Home / ಕವನ / ಕವಿತೆ / ಗಾಳಿಪಟ

ಗಾಳಿಪಟ

ಏರುವ ಎತ್ತರಕೆ ಬಾನೆ ಗುರಿ
ಹಾರುವ ಬಯಕೆಗೆ ದಾರ ಮಿತಿ!

ಭಾರ ಹೇರಿ ತೂಗುವ
ನೂರೆಂಟು ಬಾಲಂಗೋಚಿಗಳು
ನುಗ್ಗುವ ಉತ್ಸಾಹಕೆ
ಎದುರಾಗುವ ಆಳೆತ್ತರ ಗೋಡೆಗಳು!

ಗುರುತ್ವಾಕರ್ಷಣೆಯ ಎದೆಗೊದ್ದು
ಅಟ್ಟಹಾಸದಿ ಮೇಲೇರಿ ಹಾರಿ
ಮೆರೆವ ಬಯಕೆಗೆ
ಅಡ್ಡಿ ಸೂತ್ರಧಾರಿ
ಕೆಲಸಕ್ಕೆ ಬಾರದ ವ್ಯರ್ಥ
ಪ್ರಯತ್ನಗಳು ಯಾವ ಕೆಲಸಕ್ಕೆ?
ಮೈ ಮರೆತರೆ ಮೊಟ್ಟುವ, ಮೆಟ್ಟುವ
ನಾಜೂಕು ನೂಲು
ಎಲ್ಲೆ ಮೀರುವ ಬಯಕೆಯ ಸೋಲು
ಸೂತ್ರ ಕಿತ್ತೊಗೆದು
ವಿಸ್ತಾರ ದಿಗಂತ ತಬ್ಬುವ ತುಡಿತ
ಮನಃಪಟಲದಲಿ ರೆಕ್ಕೆ ಕಳಚಿ
ಬೋಡಾದ ಮಳೆಹುಳು
ನೆಲವನಪ್ಪಿ ವಿಲವಿಲನೆ
ಒದ್ದಾಡುವ ಚಿತ್ರ

ಮಿತಿಮೀರುವ
ಮಿತಿಮೀರಲಾಗದ
ತುಮುಲಗಳ ಗೊಂದಲ
ಏನೊಂದೂ ನಿರ್ಧರಿಸಲಾಗದೇ
ಮನ ಚಂಚಲ
ಪುಟಿದೇಳುವ ಉತ್ಸಾಹ
ಕೆಳದಬ್ಬಿ ತುಳಿವ ರಾಕ್ಷಸೀ
ಕ್ರೌರ್ಯದ ಮಧ್ಯೆ
ಅಡ್ಡಗಾಲಿಡುವ ಲಕ್ಷ್ಮಣರೇಖೆ
ದ್ವಂದ್ವದಲಿ ಸಿಕ್ಕು ಸದಾ ತ್ರಿಶಂಕು ಸ್ವರ್ಗ!

ಏರುವ ಎತ್ತರಕೆ ಬಾನೆ ಗುರಿ
ಹಾರುವ ಬಯಕೆಗೆ ದಾರ ಮಿತಿ!
*****

ಕಿಶೋರ್‍ ಚಂದ್ರ
Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...