Home / ಕವನ / ಅನುವಾದ / ಸರ್ ಜಾನ್ ಮೂರನ್ನು ಹೂಳಿದ್ದು

ಸರ್ ಜಾನ್ ಮೂರನ್ನು ಹೂಳಿದ್ದು

ತಂಬಟೆಹೊಯಿಲಿಲ್ಲ, ವಾದ್ಯದ ಹಲುಬಿಲ್ಲ,
ಹೆಣವ ಕೋಟೆಗೆ ನಾವು ತ್ವರೆಯಲೊಯ್ದಾಗ;
ಒಬ್ಬ ಸಿಪಾಯಿಯ ಕಳುಹುವ ಸುರುಟಿಯಿಲ್ಲ,
ನಮ್ಮ ನಾಯಕನನು ಹೂಳುತಿದ್ದಾಗ.
ಹೂಳಿದೆವವನನು ಸರಿಹೊತ್ತಿನಿರುಳಲಿ,
ಮಣ್ಣ ಬಂದೂಕದ ಮೊನೆಯಿಂದ ತಿರುವಿ;
ನುಸುಳಿ ಬರುವ ಬೆಳದಿಂಗಳ ಮಂಜಲ್ಲಿ
ಮಂಕಾದ ಬೆಳಕಿನ ಲಾಂದರದಲ್ಲಿ.
ಒಡಲ ಪೇಳಿಗೆಯಲಿ ಒಪ್ಪ ಮಾಡಲು ಇಲ್ಲ,
ಬಟ್ಟೆ ದುಪ್ಪಟಿಯಲಿ ಸುತ್ತಲು ಇಲ್ಲ;
ನಿದ್ದೆಹೋಗುವ ವೀರನಂದದಿ ಬಿದ್ದಿದ್ದ
ಯುದ್ಧದ ನಿಲುವಂಗಿ ಮುಚ್ಚಿ ಮೈಯೆಲ್ಲ.
ಬೇಗ, ಒಂದೆರಡು ಪ್ರಾರ್ಥನೆಯನ್ನು ಹೇಳಿ.
ಉಕ್ಕುವ ದುಃಖವನೊಳಗೆಯೆ ಅದುಮಿ,
ಸೆಳೆಯಲಾರದೆ ಕಣ್ಣ , ಸತ್ತ ಮುಖವ ನೋಡಿ,
ನೆನೆದೆವು ರೋಷದಿ ನಾಳೆಯ ಪಾಡ.
ನೆನೆದೆವು, ಕಿರಿದು ಹಾಸಿಗೆಯನು ತೋಡುತ,
ಒಬ್ಬನೆ ಒರಗುವ ದಿಂಬನು ಸವರಿ-
ನಾಳೆ ಹೆರರು ಹಗೆಗಳು ತಲೆ ತುಳಿವರೆ!
ತೆರೆಯ ಮೇಲಿರುವೆವೆ ಬಲುದೂರ ನಾವು!
ಹೋದ ಜೀವವ ಜರೆದಾಡಿಕೊಳುವರಾಹ!
ತಣ್ಣಗಾದುರಿಯನು ಮೂದಲಿಸುವರು!
ಎಣಿಸುವನೇ? ತನ್ನ ಮುಟ್ಟದೆ ಬಿಟ್ಟರೆ
ಬ್ರಿಟನನಿಟ್ಟೀ ಕುಳಿಯಲಿ ಮಲಗಿರಲು
ನಮ್ಮ ಸಂಕಟದಲಿ ಕ್ರಿಯೆಯರೆಯಾಯಿತು;
ತುತ್ತುರಿಯಾಯಿತು ಹಿಮ್ಮೆಟ್ಟಿ ಬರಲು.
ಕೇಳಿತು ಕೋಪಿಸಿ ವೈರಿಗಳೊಮ್ಮೊಮ್ಮೆ
ಹಾರಿಸುತ್ತಿದ್ದುದು ದೂರದ ಗುಂಡು.
ಮೆಲ್ಲಗೆ, ಮರುಗುತ, ಮಣ್ಣಿನಲಿಟ್ಟೆವು
ರಣದ ರಕ್ತದ ಚೆಲುವಿನ ಚೆಲುವಿನಲಿ.
ಕಲ್ಲ ನೆಡದೆ ಒಂದು ಪಂಕ್ತಿಯ ಕೆತ್ತದೆ,
ಅವನ ಕೀರ್ತಿಯಲವನೆ ಬಿಟ್ಟೆವಲ್ಲಿ!
*****
C WOLFE (1791- 1823) : Burial of Sir John Moor
Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...