Home / ಕಥೆ / ಕಿರು ಕಥೆ / ಜ್ಯೋರ್ತಿಗುರು

ಜ್ಯೋರ್ತಿಗುರು

ಶಿಷ್ಯನೊಬ್ಬ ಗುರುವನ್ನು ಹುಡುಕಿಹೊರಟಿದ್ದ. ವನದಲ್ಲಿ ಬಂದಾಗ ದೊಡ್ಡ ವೃಕ್ಷಗಳನ್ನು ನೋಡಿದ. ಶಾಖೆ ಶಾಖೆಯಲ್ಲಿ ಗೊಂಚಲು ಗೊಂಚಲು ಎಲೆ, ಹೂ, ಕಾಯಿ, ಫಲಗಳು. ಕಾಂಡದಲ್ಲಿ ಅತೀವ ಧೃಡತೆ, ಬೇರಿನಲ್ಲಿ ಅಸಾಧ್ಯಬಿಗಿ, ಹಿಡಿತ, ಜೀವಸಂಚಾರ ಎಲ್ಲವನ್ನೂ ಗ್ರಹಿಸಿದ, ಅಗಾಧವಾದ ಸಂತಸದಿಂದ ನಮಿಸಿ “ವೃಕ್ಷಗುರುವೇ ನಮಃ ಎಂದು ಧ್ಯಾನ ಮಾಡಿ ಮುಂದೆ ನಡೆದ.”

ಹೋಗುವ ದಾರಿಯಲ್ಲಿ ಒಂದು ಬಿದಿರಿನ ತೋಪು ಸಿಕ್ಕಿತು. ಬಳಲಿದ್ದ ಶಿಷ್ಯ, ವಿರಮಿಸಲು ಬಿದಿರಿನ ತೋಪಿನಲ್ಲಿ ಕುಳಿತ. ಒಂದು ಚಿಕ್ಕ ಬಿದಿರನ್ನು ಮುರಿದು ಏಳು ರಂಧ್ರಮಾಡಿ ಊದತೊಡಗಿದ. ನಾದದ ಸಪ್ತ ಸ್ವರ ತರಂಗದಲ್ಲಿ ಮುಳುಗಿದ. ನಾದ ಬ್ರಹ್ಮನಲ್ಲಿ ಲೀನನಾಗಿ ನಮಿಸಿ ಮುಂದೆ ಸಾಗಿದ.

ಝುಳು ಝುಳು ಎಂದು ನದಿಯೊಂದು ಹರಿಯುತಿತ್ತು. ಬೆಟ್ಟ ಗುಡ್ಡ ಧುಮುಕಿ, ಕಣಿವೆ ಕಂದರ ದಾಟಿ ಬರುತ್ತಿದ್ದ ನದಿಯ ದಡದಲ್ಲೇ ನಡೆದು ಬಂದ ಶಿಷ್ಯ. ಬಾಯಾರಿ ಬಳಲಿರಲು ಬೊಗಸೆಯಲ್ಲಿ ನದಿಯ ನೀರನ್ನು ಕುಡಿದು “ದಾಹ ತೀರಿಸಿದ ಗುರುವೆ ನಿನಗೆ ನದಿಯೆ ನಮೋ” ಎಂದು ಮುನ್ನಡೆದ.

ಹಾಗೇ ಬರುತ್ತಾ, ಒಂದು ಬೆಟ್ಟದ ಎದುರಲ್ಲಿ ಬಂದು ನಿಂತ. ಹರಿದಾಡುತ್ತಿದ್ದ ಮನವನ್ನು ಬೆಟ್ಟದ ದೃಢತೆಯಲ್ಲಿ ನಿಲ್ಲಿಸಿ ಧ್ಯಾನಗೈದ. ತನ್ನ ಅಂತರಂಗದಲ್ಲಿ ಜ್ಯೋರ್ತಿಗುರುವನ್ನು ಕಂಡ. ಕಣ್ಣು ತೆರೆದಾಗ ಬೆಟ್ಟದಡಿ ವಾಸವಾಗಿದ್ದ ಗುರುಗಳು ಬಂದು
“ನೀ ಇಲ್ಲಿಗೇಕೆ ಬಂದಿರುವೆ?” ಎಂದು ಕೇಳಿದರು.
“ನಾನು ಗುರುವನ್ನು ಹುಡುಕಿ ಬಂದಿರುವೆ” ಎಂದ ಶಿಷ್ಯ.
“ನೀನು ಬರುವ ಹಾದಿಯಲ್ಲಿ ನೀ ಸಂಧಿಸಿದವರಾರು?” ಎಂದು ಕೇಳಿದರು ಗುರುಗಳು. “ವೃಕ್ಷಗುರು, ಬಿದಿರಕೊಳಲಗುರು, ನದಿಯಗುರು ಕೊನೆಗೆ ಇಲ್ಲಿ ಧ್ಯಾನದಲ್ಲಿ ಅಂತರಂಗದ ಜ್ಯೋತಿರ್ ಗುರವನ್ನು ಕಂಡೆ” ಎಂದು ಹೇಳಿದ ಶಿಷ್ಯ. ಬಹಿರಂಗದಲ್ಲಿರುವ ಗುರುವನ್ನು, ನಿನ್ನಲ್ಲೇ ಇರುವ ಅಂತರಂಗದ ಗುರುವನ್ನು ನೀ ಕಂಡು ಕೊಂಡ ಮೇಲೆ, ಸರ್ವಂಗುರುಮಯಂ ಜಗತ್ ಆಗಿರುವಾಗ ಮತ್ತೆ ಏಕೆ ಗುರವನ್ನು ಹುಡುಕಿ ಹೊರಟಿರುವೆ?” ಎಂದರು ಗುರುಗಳು. ಇದನ್ನು ಅರಿವಿಗೆ ತಂದ ಗುರುಗಳ ನುಡಿಗೆ ನಮಿಸಿ ಶಿಷ್ಯ ಮುನ್ನಡೆದ.
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...