Home / ಕವನ / ಕವಿತೆ / ಪೆಣ್ಣಿನ ಮಹಿಮೆಯು

ಪೆಣ್ಣಿನ ಮಹಿಮೆಯು

ಆಪವೆನಿಪುದು ನೀರು ಅದರಿಂಳಿಳಮಾನವಕೋಟಿ ಜನಿಸಿತು |
ಆಪಸಾಗರನಾಯ್ತು ನಾರಾಯಣ ಗಧಿಷ್ಠಾನಾ ||
ಆದಿಯೋಳಂಡದೊಳು ಗರ್ಭಿತಮಾಗಿ ಹರಿ ತಾಸಮಾಧಿಯೊಳಗಿರೆ
ಆದಿಲಕುಮಿಯು ಪ್ರಕೃತಿದೇವಿಯು ಪತಿಯ ಬಳಿಸಾರೆ || ೧ ||

ಆಗಲಾಗೆ ಸಮಾಧಿ ಭಂಗವು ಅಂಡಶೀಳಿತು ಅದರೊಳಿಹ ಹರಿ |
ನಾಭಿಯಿಂದಲಿ ಕಮಳವೆದ್ದಿತು ಮೇಲೆ ತಾನಾಗ ||
ಆಗಜಿಗಿಯಿತು ಮೂಲಜೋತಿಯು ಆಗಸದಿ ನೇಸರನಾಗಿ ಹೊಳೆಯಿತು |
ಆದಿನಾರಾಯಣನು ತನ್ನಯ ಲೀಲೆ ಪೂಡಿದನು || ೨ ||

ಕಮಳದಹೊಳ್ತಾವಿಧಿಯರೂಪದಿ ಹೊರಟ ತೇಜವು ನಾಲ್ಮೊಗವಪಡೆಯುತೆ |
ಕಮಳಸಂಭವನಾಗಿ ತೋರುತೆ ಸೃಷ್ಟಿ ನಿರ್ಮಿಸಿದ ||
ಪ್ರಕೃತಿಯಿಂ ಘಟಗಳನು ನಿರ್ಮಿಸಿ ಆತ್ಮರೂಪದ ತೇಜವದರೆೊಳು |
ವಿಕೃತಿಪೊಂದದೊಳಿರಿಸಿ ಜೀವನ ರಾಶಿ ಪುಟ್ಟಿಸಿದಾ || ೩ ||

ಪ್ರಕೃತಿರೂಪದ ಪೆಣ್ಣಿನ್ನೋಳ್ಹರಿ ಪುರುಷರೂಪದಿ ಮಿಳತನಾಗಲು |
ಪ್ರಕೃತಿ ಪುರುಷರ ಮಿಲನ ಲೀಲೆಯೆ ವಿಶ್ವವಿಸ್ತಾರಾ ||
ಪ್ರಕೃತಿ ರೂಪದ ಪೆಣ್ಣು ಕ್ಷೇತ್ರವು ಪುರುಷರೂಪದಿ ತೇಜ ಪಡೆಯುತೆ |
ಸಕೃತದೊಳ್ಫಲವೀಯೆ ಮಾನವ ಕೋಟಿ ಜನಿಸುವುದೂ || ೪ ||

ಪೆಣ್ಣು ಅಲ್ಲವೆ ನಮ್ಮಪೆತ್ತಿಹ ಮಾತೆ ಜಗದೊಳು ನಮ್ಮಪೊರೆದಳು |
ಪೆಣ್ಣ ಮಹಿಮೆಯನರಿಯೆ ಪಡೆವವು ನಿತ್ಯಸೌಖ್ಯಗಳಾ ||
ಪೆಣ್ಣು ಪ್ರಕೃತಿಯರೂಪು ಶ್ರೀಹರಿ ಪ್ರಿಯಳುಯೆನಿಸಿದಳಾದಿಲಕ್ಷ್ಮಿಯು |
ಪೆಣ್ಣನೆಂದಿಗು ಬೀಳುಗೆಡಹದೆ ನಡೆಯೆನಿಜಸುಖವೂ || ೫ ||

ಪೆಣ್ಣು ಪಾರ್ವತಿರೂಪುತಾಳುತೆ ಬಳವಕೊಡುವಳು ನಿತ್ಯಮನುಜಗೆ ।
ಪೆಣ್ಣು ಲಕುಮಿಯ ರೂಪಿರಿಂದಲಿ ಧನವನೀಡುವಳೂ ||
ಪೆಣ್ಣು ಸರತಿಸಯಾಗಿ ಬಿಜ್ಜೆಯ ಪೊಳೆಯ ಜಗದೊಳು ಹರಿಸಿಯದರಾ |
ಹಣ್ಣು ಸವಿಯುತೆ ನರನು ಪಡೆವನು ಸೌಖ್ಯ ಇಹಪರವಾ || ೬ ||

