ಗಾಳಿಪಟ

ಏರುವ ಎತ್ತರಕೆ ಬಾನೆ ಗುರಿ
ಹಾರುವ ಬಯಕೆಗೆ ದಾರ ಮಿತಿ!

ಭಾರ ಹೇರಿ ತೂಗುವ
ನೂರೆಂಟು ಬಾಲಂಗೋಚಿಗಳು
ನುಗ್ಗುವ ಉತ್ಸಾಹಕೆ
ಎದುರಾಗುವ ಆಳೆತ್ತರ ಗೋಡೆಗಳು!

ಗುರುತ್ವಾಕರ್ಷಣೆಯ ಎದೆಗೊದ್ದು
ಅಟ್ಟಹಾಸದಿ ಮೇಲೇರಿ ಹಾರಿ
ಮೆರೆವ ಬಯಕೆಗೆ
ಅಡ್ಡಿ ಸೂತ್ರಧಾರಿ
ಕೆಲಸಕ್ಕೆ ಬಾರದ ವ್ಯರ್ಥ
ಪ್ರಯತ್ನಗಳು ಯಾವ ಕೆಲಸಕ್ಕೆ?
ಮೈ ಮರೆತರೆ ಮೊಟ್ಟುವ, ಮೆಟ್ಟುವ
ನಾಜೂಕು ನೂಲು
ಎಲ್ಲೆ ಮೀರುವ ಬಯಕೆಯ ಸೋಲು
ಸೂತ್ರ ಕಿತ್ತೊಗೆದು
ವಿಸ್ತಾರ ದಿಗಂತ ತಬ್ಬುವ ತುಡಿತ
ಮನಃಪಟಲದಲಿ ರೆಕ್ಕೆ ಕಳಚಿ
ಬೋಡಾದ ಮಳೆಹುಳು
ನೆಲವನಪ್ಪಿ ವಿಲವಿಲನೆ
ಒದ್ದಾಡುವ ಚಿತ್ರ

ಮಿತಿಮೀರುವ
ಮಿತಿಮೀರಲಾಗದ
ತುಮುಲಗಳ ಗೊಂದಲ
ಏನೊಂದೂ ನಿರ್ಧರಿಸಲಾಗದೇ
ಮನ ಚಂಚಲ
ಪುಟಿದೇಳುವ ಉತ್ಸಾಹ
ಕೆಳದಬ್ಬಿ ತುಳಿವ ರಾಕ್ಷಸೀ
ಕ್ರೌರ್ಯದ ಮಧ್ಯೆ
ಅಡ್ಡಗಾಲಿಡುವ ಲಕ್ಷ್ಮಣರೇಖೆ
ದ್ವಂದ್ವದಲಿ ಸಿಕ್ಕು ಸದಾ ತ್ರಿಶಂಕು ಸ್ವರ್ಗ!

ಏರುವ ಎತ್ತರಕೆ ಬಾನೆ ಗುರಿ
ಹಾರುವ ಬಯಕೆಗೆ ದಾರ ಮಿತಿ!
*****

ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸರ್ವನಾಮಪ್ರಿಯ
Next post ಕನಸುವ ಹಕ್ಕಿ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…