Home / ಲೇಖನ / ಇತಿಹಾಸ / ಜರ್‍ಮನಿಯಲ್ಲಿ ಹಿಟ್ಲರ್ ಹಾಗೂ ಆತನ ನಾಜೀ ಪಕ್ಷದ ಉದಯ

ಜರ್‍ಮನಿಯಲ್ಲಿ ಹಿಟ್ಲರ್ ಹಾಗೂ ಆತನ ನಾಜೀ ಪಕ್ಷದ ಉದಯ

೧ ಪ್ರಥಮ ಜಾಗತಿಕ ಯುದ್ಧದ ನಂತರದ ಜರ್‍ಮನಿ

೧೯೧೮ರ ನವೆಂಬರನಲ್ಲಿ ಕೊನೆಗೊಂಡ ಪ್ರಥಮ ಜಾಗತಿಕ ಯುದ್ಧವು ಅರ್ಧಮಿಲಿಯನ್‌ಕ್ಕಿಂತಲೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿತಲ್ಲದೇ, ಒಂದು ಕಾಲಕ್ಕೆ ಬಲಿಷ್ಟವಾಗಿದ್ದ ಜರ್‍ಮನಿ ಸೋಲಿನ ಸುಳಿಯಲ್ಲಿ ನರಳಿತು. ಗಂಭೀರ ಯುದ್ಧ ಉದ್ದೇಶಗಳನ್ನು ಇಟ್ಟುಕೊಂಡು ತನ್ನ ಬೆಂಬಲಿಗರನ್ನು ಸೇನಾಧಿಕಾರಿಗಳನ್ನು ಮೂರ್ಖ ಯೋಜನೆಗಳ ಮೂಲಕ ಹುರಿದುಂಬಿಸುತ್ತಿದ್ದ ರಾಜ ಕೈಸರ್ ವಿಲಿಯಂ[೧೮೫೯-೧೯೪೧]ನು ನೆದರಲ್ಯಾಂಡಿಗೆ ಪಲಾಯನಗೈದನು. ೧೯೧೯ರಲ್ಲಿ ಎಲ್ಲ ಮಿತ್ರಪಕ್ಷಗಳು ಏಕಪಕ್ಷೀಯವಾಗಿ ಒಪ್ಪಿಕೊಂಡ ವರ್ಸ್ಸೇಲ್ಸ ಒಪ್ಪಂದಕ್ಕೆ ಜರ್‍ಮನ್ ಪ್ರಜಾಸತ್ತಾತ್ಮಕತೆಯನ್ನು ಪ್ರತಿಪಾದಿಸುತ್ತಿದ್ದ ಪ್ರಜಾಪ್ರಭುತ್ವವಾದಿಗಳು ಬಲವಂತವಾಗಿ ಒಪ್ಪಬೇಕಾಯಿತು. ಮೊದಲ ಜಾಗತಿಕ ಯುದ್ಧದ ನೇರ ಹೊಣೆಯನ್ನು ಜರ್‍ಮನಿಯ ಮೇಲೆ ಹೊರಿಸಲಾಯಿತು., ಯುದ್ಧ ಪರಿಹಾರದ ಬೇಡಿಕೆಯನ್ನು ಜರ್‍ಮನಿ ನೀಡಬೇಕಾಯಿತು. ಜರ್‍ಮನಿಯು ಹೊಂದಿದ ವಸಾಹತುಗಳ ಸ್ವಾಮ್ಯವನ್ನು ರದ್ದು ಮಾಡಲಾಯಿತು. ಜರ್‍ಮನಿಯ ಪ್ರಜಾಪ್ರಭುತ್ವದ ಪ್ರಥಮ ಮುಖಾಮುಖಿ ಪ್ರಯತ್ನಗಳು ಜರ್‍ಮನ್ನರಿಂದಲೇ ನಿರಾಕರಣೆ ಹಾಗೂ ಪ್ರತಿಭಟನೆಗೆ ಗುರಿಯಾದದ್ದು ವಿಪರ್ಯಾಸ. ಒಂದು ವರ್ಷದ ನಂತರ ಸಿದ್ದಪಡಿಸಿದ ಸಾಂವಿಧಾನಿಕ ಕರಡು ರೈಖ್‌ಸ್ಟ್ಯಾಗಗೆ [ಸಂಸತ್ತು] ಅಂತಹ ಅಧಿಕಾರವನ್ನು ನೀಡಿರಲಿಲ್ಲ. ಎಡ ಮತ್ತು ಬಲ ರಾಪ್ಟ್ರೀಯವಾದಿಗಳು ವರ್ಸ್ಸೇಲ್ಸ್ ಒಪ್ಪಂದದಲ್ಲಿ ಜರ್‍ಮನಿಯನ್ನು ಮಾರಾಟಕ್ಕಿಟ್ಟರೆಂದು ಪ್ರಜಾಪ್ರಭುತ್ವವಾದಿಗಳನ್ನು ದೂಷಿಸತೊಡಗಿದರು. ಪೂರ್ವಭಾವಿಯಾಗಿ, ಸಮ್ಮಿಶ್ರ ಸರಕಾರದ ಕಲ್ಪನೆಗೆ ದೊಡ್ಡ ಪೆಟ್ಟು ಬಿತ್ತು. ಅದರ ಪ್ರಾಮುಖ್ಯತೆ ಭಂಡ ಜನರ ಕಣ್ಣಲ್ಲಿ ತನ್ನ ಮಹತ್ವ ಕಳೆದುಕೊಂಡಿತ್ತು.