ಪೆಣ್ಣು ಮೋಹಿನಿಯಾಗಿ ಹರಿದಾನವರ ನಾಶವಗೈದ ಪೂರ್ವದಿ।
ಪೆಣ್ಣು ದುರ್ಗೆಯು ಕೃಷ್ಣಭಗಿನಿಯು ಜಗದಿ ಮೆರೆಯುತ್ತೆ ||
ಪೆಣ್ಣು ಶಾಕಂಬರಿಯು ಭೀಕರ ರೂಪುತಾಳುತೆ ದುಟ್ಟರಕ್ಕಸ- |
ರನ್ನುಸದೆದಳು ಶಕ್ತಿಯೆನಿಸುತೆ ತಾಯಿ ಮಹಕಾಳೀ || ೭ ||

ಪೆಣ್ಣು ಸೀತಿಯು ಘೋರ ರೂಪವತಾಳಿ ಶತಶಿರನನ್ನು ಕೊಂದಳು |
ಪೆಣ್ಣು ಶಾರದೆವಾದಕೆಳೆದಳು ಮುನಿಯ ಶಂಕರನ ||
ಪೆಣ್ಣಿನಕತದಿಂದೆ ರಾಮಾನುಜನು ಯತಿವರನಾದುದದರಿಂ |
ಪೆಣ್ಣು ಜಗದೊಳು ಮಾಡಲಾಗದ ಕಾರ್ಯ ತಾನಿಲ್ಲಾ || ೮ ||

ನುಣ್ಣವೆನಿಪಾ ಕ್ರೈಸ್ತಧರ್ಮವ ಜಗದಿ ಹರಡಿದಯೇ ಶುಪ್ರಭುತಾ |
ಪೆಣ್ಣು ಮೇರಿಯ ದಯದಿಮೆರೆದನು ಸರ್ವದಿಶೆಯಲ್ಲಿ ||
ಪೆಣ್ಣಿನ ಮೋಹಕ್ಕೆ ಹೇಸುತೆ ತ್ಯಜಿಸಿ ಸಂಸಾರವನು ಗೌತುಮ |
ಘನ್ನಮುನಿವರ ಬುದ್ಧನೆನಿಸುತೆ ಮೆರೆದ ವಿಶ್ವದೊಳೂ || ೯ ||

ಪೆಣ್ಣುಮಣಿ ರೇಝಿಯಳು ತನ್ನಯ ಬುದ್ಧಿಕೌಶಲದಿಂದಲಾಳ್ದಳು |
ಪೆಣ್ಣುರಾಣಿಯ ನೂರಜಹನಳ ಸಮರು ಯಾರಿಲ್ಲಾ |
ಪೆಣ್ಣು ಮಣಿಮಾಲೆಯಲಿ ಪೊಳೆವರು ಚನ್ನೆಚನ್ನಮ್ಮಾದಿ ಸತಿಯರು |
ಪೆಣ್ಣು ಪ್ರಾಂತವನಾಳಿ ಪೋದಳು ಸರೋಜಳೆಂಬವಳೂ || ೧೦ ||

ಘನ್ನ ಕೀರ್ತಿಯ ಪಡೆದಹಲ್ಯಯ ದ್ರು‍ಪದಪುತ್ರಿಯಸೀತೆ ತಾರೆಯ |
ಚನ್ನೆಮಂದೊದರಿಯ ಸ್ಮರಣೆಯಮಾಡೆ ಪಾಪಗಳೂ ||
ಇನ್ನುನಾಶವ ಪಡೆದು ಮನುಜನು ಸನ್ನ ಸದ್ಗತಿಪಡೆದುತಾ ನತಿ |
ಘನ್ನಸಂತಸದಿಂದೆ ಮೆರೆವನು ನಿಯತಸಗ್ಗದೊಳೂ || ೧೧ ||

ಪೆಣ್ಣು ವಿರಹಿತ ಮನೆಯು ಪಾಳ್ಗುಡಿ ಪೆಣ್ಣು ಇರ್ದೊಡೆ ದೇವಮಂದಿರ |
ಪೆಣ್ಣು ಮನೆಯ ಲಕುಮಿಯೆನಿಪಳು ಸದ್ಗತಿಯ ತೋರಕಳೂ ||
ಪೆಣ್ಣು ಮುನಿದೊಡೆ ಮಾರಿಯಾಗ್ವಳು ಪೆಣ್ಣು ವೊಲಿದೊಡೆ ಶ್ರೇಯ ತರುವಳು||
ಪೆಣ್ಣು ಸರುವರ ಹೆಮ್ಮೆ ಕುಲದೇವತೆಯು ಯೆನಿಸಿಹಳೂ || ೧೨ ||

ಪೆಣ್ಣು ಸನ್ಮಾರ್ಗದೊಳೆ ಇರ್ದೊಡೆ ತನ್ನ ಕುಲಕೋಟಿಯನು ಮೆರೆವಳು |
ಪೆಣ್ಣು ವಾಮದ ಮಾರ್ಗ ಪಿಡಿದೊಡೆ ಹಾಳುಗೆಡಹುವಳೂ ||
ಪೆಣ್ಣಿಗೆ ಪತಿದೇವನೆನಿಪನು ಪೆಣ್ಣು ಗಂಡನ ಮಂತ್ರಿಯೆನಿಪಳು |
ಪೆಣ್ಣ ಬೀಳ್ದೊಡೆ ನಿಯತನನರಕವು ನರಗೆ ಶಾಶ್ವತವೂ || ೧೩ ||
*****

Tagged:

Leave a Reply

Your email address will not be published. Required fields are marked *

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...