Home / ಕವನ / ಕವಿತೆ / ಕವಿ – ಕವಿ ಪತ್ನಿಯ ಸಂವಾದ

ಕವಿ – ಕವಿ ಪತ್ನಿಯ ಸಂವಾದ

ಕವಿಯ ಪತ್ನಿ: ಏನಾಗ್ಯದ ನೋಡೀರಾ
ಸ್ವಲ್ಪನಽಽ ಅದನ ಮೈಮ್ಯಾಲೆ ಖಬರ
ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣು ಬಾರಾ
ತಿಳೀತು ನನಗ
ಖಯಾಲಿಯೊಳಗ ಇದ್ದಿರಬೇಕು
ನೆಲ ನೋಡದ ಆಕಾಶದ ಕಡೆ
ದೃಷ್ಟಿ ನೆಟ್ಟಿರಬಹುದು
ಅಥವಾ ಯಾವುದರ ಹೂವು ಕಂಡಿರಬೇಕು
ಪಕಳೆಗಳ ನೋಡುತ್ತ ಮೈಮರೆತು ನಿಂತಿರಬೇಕು
ತೆರೆದು ಕಲ್ಪನಾ ಲೋಕ
ಹೊಕ್ಕು ಅದರೊಳಗ ವಿಹಾರ ಮಾಡಿರಬೇಕು
ನಾ ಕೊಟ್ಟ ಸಾಮಾನಿನ ಪಟ್ಟಿ ಥಟ್ಟನೆ ನೆನಪಾಗಿ
ಸರ್ರನೆ ನೀವು ಭೂಮಿಗೆ ಇಳಿದಿರಬೇಕು
ಸಿಗದೆ ಕಕ್ಕಾಬಿಕ್ಕಿಯಾಗಿ
ರಾಡಿಯೊಳಗ ಜಾರಿ ಬಿದ್ದಿರಬೇಕು
ಏನು ಮಾಡಲಿ ಎಲ್ಲಾ ನನ್ನ ಹಣೇಬಾರಾ
ಎಷ್ಟು ಹಚ್ಚಿದ್ದೆ ಸಾಬೂಣು ಬಾರಾ

ಕವಿ: ಸುಮ್ಮನಾಗು ಮಾರಾಯ್ತಿ ಗುಟ್ಟಾಗಿ ಹೇಳ್ತೀನಿ
ರಟ್ಟಾದರ ನಮ್ಮ ಮರ್‍ಯಾದಿ ಪ್ರಷ್ನಿ
ಹೊರಟಿದ್ದೆ ಹಿಡಿದು ನಂದಾರಿ
ನೀನಂದದ್ದು ನೆನಪಿನೊಳಗಿಟ್ಟು
ಕವಿತೆ ರಚಿಸುವ ಗೀಳು ಬಿಟ್ಟು
ಸೀದಾ ರಸ್ತೆ ಮ್ಯಾಲೆ ನನ್ನ ಕಣ್ಣು ನೆಟ್ಟು
ಮಾಡಲಿಲ್ಲ ಕವಿತೆಗೆ ವಿಷಯ ಹುಡುಕೋ ಉಸಾಬರಿ
ಅರಳಿದರ ಅರಳಲಿ ಹೂವು
ಕೆರಳಿದರೆ ಕೆರಳಲಿ ಭಾವ
ಇದ್ದರೆ ಇರಲಿ ರಮ್ಯ ಸೂರ್‍ಯಾಸ್ತ!
ಅದು ಇಂದಿನದೇನಲ್ಲ
ನಾಳೆ ಇಲ್ಲವೆಂದಿಲ್ಲ
ಮುಗಿಯಲಿ ಮೊದಲು ಬಂದ ಕೆಲಸ ಅಂತ ಸಾಗಿದ್ದೆ
ಆಗ ಎಲ್ಲಿಂದಲೋ ಬಂದ
ಒಬ್ಬ ತುಂಟ ಪೋರಾ
ಬಿರಬಿರನೆ ಹೆಜ್ಜೆ ಹಾಕಿದರೂ ಬಂದ ಹತ್ತಿರ
ಬಂದವನೇ ಎಸೆದ ತನ್ನ ಮುಷ್ಟಿಯೊಳಗಿನ ಮಣ್ಣು
ನಂಬಲಾರದಾದವು ನನ್ನ ಕಣ್ಣು
ತಬ್ಬಿಬ್ಬಾಗಿ ಕೇಳಿದೆ ಪೋರನನ್ನು
ನಾನೇನು ಮಾಡಿದೆ ಎಂದು ಕೊಳೆ ಮಾಡಿದಿ
ನಾ ಧರಿಸಿದ ಉಡುಪು
ಏನು ಹೇಳಲಿ ನನ್ನ ಮನೆಯಾಕೆಗೆ
ಸಾಬೂನಿನ ಜೊತೆ ಶುಭ್ರ
ಪ್ರೀತಿಯನು ಹಚ್ಚಿ ಒಗೆದಿದ್ದಳು
ಹೇಗೆ ಹೋಗಬೇಕು ಕಲೆ
ಅಂದರ ಏನನಬೇಕು ತುಂಟ ಪೋರ
“ಇರಲಿ ಕಡೀತನ ಈ ಕಲೆ
ಕವಿ ಅಲ್ಲವೆ ನೀವು –
ಕಲ್ಪನೆಯ ಕುದುರೆಯನೇರಿ
ಇಲ್ಲದನು ಬಣ್ಣಿಸುವ ಕಲೆ
ಅಲ್ಲವೆ ನಿಮಗೆ ಕರಗತ

ಸುಂದರಿಯರ ನೋಡಿ
ಇಂದುಮುಖಿ ಎಂದಿರಿ
ಕಾವ್ಯಗಳ ಪುಟಗಳಲಿ
ತುಂಬಿಸಿದಿರಿ ಚಂದಿರ
ಬೆಳದಿಂಗಳು ಕರ್‍ನೈದಿಲೆಗಳಿಂದ
ನೀವು ಹೇಳಿದ್ದು ಕೇಳಿ
ಬಾಯೊಳಗ ನೀರೂರಿ
ಹೋದೆ ಅಲ್ಲೀತನಕ
ಆಸ್ವಾದಿಸಲು ಸೌಂದರ್‍ಯ
ಆದರ ಅಲ್ಲಿ ಸಿಕ್ಕದ್ದೇನು
ನಿನ್ನ ಮ್ಯಾಲೆ ಎಸೆದ ಮಣ್ಣು”
ಅಂತ ಅನಬೇಕ
ಬಿಡಲಿಲ್ಲ ನಾನೂ
ಕೇಳಿದೆ ನೀನಿರೋದು ಎಲ್ಲೆ
ನಿನ್ನ ಹೆಸರೇನಂತ
“ನನ್ನ ಹೆಸರು ನೀಲ್ ಆರ್‍ಮ್ ಸ್ಟ್ರಾಂಗ್”-
ಅಂತ ಹೇಳಿ
ಓಡಬೇಕ ಮಿಂಚಿನ ವೇಗದಾಗ
ಸಿಗದ್ಹಾಂಗ ಕೈಗೆ
ಆದದ್ದು ಹೇಳ ಬ್ಯಾಡ ಮಾರಾಯ್ತಿ ಯಾರಿಗೂ
ಮನಸಿನಾಗೇ ಇಟ್ಕೋ
ಮರ್‍ಯಾದಿ ಪ್ರಶ್ನಿ
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...