Home / ಕವನ / ಕವಿತೆ / ಮರ ಮತ್ತು ಹುಲ್ಲೆ

ಮರ ಮತ್ತು ಹುಲ್ಲೆ

ಮಳೆಯಲ್ಲಿ ಎಲ್ಲಬಾಗಿಲು ಹಾಕಿಕೊಂಡೋ
ಚಳಿಯಲ್ಲಿ ಬೆಚ್ಚನೆಯ ಶಾಲು ಹೊದ್ದುಕೊಂಡೋ
ಕವನಗಳು ಸುರಿಸುವಂತೆ
ಈ ಬೇಸಗೆಯೆ ಬಸಿಲಿನ
ಮುಂಜಾವು ಮುಸ್ಸಂಜೆಯಲ್ಲಿಯೂ
ನಾನೇ ನೀರೆರದು ಬೆಳೆಸಿದ ಮರಗಳ
ಸಾಲಿನಲ್ಲಿ ಕುಳಿತು.
ಅದರ ಮೇಲೆ ವರ್ಷ ವರ್ಷಗಳವರಗೆ
ಚಿಲಿಪಿಲಿಸಿದ ಹಕ್ಕಿಗಳ
ಚಳಿಯಲ್ಲಿ ಉದುರುವ ಎಲೆಗಳ
ಚೈತ್ರದಲ್ಲಿ ಚೈತ್ರಿಸುವ ಚಿಗುರುಗಳ
ವಸಂತದಲ್ಲಿ ಕಾಮನ ಬಿಲ್ಲಿನ ಚೂರು ಹೂಗಳಲ್ಲಿ
ಸ್ಪಂದಿಸುತ್ತ
ನಿನ್ನ ನೆರಳಲ್ಲಿ ಬೆಳೆದ ಹೂ ಮೊಗ್ಗುಗಳ
ಹುಲ್ಲು, ಮಂಜು ಮುಸುಕು ಕುರಿತು
ನನ್ನ ಹೃದಯದ ಮೂಲಕ ನಿನ್ನೊಂದಿಗೆ ಚರ್ಚಿಸಿ
ಏನೆಲ್ಲ ಬರೆಯಬೇಕೆಂದು
ದೂರದ ಊರಿನಿಂದ ಮರಳಿದ್ದೆ
ಆದರೆ ಆಗಲೇ –
ನಿಷ್ಕರುಣೆಯ ಬಲಿಷ್ಟ ಕೈಗಳು
ಸಲಗದಂತಾಗಿ ನಿನ್ನನ್ನು
ಶಸ್ತ್ರಿಸಿದ್ದು ಅಷ್ಟೇ ಅಲ್ಲ ಬುಲ್‌ಡೋಜರಿಸಿದ್ದು
ಅನಾಮಿಕ ಹಕ್ಕಿಗಳನ್ನು
ಮುಗಿಲಿನೇಕಾಂತವನ್ನು ಅನಾಥಿಸಿದ್ದು
ನೋಡಿ
ದಿಕ್ಕು ದಿಕ್ಕಿಗೆ ದಿಕ್ಕೆಟ್ಟು ಓಡುವ
ಹುಲ್ಲೆಯಂತೆ
ನನ್ನ ಗಂಟಲಾರಿ ಉಸಿರು ಸಿಕ್ಕು
ಕರಾಳದಿನ ಹೊತ್ತಿ
ಶೂನ್ಯಕ್ಕೇ ಏರಿಳಿದಂತಾಗಿದ್ದೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...