Home / ಕವನ / ಕವಿತೆ / ಕರಾಳ ಬಾಯಿ

ಕರಾಳ ಬಾಯಿ

ಮಹಾ ಭೀಕರ ಕರಾಳ ಬಾಯಿ
ಯಾವುದೋ ಬಗೆಯಲ್ಲಿ ಕಬಳಿಸಬಹುದು
ಈ ಬಣ್ಣ ಬಣ್ಣದ ಮಾಯದ ಬದುಕನ್ನು
ಅಸಂಖ್ಯ ಧ್ವನಿಗಳು ಪ್ರಾಣಗಳೊಡನೆ
ಭೂಮಿಯೊಳಗೆ ಅಡಗುತ್ತವೆ
ಭೀಕರ ಬಾಯಿಯ ಸ್ವಾಟೆಯೊಳಗಿಂದ
ಉಳಿದು ಜಾರಿದ ಜೊಲ್ಲಿನಂತೆ
ಕೆಲವು ಆಕ್ರಂದನ ಧ್ವನಿಗಳು ಉಳಿಯುತ್ತವೆ
ತಣ್ಣಗಿನ ಉಪ್ಪು ನೀರು ಮೇರೆ ಮೀರಿ
ತನ್ನ ಕಪ್ಪು ನಾಲಗೆಯ ಚಾಚಿ
ದಂಡೆಗಳ ಜೀವರಾಶಿಗಳ
ಸುರ್ರೆಂದು ಸೆಳೆದುಕೊಳ್ಳಬಹುದು
ತನ್ನೊಡಲೊಳಗೆ
ಹೆಣಗಳು ಚೆಲ್ಲಾಪಿಲ್ಲಿ ದುರ್ವಾಸನೆ
ಅಗೋಚರ ರೋಗಪಾಶಗಳು
ಸಾಂಕ್ರಾಮಿಕ ನುಂಗಬಹುದು
ಊರು ಸೀಮೆಗಳ ಮಸಣ ಮಾಡಿ
ಕಾಳ್ಗಿಚ್ಚು ಕೆರಳಬಹುದು
ಅಡವಿಗಳು ಸಾಲದೆ ಊರುಗಳನ್ನು
ಚಪ್ಪರಿಸಿ ಕಬಳಿಸಬಹುದು
ಯುದ್ಧಗಳು ಬದ್ಧದ್ವೇಷಗಳು
ಬಾಂಬು ಬೀಜಗಳ ಬಿತ್ತಿ
ಬೆಳೆಯಬಹುದು ಹೆಣದ ಬಣವೆಗಳ
ನಂದನವನದ ನೆಲವಾಗುವುದು
ಕೆಂಡಬೂದಿಗಳ ಸುಡುಗಾಡು
ವಿಷಾನಿಲಗಳು ಉಸಿರುಕಟ್ಟಿಸಬಹುದು
ಮೇಲಿಂದ ಮೇಲೆ ಅಗೋಚರ ಆಪತ್ತುಗಳು
ಎರಗಬಹುದು ಬೆಚ್ಚಿಗಿನ ಬದುಕಿನ ಮೇಲೆ
ಮಾಡಬಹುದು ಜೀವಾಂಡ ಬ್ರಹಾಂಡವ
ಒಣ ಹುಡಿ ಬರಡು ಗ್ರಹದುಂಡೆ
ಅಬ್ಬಾ ಈ ಕಪ್ಪು ಕೈ ಕರಾಳ ಬಾಯಿ
ಅದೆಷ್ಟು ಕ್ರೂರ ಕಠೋರ
ನಿರ್ದಯ ನೀರವ
ಅಗೋಚರ ಅನಿರೀಕ್ಷಿತ ಅನಿವಾರ್ಯ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...