ಮಹಾ ಭೀಕರ ಕರಾಳ ಬಾಯಿ
ಯಾವುದೋ ಬಗೆಯಲ್ಲಿ ಕಬಳಿಸಬಹುದು
ಈ ಬಣ್ಣ ಬಣ್ಣದ ಮಾಯದ ಬದುಕನ್ನು
ಅಸಂಖ್ಯ ಧ್ವನಿಗಳು ಪ್ರಾಣಗಳೊಡನೆ
ಭೂಮಿಯೊಳಗೆ ಅಡಗುತ್ತವೆ
ಭೀಕರ ಬಾಯಿಯ ಸ್ವಾಟೆಯೊಳಗಿಂದ
ಉಳಿದು ಜಾರಿದ ಜೊಲ್ಲಿನಂತೆ
ಕೆಲವು ಆಕ್ರಂದನ ಧ್ವನಿಗಳು ಉಳಿಯುತ್ತವೆ
ತಣ್ಣಗಿನ ಉಪ್ಪು ನೀರು ಮೇರೆ ಮೀರಿ
ತನ್ನ ಕಪ್ಪು ನಾಲಗೆಯ ಚಾಚಿ
ದಂಡೆಗಳ ಜೀವರಾಶಿಗಳ
ಸುರ್ರೆಂದು ಸೆಳೆದುಕೊಳ್ಳಬಹುದು
ತನ್ನೊಡಲೊಳಗೆ
ಹೆಣಗಳು ಚೆಲ್ಲಾಪಿಲ್ಲಿ ದುರ್ವಾಸನೆ
ಅಗೋಚರ ರೋಗಪಾಶಗಳು
ಸಾಂಕ್ರಾಮಿಕ ನುಂಗಬಹುದು
ಊರು ಸೀಮೆಗಳ ಮಸಣ ಮಾಡಿ
ಕಾಳ್ಗಿಚ್ಚು ಕೆರಳಬಹುದು
ಅಡವಿಗಳು ಸಾಲದೆ ಊರುಗಳನ್ನು
ಚಪ್ಪರಿಸಿ ಕಬಳಿಸಬಹುದು
ಯುದ್ಧಗಳು ಬದ್ಧದ್ವೇಷಗಳು
ಬಾಂಬು ಬೀಜಗಳ ಬಿತ್ತಿ
ಬೆಳೆಯಬಹುದು ಹೆಣದ ಬಣವೆಗಳ
ನಂದನವನದ ನೆಲವಾಗುವುದು
ಕೆಂಡಬೂದಿಗಳ ಸುಡುಗಾಡು
ವಿಷಾನಿಲಗಳು ಉಸಿರುಕಟ್ಟಿಸಬಹುದು
ಮೇಲಿಂದ ಮೇಲೆ ಅಗೋಚರ ಆಪತ್ತುಗಳು
ಎರಗಬಹುದು ಬೆಚ್ಚಿಗಿನ ಬದುಕಿನ ಮೇಲೆ
ಮಾಡಬಹುದು ಜೀವಾಂಡ ಬ್ರಹಾಂಡವ
ಒಣ ಹುಡಿ ಬರಡು ಗ್ರಹದುಂಡೆ
ಅಬ್ಬಾ ಈ ಕಪ್ಪು ಕೈ ಕರಾಳ ಬಾಯಿ
ಅದೆಷ್ಟು ಕ್ರೂರ ಕಠೋರ
ನಿರ್ದಯ ನೀರವ
ಅಗೋಚರ ಅನಿರೀಕ್ಷಿತ ಅನಿವಾರ್ಯ
*****
Related Post
ಸಣ್ಣ ಕತೆ
-
ಪ್ರಥಮ ದರ್ಶನದ ಪ್ರೇಮ
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…
-
ನಂಟಿನ ಕೊನೆಯ ಬಲ್ಲವರಾರು?
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…
-
ಹೃದಯದ ತೀರ್ಪು
ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…
-
ಅಜ್ಜಿ-ಮೊಮ್ಮಗ
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…