್ತಿದ್ದಂತೆಯೇ ತೊಳೆಯುತ್ತದೆ
ಹಕ್ಕೆ ಗಟ್ಟಿದ ಮನಸನ್ನು
ಮಳೆ ಎಂದರೆ ಪ್ರೀತಿ ನನಗೆ –

ಸತ್ತ ಹಿರಿಯರು ಕಿತ್ತುಕೊಂಡು ಹೋದ
ಉಸಿರು ಕಣ್ಣೀರು
ಈಗ ಬಿಸಿಧಗೆಯಾಗಿ
ಎಲ್ಲವೂ ಒಂದೊಂದಾಗಿ
ಹನಿ ಹನಿಯಾಗಿ ಒಪ್ಪಿಸುತ್ತಿದ್ದಾರೆ
ಅವರೂ ನಮ್ಮನ್ನು ಕಳೆದುಕೊಂಡಂತೆ
ಮಳೆ ಎಂದರೆ ಪ್ರೀತಿ ನನಗೆ –

ಸುಡುವ ಹೀರುವ ಹಿಂಡುವ
ಎಲ್ಲರ ರಕ್ತದ ಮೇಲೆ
ಕಣ್ಣಿಡುವ ಸೂರ್ಯನ ಸಾಮ್ರಾಜ್ಯಕ್ಕೆ
ಆಗಾಗ ಬುರ್ಕಾ ಹಾಕುತ್ತ ಕಣ್ಣುಮುಚ್ಚಾಲೆ
ಆಡಿಸುತ್ತ ಕುತೂಹಲಿಸುವ
ಮಳೆ ಎಂದರೆ ಪ್ರೀತಿ ನನಗೆ

ಕಲ್ಲು ಬಂಡೆಗಳಲಿ
ಕಾಂಕ್ರೀಟು ಬಿರುಕುಗಳಲಿ
ಗುಡಿ ಗುಂಡಾರಗಳ ಮೇಲೆಲ್ಲ
ಚಿಗಿರೊಡೆದು ಹುಲ್ಲಾಗಿಸುವ
ಎಲ್ಲೆಲ್ಲೂ ‘ಹಸಿರು’ ಬಸುರಿಯರ
ಗುಂಪಾಗಿಸುವ. ‘ಹೂ’ ಮಕ್ಕಳ ಚಲ್ಲಾಡಿಸುವ
ಓಟದ ಸರದಾರನಾಗುವ
ಮಳೆ ಎಂದರೆ ಪ್ರೀತಿ ನನಗೆ –

ಅರಳುವ ಹೂಗಳಲಿ ಇನ್ನೂ ಹರೆತುಂಬಿ
ವಯಸ್ಕರ  B.P. ಇಳಿಸಿ
ರಾಡಿ ಮಡಗಳು ಕಿಚಿಪಿಚಿಸಲು
ಗಿಡ ಮರ ಮನೆ ಮಠಗಳ ಧೂಳ ತೊಳೆದು
ಮಧ್ಯಾಹ್ನ ಕಾವು ಹೊತ್ತ ತಲೆ
ಸಂಜೆ ಚಡಪಡಿಸುವ ಬಿರುಗಾಳಿ
ಗೂಡು ತಲುಪುವ ಪಕ್ಷಿಗಳ
ವೇಗದ ಆಟೋ ಸೈಕಲ್ ಪಾದಚಾರಿಗಳಿಗೆ
ತಂಪಡರಲು ಕುಣಿಯುವ ಕುಪ್ಪಳಿಸುವ
ಮಳೆ ಎಂದರೆ ಪ್ರೀತಿ ನನಗೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...