Home / ಕವನ / ಅನುವಾದ / ಬಡವನ ಹುರುಡು

ಬಡವನ ಹುರುಡು

ಮಾನವಾಗಿ ತಾನು ಬದುಕಿ,
ಹೀನ ಬಡತನವೇನೆ ಇರಲಿ,
ನಾಚಿಕೊಳುವ ನೀಚತೊತ್ತ
ಆಚೆನೂಕು, ಏನೆ ಇರಲಿ,
ಏನೆ ಇರಲಿ, ಏನೆ ಇರಲಿ,
ಕಷ್ಟನಿಷ್ಟುರವೇನೆ ಇರಲಿ,
ಮೆರೆವ ಪದವಿ ವರಹಮುದ್ರೆ,
ಆಳು ಚಿನ್ನ, ಏನೆ ಇರಲಿ!
ಹೊಟ್ಟೆಗಿಷ್ಟು ಹಿಟ್ಟು ಗಂಜಿ,
ಬಟ್ಟೆ ಚಿಂದಿ, ಏನೆ ಇರಲಿ,
ಸೊಗಸು ಬೆಡಗು ತೆಗೆದು ಮಡಗು,
ಮಿಗುವುದಾಳು, ಏನೆ ಇರಲಿ.
ಏನೆ ಇರಲಿ, ಏನೆ ಇರಲಿ,
ಥಳಕುಪಳಕುಗಳೇನೆ ಇರಲಿ,
ಯಾರು ಸಾಜ, ಅವನೆ ರಾಜ,
ಭಂಗ, ಬಡತನ, ಏನೆ ಇರಲಿ!
ಅಕ್ಕೊ ಬಸುವ, ಸೊಕ್ಕಿ ಮೆರೆವ
ಲಕ್ಕಮುಕ್ಕ , ಏನೆ ಇರಲಿ;
ಅರಿತು ಕಣ್ಣ , ಹರಿವರಣ-
ಬೆಪ್ಪ, ಬಿಡೆಲಾ, ಏನೆ ಇರಲಿ,
ಏನೆ ಇರಲಿ, ಏನೆ ಇರಲಿ,
ಉಡಿಗೆತೊಡಿಗೆಗಳೇನೆ ಇರಲಿ,
ತನ್ನ ಬುದ್ದಿ ತನಗೆ ಸಿದ್ಧಿ
ಎನ್ನಬೇಡಾ, ಏನೆ ಇರಲಿ?
ಅರಸ ಕರಸಿ, ಬಿರುದ ಹೊರಿಸಿ,
ಮೆರಸಬಲ್ಲ, ಏನೆ ಇರಲಿ;
ಸಾಜಗಾರ ಎನಿಸಲಾರ,
ತೇಜವಿಲ್ಲ, ಏನೆ ಇರಲಿ,
ಏನೆ ಇರಲಿ, ಏನೆ ಇರಲಿ,
ಹಮುಹಮ್ಮೆಗಳೇನೆ ಇರಲಿ.
ತಿರುಳಿನರಿವು, ಹಿರಿಯ ನಡತೆ,
ಮೇಲುಸಾಲು, ಏನೆ ಇರಲಿ.
ಅರಿವು, ನಡತೆ, ಧರೆಯೊಳೆಲ್ಲ
ಮೆರೆವ ಕಾಲ, ಏನೆ ಇರಲಿ,
ಬರಲಿ ಬೇಗ, ಹರಸು ಈಗ;
ಬರದೆ ಇರದು, ಏನೆ ಇರಲಿ.
ಏನೆ ಇರಲಿ, ಏನೆ ಇರಲಿ,
ಬಂದೆ ಬರುವುದು, ಏನೆ ಇರಲಿ,
ಅಣ್ಣ ತಮ್ಮದಿರಾಗಿ ಎಲ್ಲಾ
ಇರುವ ಕಾಲ, ಏನೆ ಇರಲಿ.
*****
BURNS (1759 -1796) : A Man’s a man for a `that
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...