Home / ಕವನ / ಕವಿತೆ / ಮಳೆ ಎಂದರೆ ಪ್ರೀತಿ ನನಗೆ

ಮಳೆ ಎಂದರೆ ಪ್ರೀತಿ ನನಗೆ

ಮೋಡ ಬಸಿರಿನೊಳಗೆ
ಹೂತಿಟ್ಟ ಬಯಕೆಗಳು ಒಂದೊಂದಾಗಿ
ಸುಡುತ್ತ ಬೂದಿಯಾಗುವಾಗ
ಫಳಾರನೆ ಹೊಡೆಯುವ
ಸಿಡಿಲಿನ ಶಬ್ದಕ್ಕೆ ಹೊಟ್ಟೆಯೊಡೆದು
ಹನಿ ಹನಿಗುಡುತ್ತ
ಸುರಿಯುತ್ತಿದ್ದಂತೆಯೇ ತೊಳೆಯುತ್ತದೆ
ಹಕ್ಕೆ ಗಟ್ಟಿದ ಮನಸನ್ನು
ಮಳೆ ಎಂದರೆ ಪ್ರೀತಿ ನನಗೆ –

ಸತ್ತ ಹಿರಿಯರು ಕಿತ್ತುಕೊಂಡು ಹೋದ
ಉಸಿರು ಕಣ್ಣೀರು
ಈಗ ಬಿಸಿಧಗೆಯಾಗಿ
ಎಲ್ಲವೂ ಒಂದೊಂದಾಗಿ
ಹನಿ ಹನಿಯಾಗಿ ಒಪ್ಪಿಸುತ್ತಿದ್ದಾರೆ
ಅವರೂ ನಮ್ಮನ್ನು ಕಳೆದುಕೊಂಡಂತೆ
ಮಳೆ ಎಂದರೆ ಪ್ರೀತಿ ನನಗೆ –

ಸುಡುವ ಹೀರುವ ಹಿಂಡುವ
ಎಲ್ಲರ ರಕ್ತದ ಮೇಲೆ
ಕಣ್ಣಿಡುವ ಸೂರ್ಯನ ಸಾಮ್ರಾಜ್ಯಕ್ಕೆ
ಆಗಾಗ ಬುರ್ಕಾ ಹಾಕುತ್ತ ಕಣ್ಣುಮುಚ್ಚಾಲೆ
ಆಡಿಸುತ್ತ ಕುತೂಹಲಿಸುವ
ಮಳೆ ಎಂದರೆ ಪ್ರೀತಿ ನನಗೆ

ಕಲ್ಲು ಬಂಡೆಗಳಲಿ
ಕಾಂಕ್ರೀಟು ಬಿರುಕುಗಳಲಿ
ಗುಡಿ ಗುಂಡಾರಗಳ ಮೇಲೆಲ್ಲ
ಚಿಗಿರೊಡೆದು ಹುಲ್ಲಾಗಿಸುವ
ಎಲ್ಲೆಲ್ಲೂ ‘ಹಸಿರು’ ಬಸುರಿಯರ
ಗುಂಪಾಗಿಸುವ. ‘ಹೂ’ ಮಕ್ಕಳ ಚಲ್ಲಾಡಿಸುವ
ಓಟದ ಸರದಾರನಾಗುವ
ಮಳೆ ಎಂದರೆ ಪ್ರೀತಿ ನನಗೆ –

ಅರಳುವ ಹೂಗಳಲಿ ಇನ್ನೂ ಹರೆತುಂಬಿ
ವಯಸ್ಕರ  B.P. ಇಳಿಸಿ
ರಾಡಿ ಮಡಗಳು ಕಿಚಿಪಿಚಿಸಲು
ಗಿಡ ಮರ ಮನೆ ಮಠಗಳ ಧೂಳ ತೊಳೆದು
ಮಧ್ಯಾಹ್ನ ಕಾವು ಹೊತ್ತ ತಲೆ
ಸಂಜೆ ಚಡಪಡಿಸುವ ಬಿರುಗಾಳಿ
ಗೂಡು ತಲುಪುವ ಪಕ್ಷಿಗಳ
ವೇಗದ ಆಟೋ ಸೈಕಲ್ ಪಾದಚಾರಿಗಳಿಗೆ
ತಂಪಡರಲು ಕುಣಿಯುವ ಕುಪ್ಪಳಿಸುವ
ಮಳೆ ಎಂದರೆ ಪ್ರೀತಿ ನನಗೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...