೨ ನಾಜೀ ಪಕ್ಷದ ಉದಯ

ಈ ಸನ್ನಿವೇಶವು ರಾಷ್ಟ್ರೀಯ ಸಮಾಜವಾದಿ ಪಕ್ಷದ ಅಂದರೆ ನಾಜೀ ಪಕ್ಷದ ಸಂಘಟನೆಗೆ ಉತ್ತೇಜಿಸಿತು. ಕಳೆದುಕೊಂಡ ಗೌರವವನ್ನು ಪುನಃ ಸ್ಥಾಪಿಸಿಕೊಳ್ಳಬಯಸಿದ ಅತೃಪ್ತ ಜರ್‍ಮನ್ನರು ಈ ಪಕ್ಷವನ್ನು ಬೆಂಬಲಿಸತೊಡಗಿದರು.

ಎಲ್ಲರಿಗೂ ಉದ್ಯೋಗ ಖಾತ್ರಿ, ಸಂಪತ್ತಿನ ಮರುಹಂಚಿಕೆ ಇವು ಈ ಪಕ್ಷದ ಪ್ರಮುಖ ಪ್ರಣಾಳಿಕೆಗಳಾಗಿದ್ದವು. ಪಕ್ಷದ ಹಿಡಿತವು ವೃತ್ತಿಯಿಂದ ಮನೆಗೆ ಬಣ್ಣಬಳಿಯುವ ಕಾಯಕದ, ಆಸ್ಟ್ರೀಯಾದಲ್ಲಿ ಜನಿಸಿದ ಅಡಾಲ್ಫ ಹಿಟ್ಲರ್ ಎಂಬ ಯುವ ಮುಖಂಡನ ಕೈಯಲ್ಲಿತ್ತು. ಆತ ಬಹಳ ಸುಲಭವಾಗಿ ಜನರನ್ನು ಸಮ್ಮೋಹನಗೊಳಿಸಿದ, ತನ್ನ ಪೊಳ್ಳು ಮಾತಿನಲ್ಲಿ ಭರವಸೆಗಳ ಬೆರೆಸಿ ಅತಿಯಾದ ಧರ್ಮಾಂಧತೆಯ ಸಂಗತಿಗಳಿಂದ ಜನರಲ್ಲಿ ಹಿಸ್ಟಿರಿಯಾ ಸೃಷ್ಟಿಸಿದ. ಶ್ರೇಷ್ಠ ಜರ್‍ಮನ್ ಜನಾಂಗವೆಂದು ಆತ ಕರೆಯಲ್ಪಡುವ ತನ್ನ ಕುಲದವರನ್ನು ಪರಮಯೋಗ್ಯರೆಂದು ಸಾರುವುದು ಹಾಗೆ ಭೂತಕಾಲದಲ್ಲಿ ಆರ್ಯನ್ ಜನಾಂಗದ ಮೇಲೆ ನಡೆದ ಐತಿಹಾಸಿಕ ಅನ್ಯಾಯಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದು ಆತನ ಪ್ರಮುಖ ಗುರಿಗಳಾಗಿದ್ದವು. ಕೊನೆಯಲ್ಲಿ ಪೋಲೆಂಡ ಮತ್ತು ರಷ್ಯಾದ ಸ್ಲೆವಿಕ್ ಭಾಗಗಳನ್ನು ವಶಪಡಿಸಿಕೊಂಡನು.

