Home / ಕವನ / ಕವಿತೆ / ಕಮ್ನರ್‌ ದಿನ್ನೆಯಿಂದ

ಕಮ್ನರ್‌ ದಿನ್ನೆಯಿಂದ

(ಆಕ್ಸಫರ್ಡಿಗೆ ಸಮೀಪವಾಗಿದ್ದ ಹಳ್ಳಿಯ ಗುಡ್ಡ)

ಮಾಗಿಯು ಹಿಮ್ಮೆಟ್ಟುವ ಮುನ್ನ
ಮಾಗಿಯು ಹೊನ್ನಾಗಿಸಿದ ಹಸಿರೆಲೆಗಳನ್ನು
ಕುಳಿರು ಬಂದು ಮಣ್ಣುಗೂಡಿಸುವ ಮುನ್ನ
ಬೂದಿಬಣ್ಣದ ಮಂಜು ಬಂದು
ಬೀದಿಬೀದಿಗೆ ಬೀಳುವ ಮುನ್ನ,-
ಆಂಗ್ಲದೇವಿ!
ನೋಡಿದೆನು ನಿನ್ನ ಮಲೆನಾಡನು,
ಕಂಡೆನು ನಿನ್ನ ದೇಹಸೌಷ್ಠವವನು,
ನಿನ್ನ ಚೆಲುವಿಕೆ-ನಿಲುವಿಕೆಯನು,
ನಿಸರ್ಗಸಿದ್ಧ ಪ್ರಕೃತಿಸೌಂದರ್ಯವನು!

ಕಮ್ನರದ ಕಮ್ಮರಗಳನೆಲ್ಲ ನೋಡಿದೆ-
ಬಣ್ಣಬಣ್ಣದ ಹೂವನ್ನು ಕಣ್ಣು೦ಬ ನೋಡಿ ದಣಿದೆ:
ಸೇವಂತಿಗೆ, ಗುಲಾಬಿ, ಚಂಡುಹೂ, ದುಂಡುಹೂ,
ಮಂಜಿನಲ್ಲಿ ಮಾಟವಾಗಿ ಕೊರೆದಂಥ ಹೂ,-
ಗೊಂಚಲು ಗೊಂಚಲಾಗಿ ಹಣ್ಣು ವಿುಂಚುವ ಮರಗಳನ್ನು-
ಚಂಚುವಿಡುವ ಪಕ್ಷಿಯಂತೆ ಚಂಚಲನಾಗಿ ನೋಡಿದೆ!
ನೋಡಿದೆ ನಿನ್ನ ಭವ್ನದಿವ್ಯ ಬಯಲುಗಳನ್ನು
ಹಚ್ಚ ಹಸಿರನು ಮೆಚ್ಚುವಂತೆ ಹಾಸಿದ ತಗ್ಗುದಿನ್ನೆಗಳನ್ನು
ಹುಲುಸಾಗಿ ಬೆಳೆದ ಹುಲ್ಲನ್ನು,
ಚಿತ್ರವಿಚಿತ್ರವಾದ ಬೇಲಿಯನ್ನು.

ನಿನ್ನ ನಾಡಿದು ನಂದನವನವೆನ್ನುತಿದ್ದೆನು: ಆಂಗ್ಲದೇವಿ!
ಆದರೆ ನಿನ್ನ ಸೌಂದರ್ಯವು ಭಯಾನಕವಾಗಿಹುದೆನಗೆ!
ನೂರು ಕಮತನೂರುಗಳನು ಹಾಳುಮಾಡಿ
ಬೆಳೆದಿತು ನಿನ್ನ ಕಮನೂರ ಸಂಪತ್ತು:
ನೀನು ಆಂಗ್ಲ, ನಾನು ಭಾರತೀಯ,-
ಬಾರದಿಲ್ಲಿ ಹೃದಯದ ದಂಪತ್ತು!
ನೀನು ಸು೦ದರಳಹುದು: ಆದರೆ ನಿನ್ನ ಸೌಂದರ್‍ಯವ
ಗಮನಿಸಲಾರೆ: ಕ್ಷಮಿಸೆನ್ನನು, ಆಂಗ್ಲದೇವಿ!

ನಿನ್ನ ಮಕ್ಕಳು ಹಿಂಡಿ ಹಿಪ್ಪೆ ಮಾಡಿದ ಸಿಪ್ಪಿ ನಾನು,-
ನನ್ನ ಬಣ್ಣನೆ ನಿನಗೇಕೆ ಬೇಕು?
ನನ್ನ ತಾಯ್ನಾಡನ್ನು ಸುಲಿದು ಒಲಿದರು ನಿನ್ನೊಳು ತಂಯಿಯೆ೦ದು:
ಬಡವನ ನುಡಿಯ ತೊಡವೇಕೆ ನಿನಗೆ?
ನಿನ್ನ ಸ೦ದಿಗೊಂದಿಯನು ಮೂಲೆ-ಕೊಂಪಿಯನು ಸಹ
ಜಗಕೆತ್ತಿ ತೋರಿಸಿದರು ನಿನ್ನ ಕವಿಗಳು:
ನನ್ನ ನಾಡಿನ ಹಾಡಿಗೆಂದು ಮುಡಿಪಿರಲಿ ನನ್ನ ಜೀವ.

ಯುರೋಪಿನ ನಂದನವನಗಳಿರಾ!
ಹೊರವುಗಲಿ ನಿಮ್ಮ ನರುಗಂಪು, ಸುಳಿಯಲಿ ನಿಮ್ಮ ಸುಗಂಧ!
ಬರುತಿಹುದು ಕುಳಿರು ಹಿಂದೆ!
ನಡೆಯಲಿ ನಿಮ್ಮ ವಿಲಾಸ, ಚಿಗುರಲಿ ನಿಮ್ಮ ಮಂದಹಾಸ:
ಬರುತಿಹುದು ಕುಳಿರು ಹಿಂದೆ!
ಮಂಜೆಲ್ಲ ಬಂದು ಮುಸುಕಿ ನಂಜೇರಿ ನೀವು ಬಿದ್ದಾಗ-
ಹೂವಿಲ್ಲ, ಎಲೆಯಿಲ್ಲ, ಚಿಗುರಿಲ್ಲ. ಹೊಗರಿಲ್ಲ-
ನಾಸ್ತಿ! ನಾಸ್ತಿ! ನಾಸ್ತಿ!
ಶೂನ್ಯಮಿದಂ! ಶೂನ್ಯಮಿದಂ! ಶೂನ್ಯಮಿದಂ!
ಎಲೆಯಿಲ್ಲದ ಟೊಂಗೆಗಳು ಮೊರೆಯುಡುವವು ಮುಗಿಲಿನೆಡೆಗೆ:
ನೆಲೆಯಿಲ್ಲದ ಮಂಜಿನ ಮಳೆ,- ಬೀಳುವದಾಗ ಅವುಗಳ ಮೇಲೆ.
ಎತ್ತರವಾಗಿ ನಿಂತ ನಿರ್ಜೀವ ವೃಕ್ಷಗಳಿಗೆ
ಬಿತ್ತರಿಸಿ ಬೀಳುವ ಮಂಜೊಂದೇ ಉತ್ತರ: ಮಂಜೊಂದೇ ಉತ್ತರ!
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...