Home / ಕವನ / ಕವಿತೆ / ಮರ ಮತ್ತು ಹುಲ್ಲೆ

ಮರ ಮತ್ತು ಹುಲ್ಲೆ

ಮಳೆಯಲ್ಲಿ ಎಲ್ಲಬಾಗಿಲು ಹಾಕಿಕೊಂಡೋ
ಚಳಿಯಲ್ಲಿ ಬೆಚ್ಚನೆಯ ಶಾಲು ಹೊದ್ದುಕೊಂಡೋ
ಕವನಗಳು ಸುರಿಸುವಂತೆ
ಈ ಬೇಸಗೆಯೆ ಬಸಿಲಿನ
ಮುಂಜಾವು ಮುಸ್ಸಂಜೆಯಲ್ಲಿಯೂ
ನಾನೇ ನೀರೆರದು ಬೆಳೆಸಿದ ಮರಗಳ
ಸಾಲಿನಲ್ಲಿ ಕುಳಿತು.
ಅದರ ಮೇಲೆ ವರ್ಷ ವರ್ಷಗಳವರಗೆ
ಚಿಲಿಪಿಲಿಸಿದ ಹಕ್ಕಿಗಳ
ಚಳಿಯಲ್ಲಿ ಉದುರುವ ಎಲೆಗಳ
ಚೈತ್ರದಲ್ಲಿ ಚೈತ್ರಿಸುವ ಚಿಗುರುಗಳ
ವಸಂತದಲ್ಲಿ ಕಾಮನ ಬಿಲ್ಲಿನ ಚೂರು ಹೂಗಳಲ್ಲಿ
ಸ್ಪಂದಿಸುತ್ತ
ನಿನ್ನ ನೆರಳಲ್ಲಿ ಬೆಳೆದ ಹೂ ಮೊಗ್ಗುಗಳ
ಹುಲ್ಲು, ಮಂಜು ಮುಸುಕು ಕುರಿತು
ನನ್ನ ಹೃದಯದ ಮೂಲಕ ನಿನ್ನೊಂದಿಗೆ ಚರ್ಚಿಸಿ
ಏನೆಲ್ಲ ಬರೆಯಬೇಕೆಂದು
ದೂರದ ಊರಿನಿಂದ ಮರಳಿದ್ದೆ
ಆದರೆ ಆಗಲೇ –
ನಿಷ್ಕರುಣೆಯ ಬಲಿಷ್ಟ ಕೈಗಳು
ಸಲಗದಂತಾಗಿ ನಿನ್ನನ್ನು
ಶಸ್ತ್ರಿಸಿದ್ದು ಅಷ್ಟೇ ಅಲ್ಲ ಬುಲ್‌ಡೋಜರಿಸಿದ್ದು
ಅನಾಮಿಕ ಹಕ್ಕಿಗಳನ್ನು
ಮುಗಿಲಿನೇಕಾಂತವನ್ನು ಅನಾಥಿಸಿದ್ದು
ನೋಡಿ
ದಿಕ್ಕು ದಿಕ್ಕಿಗೆ ದಿಕ್ಕೆಟ್ಟು ಓಡುವ
ಹುಲ್ಲೆಯಂತೆ
ನನ್ನ ಗಂಟಲಾರಿ ಉಸಿರು ಸಿಕ್ಕು
ಕರಾಳದಿನ ಹೊತ್ತಿ
ಶೂನ್ಯಕ್ಕೇ ಏರಿಳಿದಂತಾಗಿದ್ದೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...