೧೯೨೦ರ ಬಹು ಸಮಯವದವರೆಗೂ ನಾಜೀ ಸಾಮ್ರಾಜ್ಯವು ಜರ್‍ಮನಿಯ ದಕ್ಷಿಣಭಾಗ[ಬೊಲಿವಿಯಾ]ದವರೆಗೆ ಮಾತ್ರ ಮಿತಿಯಲ್ಲಿತ್ತು. ೧೯೨೯ರ ಗ್ಲೋಬಲ್ ಡಿಪ್ರೆಶನ್ ಕಾರಣ ದೊಡ್ಡ ಸಂಖ್ಯೆಯಲ್ಲಿ ಜನರು ಹಿಟ್ಲರನನ್ನು ಆರಾಧಿಸತೊಡಗಿದರು. ಹಾಗೂ ೧೯೩೦-೩೨ರ ರೈಖ್‌ಸ್ಟ್ಯಾಗ್‌ನ ಚುನಾವಣೆ ಆತನನ್ನು ಅಧಿಕಾರದ ಗದ್ದುಗೆಗೆ ಏರಿಸಿತು.

೩ ಸರ್ವಾಧಿಕಾರದ ಹಿಟ್ಲರ

ಇದೇ ಸಮಯದಲ್ಲಿ ಹಿಟ್ಲರನು ಯಹೂದಿಗಳ ಮೇಲೆ ಹಾಗೂ ನಾಜೀ ವಿರೋಧಿ ಉದ್ದೇಶಗಳ ಮೇಲೆ ಅಪಾಯಕಾರಿ ಆಕ್ರಮಣವನ್ನು ಬಾಹ್ಯವಾಗಿಯೇ ಪ್ರಾರಂಭಿಸಿದನು. [ಪ್ಯಾಸಿಸಂ, ಕ್ರೈಸ್ತಧರ್ಮ ಹಾಗೂ ಕಮ್ಯೂನಿಸಂಗಳು ಅಪಾಯದ ಪಟ್ಟಿಯಲ್ಲಿದ್ದವು] ಶ್ರೇಷ್ಠ ಜರ್‍ಮನ್‌ರಿಗಾಗಿ ಜರ್‍ಮನಿಯನ್ನು ಯಹೂದಿಮುಕ್ತ ಗೊಳಿಸಲು ಪ್ರಾರಂಭಿಸಿದ. ೧೯೩೩ರ ಪ್ರಾರಂಭದಲ್ಲಿ ಜರ್‍ಮನಿಯ ಅಧ್ಯಕ್ಷನಾಗಿದ್ದ ಹಿಂಡನ್ ಬರ್ಗ ತನ್ನ ಅಧಿಕಾರದಿಂದ ವಿಮುಖನಾದ ಹಾಗೂ ಹಿಟ್ಲರನನ್ನು ಛಾನ್ಸಲರ್ ಆಗಿ ಆಯ್ಕೆ ಮಾಡಿದ. ಅದಕ್ಕೆ ಪ್ರತಿಯಾಗಿ ಹಿಟ್ಲರ್ ಸಮಯವನ್ನು ಕಾಯದೇ ಸಂಸತ್ತನ್ನು ವಿಸರ್ಜಿಸಿ ತಾನೇ ಸರ್ವಾಧಿಕಾರಿಯಾದನು.

೪ ಹಿಟ್ಲರ್ ಯಹೂದಿಗಳನ್ನು ದ್ವೇಷಿಸಿದ

ಆನಂತರ ಕೂಡಲೇ ಹಿಟ್ಲರ್ ಯಹೂದಿ ವಿರೋಧಿ ಕ್ರಮಗಳನ್ನು ಪ್ರಾರಂಭಿಸಿದನು. ಮೊದಲಿಗೆ ಸಾರ್ವಜನಿಕ ಸೇವೆಗಳಿಂದ, ಅವರನ್ನು ಸಾಮೂಹಿಕವಾಗಿ ವಜಾಮಾಡಲಾಯಿತು, ಖಾಸಗಿ ಉದ್ಯೋಗ ಹಾಗೂ ಆಚರಣೆಗಳಿಂದ ಹೊರಹಾಕಲಾಯಿತು. ಉದ್ಯೋಗವಕಾಶಗಳನ್ನು ನಿರಾಕರಿಸಲಾಯಿತು. ಇವೆಲ್ಲವೂ ಬಹು ಕ್ಷೀಪ್ರವಾಗಿ ನಡೆದವು. ಜರ್‍ಮನ್ ಸಮುದಾಯದಿಂದ ಯಹೂದಿಗಳನ್ನು ಬೇರೆ ಮಾಡಲಾಯಿತು. ಈ ದೇಶಭ್ರಷ್ಟರಿಗೆ ಯಾವ ಸೌಲಭ್ಯಗಳು ಲಭ್ಯವಿರಲಿಲ್ಲ. ಜರ್‍ಮನಿಯ ಎಲ್ಲ ಪ್ರದೇಶಗಳಲ್ಲಿ ಈ ಯಹೂದಿಗಳು ಇತರ ದೇಶಗಳಿಗೆ ಓಡಿಹೋಗದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಯಿತು.

