Home / ಕಥೆ / ಕಿರು ಕಥೆ / ಜ್ಯೋರ್ತಿಗುರು

ಜ್ಯೋರ್ತಿಗುರು

ಶಿಷ್ಯನೊಬ್ಬ ಗುರುವನ್ನು ಹುಡುಕಿಹೊರಟಿದ್ದ. ವನದಲ್ಲಿ ಬಂದಾಗ ದೊಡ್ಡ ವೃಕ್ಷಗಳನ್ನು ನೋಡಿದ. ಶಾಖೆ ಶಾಖೆಯಲ್ಲಿ ಗೊಂಚಲು ಗೊಂಚಲು ಎಲೆ, ಹೂ, ಕಾಯಿ, ಫಲಗಳು. ಕಾಂಡದಲ್ಲಿ ಅತೀವ ಧೃಡತೆ, ಬೇರಿನಲ್ಲಿ ಅಸಾಧ್ಯಬಿಗಿ, ಹಿಡಿತ, ಜೀವಸಂಚಾರ ಎಲ್ಲವನ್ನೂ ಗ್ರಹಿಸಿದ, ಅಗಾಧವಾದ ಸಂತಸದಿಂದ ನಮಿಸಿ “ವೃಕ್ಷಗುರುವೇ ನಮಃ ಎಂದು ಧ್ಯಾನ ಮಾಡಿ ಮುಂದೆ ನಡೆದ.”

ಹೋಗುವ ದಾರಿಯಲ್ಲಿ ಒಂದು ಬಿದಿರಿನ ತೋಪು ಸಿಕ್ಕಿತು. ಬಳಲಿದ್ದ ಶಿಷ್ಯ, ವಿರಮಿಸಲು ಬಿದಿರಿನ ತೋಪಿನಲ್ಲಿ ಕುಳಿತ. ಒಂದು ಚಿಕ್ಕ ಬಿದಿರನ್ನು ಮುರಿದು ಏಳು ರಂಧ್ರಮಾಡಿ ಊದತೊಡಗಿದ. ನಾದದ ಸಪ್ತ ಸ್ವರ ತರಂಗದಲ್ಲಿ ಮುಳುಗಿದ. ನಾದ ಬ್ರಹ್ಮನಲ್ಲಿ ಲೀನನಾಗಿ ನಮಿಸಿ ಮುಂದೆ ಸಾಗಿದ.

ಝುಳು ಝುಳು ಎಂದು ನದಿಯೊಂದು ಹರಿಯುತಿತ್ತು. ಬೆಟ್ಟ ಗುಡ್ಡ ಧುಮುಕಿ, ಕಣಿವೆ ಕಂದರ ದಾಟಿ ಬರುತ್ತಿದ್ದ ನದಿಯ ದಡದಲ್ಲೇ ನಡೆದು ಬಂದ ಶಿಷ್ಯ. ಬಾಯಾರಿ ಬಳಲಿರಲು ಬೊಗಸೆಯಲ್ಲಿ ನದಿಯ ನೀರನ್ನು ಕುಡಿದು “ದಾಹ ತೀರಿಸಿದ ಗುರುವೆ ನಿನಗೆ ನದಿಯೆ ನಮೋ” ಎಂದು ಮುನ್ನಡೆದ.

ಹಾಗೇ ಬರುತ್ತಾ, ಒಂದು ಬೆಟ್ಟದ ಎದುರಲ್ಲಿ ಬಂದು ನಿಂತ. ಹರಿದಾಡುತ್ತಿದ್ದ ಮನವನ್ನು ಬೆಟ್ಟದ ದೃಢತೆಯಲ್ಲಿ ನಿಲ್ಲಿಸಿ ಧ್ಯಾನಗೈದ. ತನ್ನ ಅಂತರಂಗದಲ್ಲಿ ಜ್ಯೋರ್ತಿಗುರುವನ್ನು ಕಂಡ. ಕಣ್ಣು ತೆರೆದಾಗ ಬೆಟ್ಟದಡಿ ವಾಸವಾಗಿದ್ದ ಗುರುಗಳು ಬಂದು
“ನೀ ಇಲ್ಲಿಗೇಕೆ ಬಂದಿರುವೆ?” ಎಂದು ಕೇಳಿದರು.
“ನಾನು ಗುರುವನ್ನು ಹುಡುಕಿ ಬಂದಿರುವೆ” ಎಂದ ಶಿಷ್ಯ.
“ನೀನು ಬರುವ ಹಾದಿಯಲ್ಲಿ ನೀ ಸಂಧಿಸಿದವರಾರು?” ಎಂದು ಕೇಳಿದರು ಗುರುಗಳು. “ವೃಕ್ಷಗುರು, ಬಿದಿರಕೊಳಲಗುರು, ನದಿಯಗುರು ಕೊನೆಗೆ ಇಲ್ಲಿ ಧ್ಯಾನದಲ್ಲಿ ಅಂತರಂಗದ ಜ್ಯೋತಿರ್ ಗುರವನ್ನು ಕಂಡೆ” ಎಂದು ಹೇಳಿದ ಶಿಷ್ಯ. ಬಹಿರಂಗದಲ್ಲಿರುವ ಗುರುವನ್ನು, ನಿನ್ನಲ್ಲೇ ಇರುವ ಅಂತರಂಗದ ಗುರುವನ್ನು ನೀ ಕಂಡು ಕೊಂಡ ಮೇಲೆ, ಸರ್ವಂಗುರುಮಯಂ ಜಗತ್ ಆಗಿರುವಾಗ ಮತ್ತೆ ಏಕೆ ಗುರವನ್ನು ಹುಡುಕಿ ಹೊರಟಿರುವೆ?” ಎಂದರು ಗುರುಗಳು. ಇದನ್ನು ಅರಿವಿಗೆ ತಂದ ಗುರುಗಳ ನುಡಿಗೆ ನಮಿಸಿ ಶಿಷ್ಯ ಮುನ್ನಡೆದ.
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...