Home / ಕವನ / ಅನುವಾದ / ನಿರಾಶೆ

ನಿರಾಶೆ

ಬಿಸಿಲೋ ಬೆಳೆಯಿತು; ಬಾನೋ ತಿಳಿಯಿತು;
ಸೆಳೆಸೆಳೆದೆಲೆಗಳು ಕುಣಿಯುವುವು;
ಮುಸುಕಿದ ಮಂಜನು ಕಳೆಯುತ ಗಿರಿಗಳು
ಬೆಳಗುವ ಹಗಲನು ಹೊದೆಯುವುವು;
ಬಿರಿಯದ ಮೊಗ್ಗುಗಳೆಸಳನು ತೆರೆಯುತ;
ಸುಳಿವುದು ತಂಪಿನ ನೆಲದುಸಿರು;
ಬೆರೆದೊಂದೇ ಆನಂದದ ದನಿವೊಲು,
ಹೊಳಲಲಿ, ಬನದಲಿ, ಬಯಲಿನಲಿ,
ಹೊರಳುವ ಕಡಲಲಿ ಹೊಮ್ಮುವ ಮೊರೆತಗಳಿಂಪಾಗೆಸೆಯುವುವು.
ಕಣ್ಣೆದಿರಾಳದ ತುಳಿಯದ ತಳದೊಳ
ಗುರುಳುವ ಕಳೆಗಳು ತೋರುವುವು.
ನುಣ್ಣಗೆ ಬೆಳಕನು ಕರಗಿಸಿ, ಅರಿಲಾ
ಗೆರೆದವೊಲಲೆಗಳು ತೋರುವುವು.
ಕುಳಿತಿಹೆನೊಬ್ಬನೆ ಮರಳಲಿ; ಸುತ್ತಲು
ಮೆರೆವುದು ಮಿಂಚುವ ಕಡಲೊಡಲು.
ಅಳತೆಯ ತಾಳಕೆ ತಲೆ ತೂಗಾಡುವ
ತೆರೆಯಿಂದೇಳುವುದೊಂದುಲುಹು.
ತಿಳಿದೆದೆಗೆ ಹೊಂದುವುದೊಂದಿಹುದೇ ಏನಿನಿದೋ ಈಗ!
ನನಗಕಟಾ! ಉತ್ಸಾಹವೆ, ಆಶೆಯೆ,
ಮೊದಲಾರೋಗ್ಯವೆ, ನೆಮ್ಮದಿಯೆ?
ಮನಸಿನ ಶಾಂತಿಯೆ, ಪದವಿಯೆ, ಕೀರ್ತಿಯೆ,
ಮುದಿಯಾಗಳಿಯದ ಸವಿಯೋಲವೆ?
ಧನವನು ಮೀರಿದ ದೈವಜ್ಞಾನದೊ
ಳೊದಗುವ ತೃಪ್ತಿಯೆ, ಮಹಿಮೆಗಳೇ?
ಜನರೆತ್ತೆತ್ತಲು ಹೊತ್ತೀ ಸಿರಿಗಳ
ಬದುಕರೆ ಬಾಳತಿಹಿತವೆನುತ?
ನನಗೋ ಆ ಹೊಂಬಟ್ಟಲೊಳೆಲ್ಲಾ ವಿಷವೇ ತುಂಬಿಹುದೇ!
ಈಗ ನಿರಾಶೆಯ ಇಳಿತರವಾಗಿದೆ,
ತೆರೆಗಳ ಗಾಳಿಯ ಹದ ತೋರಿ,
ಹಾಗೆಯೆ ಸೊರಗಿದ ಮಗುವಂತತ್ತ
ತ್ತೊರಗುವೆ, ಜನ್ಮದ ಹೊರೆ ಜಾರಿ.
ಸವೆಯಲಿ ಇಂದೇ ಹಿಂದಿನ ಮುಂದಿನ
ಕರೆಕರೆಯೆಲ್ಲಾ ಈಡೇರಿ;
ಕವಿಯಲಿ ನಿದ್ದೆಯವೊಲು ಸಾವೆಲರಲಿ
ಕೊರೆಯಲಿ ಕೆನ್ನೆಯ ಬಿಸಿಯಾರಿ;
ಕಿವಿಯಲ್ಲಿದೆ ಕಡೆ ಮೊರೆಯಲಿ ಕಡಲಾ ಒಂದೇ ಬೇಸರದುಲಿಯೂರಿ.
*****
SHELLEY : Dejection, near Naples
Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...