ಉತ್ತಮ ರಾಜ್ಯ

“ಕಂದ, ಕೇಳುತ್ತಮದ ರಾಜ್ಯ ಒಂದಿಹುದು:
ಮಂದಿ ಎಲ್ಲವು ಸುಖದಿ ಬಾಳುತ್ತಲಿಹುದು;”
ಎಂದು ನೀನಾಡುವಾ ರಾಜ್ಯವೆಲ್ಲಿಹುದು?
ಕಂದನಲಿ ಕರುಣಿಸುತ ಇಂದು ತಿಳಿಸಮ್ಮಾ!

“ಕಿತ್ತಳೆಯ ಮರಗಳಲಿ ಹೂಗಳರಳುತ್ತ
ಎತ್ತಲೂ ಮಿಂಚುಹುಳು ಚಿಮ್ಮಿ ಕುಣಿಯುತ್ತ,
ಮುತ್ತಿಕೊಂಡಿಹ ದೇಶದೊಳಗಿಹುದೆ ತಾಯೆ!”
“ಅತ್ತಲಿಲ್ಲಾ ರಾಜ್ಯ, ಅತ್ತಲಿಲ್ಲಣುಗಾ!”

“ತಾಳೆಗಳು ಬೆಳೆದು, ಖರ್‍ಜೂರದಲಿ ಹಣ್ಣು
ಜೋಲುತಿಹ ಬಿಸಿಲ ಸೀಮೆಯಲಿ ನೆಲಸಿಹುದೇ?
ಆಲಿಗಳಿಗಚ್ಚ ಹಸುರಾಗಿ ಸೊಗಸುತ್ತಾ
ಸಾಲು ಸಾಲಾಗೆಸೆದು ಸಾಗರದ ನಡುವೆ?-

“ಹಳುವಗಳ ಪರಿಮಳವ ಗಾಳಿಗೊಪ್ಪಿಸುತ್ತಾ,
ಹಲವು ಬಣ್ಣದ ಗರಿಯ ಪಕ್ಷಿ ಸಂಕುಲದಿ
ತೊಳಗುವಾ ದ್ವೀಪಂಗಳಲ್ಲಿಹುದೆ? ತಾಯೆ!”
“ಎಲೆ ಮಗುವೆ! ಕೇಳ್, ಅತ್ತಲಿಲ್ಲತ್ತಲಿಲ್ಲ.”

“ಹೊಳೆವ ಹೊನ್ನಿನ ಮರಳ ಮೇಲೆ ಹೊಳೆ ಹರಿವ,
ತೊಳಗುತಿಹ ಕೆಂಪುಗಳ ಕೆಂಬೆಳಗನುಗುಳ್ವ,
ತಳಿತಳಿಪ ವಜ್ರಗಳ ಗಣಿಗಳಿಂದೆಸೆವ
ತಿಳಿಮುತ್ತುಗಳ ನಗೆಯ ಬೆಳಕಿಂದ ಹೊಳೆವ-

“ಜಲದೊಳಗೆ ನೆಲೆಗೊಂಡ ಹವಳಗಳ ಕೆಳಗೆ
ತಳಿರ ಬಣ್ಣವ ತಳೆದ ಸಾಗರದ ನಡುವೆ
ಹೊಳೆವ ದ್ವೀಪಂಗಳಲಿ ನೆಲಸಿಹುದೆ? ತಾಯೆ!”
“ಎಲೆ ಮಗುವೆ! ಕೇಳತ್ತಲಿಲ್ಲತ್ತಲಿಲ್ಲ.

“ಅದರ ಸೊಗಸಿನ ಸಿರಿಯ ಕಣ್ಣು ಕಂಡಿಲ್ಲ.
ಅದರ ಗಾನದ ಸವಿಯ ಕಿವಿಯು ಕೇಳಿಲ್ಲ.
ಅದರಂದವನು ಕನಸು ಕಂಡರಿದುದಿಲ್ಲ.
ಅದರ ನೆಲೆಯನು ಸಾವು ನೋವರಿದುದಿಲ್ಲ.

“ಎಂದೆಂದುಮಾ ಪರಮರಾಜ್ಯ ವಿಭವಗಳು.
ಕುಂದುಕೊರತೆಗೆ ಸಿಲುಕದೊಂದೆ ತೆರವಿಹವು.
ಕಂದ! ಕೇಳದು ಸಾವಿನಿಂದತ್ತಲತ್ತ
ನಿಂದು ತಾನನಿಗಾಲ ಎಸೆದೊಪ್ಪುತ್ತಿಹುದು.”
*****
(ಕವಿಶಿಷ್ಯ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಂತುಳಿಸುವುದೋ? ರೈತಾತ್ಮ ಶಕ್ತಿಯನು
Next post ಸೋಫೋಕ್ಲೀಸ್‌ನ Oedipus Rex- ಪುನರಾವರ್ತನೆ ಮತ್ತು ಅಂಗೀಕಾರ ತತ್ವಗಳ ವಿಸ್ತೃತತೆ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…