೫ ದ್ವಿತೀಯ ಮಹಾಯುದ್ಧಕ್ಕೆ ಕಾರಣನಾದ ಸರ್ವಾಧಿಕಾರಿ

ಜರ್‍ಮನಿಯ ಈ ಸರ್ವಾಧಿಕಾರಿ ಬಹು ಅಚ್ಚುಕಟ್ಟಾದ ರೀತಿಯಲ್ಲಿ ತನ್ನ ಸೈನ್ಯವನ್ನು ಯುದ್ಧಕ್ಕೆ ಸನ್ನದ್ಧಗೊಳಿಸಿದನು. ಆತನ ಆಕ್ರಮಣವು ಪೂರ್ವದ ಮೇರೆ ಗಡಿಗಳಲ್ಲಿ ಬಹಳ [ಸೆಪ್ಟೆಂಬರ್ ೧೯೩೯ರ ಸುಮಾರಿಗೆ] ಪ್ರಮುಖವಾಗಿತ್ತು. ಆಗ ಬ್ರಿಟನ್ ಮತ್ತು ಫ್ರಾನ್ಸ್ ಶಾಂತಿ ಮಾರ್ಗವನ್ನು ತ್ಯಜಿಸಿದವು ಮತ್ತು ಅದನ್ನು ಉದ್ಘೋಷಿಸಿದವು. ಅದು ಮೇ ೧೯೪೦ವರೆಗ ಹಾಗೇ ಇದ್ದು, ನಂತರ ಜರ್‍ಮನಿ ಪೋಲಂಡ, ಡೆನಮಾರ್ಕ, ನಾರ್ವೆಗಳನ್ನು ವಿಸ್ತರಿಸಿಕೊಂಡ ಬಳಿಕ ಅದು ಪಶ್ಚಿiದ ಕಡೆಗೆ ತಿರುಗಿ ಅಲ್ಲಿ ಯುದ್ಧ ಅಲಿಪ್ತ ಪ್ರದೇಶಗಳಾಗಿದ್ದ ಹಾಲಂಡ ಮತ್ತು ಬೆಲ್ಜಿಯಂನ್ನು ಧೂಳಿಪಟಮಾಡಿ, ನಂತರ ಫ್ರಾನ್ಸನ ಮೇಲೆ ಆಕ್ರಮಣದ ಮಳೆಗೆರೆಯಿತು. ಜೂನ್ ೧೯೪೦ರಲ್ಲಿ ಫ್ರಾನ್ಸ ಕೂಡಾ ಶರಣಾಯಿತು. ಈಗ ಏಕಾಂಗಿ ವಿರೋಧಿ ಬಣದ ಬ್ರಿಟಿಷರು ಫ್ರಾನ್ಸನ ಡನ್ಕಿರ್‍ಕ್‌ನ್ನು ಜರ್‍ಮನಿಯ ಪಾಲಾಗದಂತೆ ಉಳಿಸಿಕೊಂಡರು ಮತ್ತು ಭೀಕರ ಆಕ್ರಮಣಕ್ಕೆ ಎದುರು ನೋಡತೊಡಗಿದರು. ಇದು ಯುದ್ಧದಲ್ಲಿ ಸರ್ವಾಧಿಕಾರಿ ಹಿಟ್ಲರ್‌ನ ದಿಗ್ವಿಜಯವಾಗಿತ್ತು. ಸುಮಾರು ಜೂನ್ ೧೯೪೧ರಲ್ಲಿ ಇಡೀ ಯುರೋಪ ಆತನ ಕಾಲಬುಡದಲ್ಲಿ ಬಿದ್ದಿತ್ತು, ಆದರೆ ಬ್ರಿಟಿಷ ತನ್ನ ನಡುಗಡ್ಡೆಗಳನ್ನು ಕಾಪಾಡಿಕೊಂಡಿತು. ಪೂರ್ವದಲ್ಲಿ ಅದು ೧೯೩೯ರಲ್ಲಿ ಆಕ್ರಮಣ ವಿರೋಧಿ ನೀತಿಗೆ ರಶಿಯಾದ ಸ್ಟಾಲಿನ್‌ನೊಂದಿಗೆ ಹಿಟ್ಲರ್ ಸಹಿ ಮಾಡಿದ್ದನು. ಈಗ ಅದೇ ಸ್ಟಾಲಿನ್‌ನ ರಶಿಯಾವನ್ನು ಕೂಡಾ ಆತನ ಸೈನ್ಯ ಗೆದ್ದುಕೊಂಡಿತು.
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...