Home / ಕವನ / ಅನುವಾದ / ಆಪ್ರೋದಿತೆ

ಆಪ್ರೋದಿತೆ

ಮೂಲ: ಸ್ಯಾಫೋ
(ಗ್ರೀಕ್ ಕವಯಿತ್ರಿ, ಕ್ರಿ.ಪೂ. ೬-೭ನೆಯ ಶತಮಾನ)

ದೇವಿ ಆಪ್ರೋದಿತೆಯೆ
ಸಕಲ ವೈಭವದ ಸಿಂಹಾಸನವ ಏರಿರುವ ರೂಪವಿಖ್ಯಾತಯೆ!
ಎಲ್ಲರಿಗು ಮಿಗಿಲು
ಸಾವಿಗೂ ದಿಗಿಲು
ಎನ್ನಿಸುವ ಸ್ಯೂದೇವ ಪಡೆದಂಥ ಮಗುವೆ
ಅಂಗಲಾಚುವೆ ದೇವಿ ಬಳಿಸಾರಿ ಅಡಿಯ
ದುಃಖ ಕೊರಗುಗಳಿಂದ ಸೀಳದಿರು ಎದೆಯ
ಹಿಂದೆ ನೀ ಬಂದಂತೆ ಎಷ್ಟೊ ಸಲ ಬಳಿಗೆ
ಬಾರೆ ಆಪ್ರೋದಿತೆ, ಬಾ ನನ್ನ ಕಡೆಗೆ

ದೂರದಲಿ ಕೇಳುತಿರುವಂತೆಯೇ ನನ್ನ ದನಿ
ತಂದೆ ಸ್ಯೂಸನ ದಿವ್ಯ ಮಂದಿರವನಿಳಿದು
ಮುಗಿಲಿರದ ನೀಲಿಯಲ್ಲಿ ರೆಕ್ಕೆಗಳ ಪಟಪಟಿಸಿ ಗುಬ್ಬಚ್ಚಿ ಹಿಂಡು
ಸಿಂಗಾರದಲಿ ಎಳೆವ ಬಂಗಾರ ರಥವೇರಿ ಬರುತಿದ್ದೆ ಬಳಿಗೆ
ಬಂದು ಬದಿನಿಂತು ಆ ಮಧುರ ಅಧರದಲ್ಲಿ
ಸೂಸುತಿರೆ ಸವಿನಗೆ
ನನ್ನ ಕೇಳಿದೆ ನೀನು
“ಏನು ಹೇಳೇ ಹೆಣ್ಣ, ಏನು ನಿನ್ನರಕೆ
ಎದೆಗೆ ಕಿಚ್ಚಿಟ್ಟಂಥ ಹುಚ್ಚು ಬಯಕೆ?
ನನ್ನ ಮಾಯೆಯ ನೆರವು ಬೇಕೆ ಅದಕೆ?
ನಿನ್ನ ತೋಳಲಿ ಯಾರ ತಂದು ಕೆಡವಲಿ ಹೇಳೆ
ಯಾರಿಂದ ನಿನಗಿಂಥ ಗೋಳೆ?”
ಕಂಡ ಕ್ಷಣ ದೂರ ಓಡಿದರು ಬಲು ಬೇಗನೇ
ಹತ್ತುವಳು ಬೆನ್ನು
ಕೊಟ್ಟ ಕಾಣಿಕೆಯ ಕಿತ್ತೆಸೆಯುವಳು ಆದರೂ
ಕೊಡುಗೈಯ ಹೆಣ್ಣು
ಪ್ರೀತಿಸಳು ಯಾರನೂ, ಆದರೂ ನೀನೊಲಿಯೆ
ಮಾಗುವುದು ಹಣ್ಣು
ಬಾ ಬೇಗ ಈ ಎಲ್ಲ ದುಖ ಯಾತನೆಯಿಂದ
ಎತ್ತಿ ಕಾಪಾಡು
ತೊಡಕೆಲ್ಲ ಪರಿಹರಿಸಿ ಎದೆ ಬಯಸಿದಂಥ
ಇಷ್ಟಾರ್ಥಗಳ ನೀಡು
ಉತ್ತರಿಸು ಬಾ ರಾಣಿ
ಬದಿನಿಂತು ಕೈಗೆ ಕೈ ಹೆಣೆದು ಮುದ ನೀಡು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...