ಅಮರ ಜೀವನದಮಲ ಲತೆಯಲಿನಿ ಹೂವಾಗಿ
ಪರಮ ಪಾವಿತ್ರ್ಯತೆಯ ಮೂರ್ತಿಗೂ ಮೇಲಾಗಿ
ಸರಲತೆಯ ಸೌಭಾಗ್ಯದಧಿಧಾತ್ರಿ ಚಿರಮಾಗಿ
ವಿಮಲ ತೇಜೋರಾಶಿ ಬೆಳಗಲತಿಬೆಳಕಾಗಿ
ದೇವಾತ್ಮ ನಡಿಯಲ್ಲಿ ಸರಸಿಜೋದ್ಭವೆಯಾಗಿ
ಜನಮನದ ಮುಗಿಲಿನಲಿ ಧ್ರುವ ತಾರೆ ದಿಟಮಾಗಿ
ಅನುರಾಗ ಧವಳಗಿರಿ ಗೌರಿ ಶಂಕರಮಾಗಿ
ಭವ್ಯಾತ್ಮನುಸಿರಲ್ಲಿ ಭಾವದೈಸಿರಿಯಾಗಿ
ಓವೋ! ಮಹಾತುಮನ ಮಡದಿ ಮಂಗಳೆಯಾಗಿ
ವಿಶ್ವಜಿದ್ಯಾಗದುರು ಹೊಂಗಲಶದಡಿಯಾಗಿ
ಅಶ್ವಮೇಧವ ಕೋಟಿಗೈದಗೂ ಹಿರಿದಾಗಿ
ಓ! ತಾಯಿ, ನಿಂತಿರುವೆ ಕೀರ್ತಿಮೇರೆಯ ನೀಗಿ
ಧನ್ಯೆ ಕಸ್ತೂರಿ ಬಾ, ಶತಕೋಟಿ ವಂದನಂ!
ಮನ್ಯೆ ಹರಸೌ ಬಾಳಿಗಿತ್ತು ನವ ಸ್ಪಂದನಂ!
*****
ಬೆಂಗಳೂರು : ೧೯೪೩








