ನೋಡಿ ಅಲ್ಲಿದ್ದಾರಲ್ಲಾ ಅವರ ಹೆಸರು ಟಿ.ಪಿ. ಅಶೋಕ
ಅವರೇ ಕಣ್ರೀ ಕನ್ನಡ ಸಾಹಿತ್ಯದ ಸುಪ್ರಸಿದ್ಧ ವಿಮರ್ಶಕ
ಮೇಲಿನ ಕೂದಲು ಉದುರಿ ಬಾಲ್ಡ್ ಆಗಿರೋದ್ರ ಬಗ್ಗೆ ಬೇಕಾಗಿಲ್ಲ ಶೋಕ
ಥಳಾಥಳಾ ಹೊಳೆಯೋದರ ಒಳಗೆ, ಒಳಗಿದೆ ನೋಡಿ ಪ್ಯೂರ್ಗೋಲ್ಡ್,
ಒಳ್ಳೇ ಹದನಾದ ವೈಚಾರಿಕ ಪಾಕ
ಚಕ್ರವರ್ತಿ ಆ ಅಶೋಕ ಬುದ್ದಿಸಂ ಒಪ್ಪಿ ಸಾಮ್ರಾಜ್ಯ
ವಿಸ್ತರಣೆಯನ್ನು, ಕೈ ಬಿಟ್ಟು ಸಂಪಾದಿಸಿದರೆ ಅಜರಾಮರ ಕೀರ್ತಿ
ಬುದ್ದಿಜೀವಿ ಈ ಅಶೋಕ ರಾಜ್ಯದಾದ್ಯಂತ ನೀನಾಸಂ ವಿಸ್ತರಿಸಿ
ಆಗಿಬಿಟ್ಟಿದ್ದಾರೆ ನೋಡಿ ರಸಗ್ರಹಣ ಶಿಬಿರ ಚಕ್ರವರ್ತಿ.
*****