Home / ಕವನ / ಅನುವಾದ / ಸರ್ ಜಾನ್ ಮೂರನ್ನು ಹೂಳಿದ್ದು

ಸರ್ ಜಾನ್ ಮೂರನ್ನು ಹೂಳಿದ್ದು

ತಂಬಟೆಹೊಯಿಲಿಲ್ಲ, ವಾದ್ಯದ ಹಲುಬಿಲ್ಲ,
ಹೆಣವ ಕೋಟೆಗೆ ನಾವು ತ್ವರೆಯಲೊಯ್ದಾಗ;
ಒಬ್ಬ ಸಿಪಾಯಿಯ ಕಳುಹುವ ಸುರುಟಿಯಿಲ್ಲ,
ನಮ್ಮ ನಾಯಕನನು ಹೂಳುತಿದ್ದಾಗ.
ಹೂಳಿದೆವವನನು ಸರಿಹೊತ್ತಿನಿರುಳಲಿ,
ಮಣ್ಣ ಬಂದೂಕದ ಮೊನೆಯಿಂದ ತಿರುವಿ;
ನುಸುಳಿ ಬರುವ ಬೆಳದಿಂಗಳ ಮಂಜಲ್ಲಿ
ಮಂಕಾದ ಬೆಳಕಿನ ಲಾಂದರದಲ್ಲಿ.
ಒಡಲ ಪೇಳಿಗೆಯಲಿ ಒಪ್ಪ ಮಾಡಲು ಇಲ್ಲ,
ಬಟ್ಟೆ ದುಪ್ಪಟಿಯಲಿ ಸುತ್ತಲು ಇಲ್ಲ;
ನಿದ್ದೆಹೋಗುವ ವೀರನಂದದಿ ಬಿದ್ದಿದ್ದ
ಯುದ್ಧದ ನಿಲುವಂಗಿ ಮುಚ್ಚಿ ಮೈಯೆಲ್ಲ.
ಬೇಗ, ಒಂದೆರಡು ಪ್ರಾರ್ಥನೆಯನ್ನು ಹೇಳಿ.
ಉಕ್ಕುವ ದುಃಖವನೊಳಗೆಯೆ ಅದುಮಿ,
ಸೆಳೆಯಲಾರದೆ ಕಣ್ಣ , ಸತ್ತ ಮುಖವ ನೋಡಿ,
ನೆನೆದೆವು ರೋಷದಿ ನಾಳೆಯ ಪಾಡ.
ನೆನೆದೆವು, ಕಿರಿದು ಹಾಸಿಗೆಯನು ತೋಡುತ,
ಒಬ್ಬನೆ ಒರಗುವ ದಿಂಬನು ಸವರಿ-
ನಾಳೆ ಹೆರರು ಹಗೆಗಳು ತಲೆ ತುಳಿವರೆ!
ತೆರೆಯ ಮೇಲಿರುವೆವೆ ಬಲುದೂರ ನಾವು!
ಹೋದ ಜೀವವ ಜರೆದಾಡಿಕೊಳುವರಾಹ!
ತಣ್ಣಗಾದುರಿಯನು ಮೂದಲಿಸುವರು!
ಎಣಿಸುವನೇ? ತನ್ನ ಮುಟ್ಟದೆ ಬಿಟ್ಟರೆ
ಬ್ರಿಟನನಿಟ್ಟೀ ಕುಳಿಯಲಿ ಮಲಗಿರಲು
ನಮ್ಮ ಸಂಕಟದಲಿ ಕ್ರಿಯೆಯರೆಯಾಯಿತು;
ತುತ್ತುರಿಯಾಯಿತು ಹಿಮ್ಮೆಟ್ಟಿ ಬರಲು.
ಕೇಳಿತು ಕೋಪಿಸಿ ವೈರಿಗಳೊಮ್ಮೊಮ್ಮೆ
ಹಾರಿಸುತ್ತಿದ್ದುದು ದೂರದ ಗುಂಡು.
ಮೆಲ್ಲಗೆ, ಮರುಗುತ, ಮಣ್ಣಿನಲಿಟ್ಟೆವು
ರಣದ ರಕ್ತದ ಚೆಲುವಿನ ಚೆಲುವಿನಲಿ.
ಕಲ್ಲ ನೆಡದೆ ಒಂದು ಪಂಕ್ತಿಯ ಕೆತ್ತದೆ,
ಅವನ ಕೀರ್ತಿಯಲವನೆ ಬಿಟ್ಟೆವಲ್ಲಿ!
*****
C WOLFE (1791- 1823) : Burial of Sir John Moor
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...