Home / ಕವನ / ಕವಿತೆ / ಪ್ಯಾರಿ ನಗರ

ಪ್ಯಾರಿ ನಗರ

ಫ್ರೆಂಚ್ ಕ್ರಾಂತಿಯ
ಅರುಸೊತ್ತಿಗೆಗಳ ವೈಭವದ ದಾಖಲೆಗಳ
ಸ್ತಂಭಗಳಡಿಯಲಿ ಭೀಭತ್ಸ ರಕ್ತದ
ವಾಸನೆಯ ಗೊರಲಿಗಳು
ಶತ ಶತಮಾನಕ್ಕೂ ಕಥೆಗಳನ್ನು ಹೇಳುತ್ತಲೇ ಇವೆ.
ಚಕ್ರವರ್ತಿಗಳ ದರ್ಪ, ಅರಮನೆ
ಓಪೆರಾ, ಕಾನಕಾರ್ಡ್ ಚೌಕ ನೋಡುತ್ತಿದ್ದಂತೆಯೇ
ಐಫಲ್ ಟವರ್‌ದ ತುತ್ತ ತುದಿಗೇರುತ್ತೇನೆ.
ಮೋನಾಲಿಸಾ ನಗುತ್ತಾಳೆ
ಯಾರಿವಳು ಎಂದು ದಿಟ್ಟಿಸಿ ನೋಡುವಾಗ
ಸೊಕ್ಕಿನ ಮೃದು ಹೆಣ್ಣಾಗಿ ಗಂಭೀರವಾಗುತ್ತಾಳೆ.
ಚರ್ಚಿನ ಪಾದ್ರಿಗಳು ಬೆಚ್ಚನೆಯ ಉದ್ದನೆಯ
ಬಟ್ಟೆಯೊಳಗೆ, ತಿಳಿ ಬೆಳಕಿನ ಕಿರಣಗಳೊಳಗೆ
ಮಾನವೀಯತೆಯ ಮೇರುತ್ವ ಹೇಳುತ್ತಿದ್ದರೆ
ಕಲಾಕಾರರು ನೆಳಲು ಬೆಳಕಿನೊಳಗೆ
ಅರೆನಗ್ನ ಚಿತ್ರಗಳ. ನಿಸರ್ಗಗಳ
ಕಲ್ಪನಾತೀತ ಮಿಂಚುಗಳನ್ನು ಹರೆಯಿಸಿದ್ದಾರೆ.
ಝಗ ಝಗಿಸುವ ‘ಶ್ಯಾಸ್’
ಫ್ಯಾಶನ್‌ಹೌಸ್ ಸುಗಂಧ ಹೊಳೆಯೊಂದಿಗೆ
ತೇಲುವ ಸೀಮೋಲ್ಲಂಘನ
ವಿಜ್ಞಾನ ತಂತ್ರಜ್ಞಾನಗಳಿರುವಾಗ
ಮತ್ತೊಂದೆಡೆ ಜಿಗುಪ್ಸಿಸುವ
ಕ್ಯಾಬರೆಗಳಲ್ಲಿ ಮೈಮರೆತ
ಜನರನ್ನು ನೋಡಿ ನಮ್ಮ
ಮುದಿ ಯಕ್ಷಗಂಧರ್ವರೂ
ಮೇನಕಾ ತಿಲೋತ್ತಮೆಯರೂ
ನಾಚಿ ಹೊಟ್ಟೆ ಉರಿಸಿಕೊಳ್ಳುತ್ತಾರೇನೋ –

ಬೆಳಕಿಗೆ ಕರಗದ ಬಜಾರುಗಳು ನೋಡಿ
ಸುಸ್ತಾದ ಸೂರ್ಯ
ತಾನೂ ನಾಚಿಕೆ ಬಿಟ್ಟು
ಗಿಡಮರಗಳ ಸಂದಿಗೊಂದಿಗಳೊಳಗಿಂದ ಹಾಯ್ದು
ಕನ್ನೆಯರ ಕೆನ್ನೆ ಕಚ್ಚುತ್ತಾ
‘ತೆರಿ ಪ್ಯಾರಿ ಪ್ಯಾರಿ ಪ್ಯಾರಿಸ್ ಸೂರತ್ ಕೋ’
ಎಂದು ಕಣ್ಣುಹೊಡೆದು
ಸಿಳ್ಳು ಹೊಡೆಯುತ್ತ ತಿರುಗುತ್ತಿದ್ದಾನೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...