Home / ಕವನ / ಅನುವಾದ / ಬಡವನ ಹುರುಡು

ಬಡವನ ಹುರುಡು

ಮಾನವಾಗಿ ತಾನು ಬದುಕಿ,
ಹೀನ ಬಡತನವೇನೆ ಇರಲಿ,
ನಾಚಿಕೊಳುವ ನೀಚತೊತ್ತ
ಆಚೆನೂಕು, ಏನೆ ಇರಲಿ,
ಏನೆ ಇರಲಿ, ಏನೆ ಇರಲಿ,
ಕಷ್ಟನಿಷ್ಟುರವೇನೆ ಇರಲಿ,
ಮೆರೆವ ಪದವಿ ವರಹಮುದ್ರೆ,
ಆಳು ಚಿನ್ನ, ಏನೆ ಇರಲಿ!
ಹೊಟ್ಟೆಗಿಷ್ಟು ಹಿಟ್ಟು ಗಂಜಿ,
ಬಟ್ಟೆ ಚಿಂದಿ, ಏನೆ ಇರಲಿ,
ಸೊಗಸು ಬೆಡಗು ತೆಗೆದು ಮಡಗು,
ಮಿಗುವುದಾಳು, ಏನೆ ಇರಲಿ.
ಏನೆ ಇರಲಿ, ಏನೆ ಇರಲಿ,
ಥಳಕುಪಳಕುಗಳೇನೆ ಇರಲಿ,
ಯಾರು ಸಾಜ, ಅವನೆ ರಾಜ,
ಭಂಗ, ಬಡತನ, ಏನೆ ಇರಲಿ!
ಅಕ್ಕೊ ಬಸುವ, ಸೊಕ್ಕಿ ಮೆರೆವ
ಲಕ್ಕಮುಕ್ಕ , ಏನೆ ಇರಲಿ;
ಅರಿತು ಕಣ್ಣ , ಹರಿವರಣ-
ಬೆಪ್ಪ, ಬಿಡೆಲಾ, ಏನೆ ಇರಲಿ,
ಏನೆ ಇರಲಿ, ಏನೆ ಇರಲಿ,
ಉಡಿಗೆತೊಡಿಗೆಗಳೇನೆ ಇರಲಿ,
ತನ್ನ ಬುದ್ದಿ ತನಗೆ ಸಿದ್ಧಿ
ಎನ್ನಬೇಡಾ, ಏನೆ ಇರಲಿ?
ಅರಸ ಕರಸಿ, ಬಿರುದ ಹೊರಿಸಿ,
ಮೆರಸಬಲ್ಲ, ಏನೆ ಇರಲಿ;
ಸಾಜಗಾರ ಎನಿಸಲಾರ,
ತೇಜವಿಲ್ಲ, ಏನೆ ಇರಲಿ,
ಏನೆ ಇರಲಿ, ಏನೆ ಇರಲಿ,
ಹಮುಹಮ್ಮೆಗಳೇನೆ ಇರಲಿ.
ತಿರುಳಿನರಿವು, ಹಿರಿಯ ನಡತೆ,
ಮೇಲುಸಾಲು, ಏನೆ ಇರಲಿ.
ಅರಿವು, ನಡತೆ, ಧರೆಯೊಳೆಲ್ಲ
ಮೆರೆವ ಕಾಲ, ಏನೆ ಇರಲಿ,
ಬರಲಿ ಬೇಗ, ಹರಸು ಈಗ;
ಬರದೆ ಇರದು, ಏನೆ ಇರಲಿ.
ಏನೆ ಇರಲಿ, ಏನೆ ಇರಲಿ,
ಬಂದೆ ಬರುವುದು, ಏನೆ ಇರಲಿ,
ಅಣ್ಣ ತಮ್ಮದಿರಾಗಿ ಎಲ್ಲಾ
ಇರುವ ಕಾಲ, ಏನೆ ಇರಲಿ.
*****
BURNS (1759 -1796) : A Man’s a man for a `that
Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...