ಕರಾಳ ಬಾಯಿ

ಮಹಾ ಭೀಕರ ಕರಾಳ ಬಾಯಿ
ಯಾವುದೋ ಬಗೆಯಲ್ಲಿ ಕಬಳಿಸಬಹುದು
ಈ ಬಣ್ಣ ಬಣ್ಣದ ಮಾಯದ ಬದುಕನ್ನು
ಅಸಂಖ್ಯ ಧ್ವನಿಗಳು ಪ್ರಾಣಗಳೊಡನೆ
ಭೂಮಿಯೊಳಗೆ ಅಡಗುತ್ತವೆ
ಭೀಕರ ಬಾಯಿಯ ಸ್ವಾಟೆಯೊಳಗಿಂದ
ಉಳಿದು ಜಾರಿದ ಜೊಲ್ಲಿನಂತೆ
ಕೆಲವು ಆಕ್ರಂದನ ಧ್ವನಿಗಳು ಉಳಿಯುತ್ತವೆ
ತಣ್ಣಗಿನ ಉಪ್ಪು ನೀರು ಮೇರೆ ಮೀರಿ
ತನ್ನ ಕಪ್ಪು ನಾಲಗೆಯ ಚಾಚಿ
ದಂಡೆಗಳ ಜೀವರಾಶಿಗಳ
ಸುರ್ರೆಂದು ಸೆಳೆದುಕೊಳ್ಳಬಹುದು
ತನ್ನೊಡಲೊಳಗೆ
ಹೆಣಗಳು ಚೆಲ್ಲಾಪಿಲ್ಲಿ ದುರ್ವಾಸನೆ
ಅಗೋಚರ ರೋಗಪಾಶಗಳು
ಸಾಂಕ್ರಾಮಿಕ ನುಂಗಬಹುದು
ಊರು ಸೀಮೆಗಳ ಮಸಣ ಮಾಡಿ
ಕಾಳ್ಗಿಚ್ಚು ಕೆರಳಬಹುದು
ಅಡವಿಗಳು ಸಾಲದೆ ಊರುಗಳನ್ನು
ಚಪ್ಪರಿಸಿ ಕಬಳಿಸಬಹುದು
ಯುದ್ಧಗಳು ಬದ್ಧದ್ವೇಷಗಳು
ಬಾಂಬು ಬೀಜಗಳ ಬಿತ್ತಿ
ಬೆಳೆಯಬಹುದು ಹೆಣದ ಬಣವೆಗಳ
ನಂದನವನದ ನೆಲವಾಗುವುದು
ಕೆಂಡಬೂದಿಗಳ ಸುಡುಗಾಡು
ವಿಷಾನಿಲಗಳು ಉಸಿರುಕಟ್ಟಿಸಬಹುದು
ಮೇಲಿಂದ ಮೇಲೆ ಅಗೋಚರ ಆಪತ್ತುಗಳು
ಎರಗಬಹುದು ಬೆಚ್ಚಿಗಿನ ಬದುಕಿನ ಮೇಲೆ
ಮಾಡಬಹುದು ಜೀವಾಂಡ ಬ್ರಹಾಂಡವ
ಒಣ ಹುಡಿ ಬರಡು ಗ್ರಹದುಂಡೆ
ಅಬ್ಬಾ ಈ ಕಪ್ಪು ಕೈ ಕರಾಳ ಬಾಯಿ
ಅದೆಷ್ಟು ಕ್ರೂರ ಕಠೋರ
ನಿರ್ದಯ ನೀರವ
ಅಗೋಚರ ಅನಿರೀಕ್ಷಿತ ಅನಿವಾರ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುಗಾದಿ
Next post ಟಿ ಪಿ ಅಶೋಕ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…