Home / ಕವನ / ಅನುವಾದ / ಶ್ರೀಹರೀ ಶ್ರೀಹರೀ ಶ್ರೀಹರೀ

ಶ್ರೀಹರೀ ಶ್ರೀಹರೀ ಶ್ರೀಹರೀ

ಮೂಲ: ಅರವಿಂದ ಗುಹಾ

ಹಿಂದೊಮ್ಮೆ ಒಬ್ಬ ಬೆಲೆವೆಣ್ಣನ್ನು ಕೂಡಿದೆ
ಎರಡೂವರೆ ರೂಪಾಯಿ ಕೊಟ್ಟು,
ಕತ್ತಲ ಓಣಿಯಲ್ಲಿ ಪಡೆದೆ, ಲೆಕ್ಕಾಚಾರದ ಪ್ರೀತಿ
ಕೊಟ್ಟ ಹಣಕ್ಕೆ ತಕ್ಕಷ್ಟು;
ನೆನಪಿಸಿಕೊಳ್ಳಲು ಅವಳ ಎಷ್ಟೋ ಯತ್ನಿಸುತ್ತೇನೆ
ಸ್ಮೃತಿಯ ತಳದಾಳಕ್ಕೇ ಜಾರಿ,
ಏನು ಮಾಡಿದರು ಸಹ ನೆನಪಾಗುತ್ತಿಲ್ಲವೇ
ಶ್ರೀಹರೀ ಶ್ರೀಹರೀ ಶ್ರೀಹರೀ!

ಅವಳ ಹೆಸರೆಂಥದೋ ನೆನಪಾಗುತ್ತಿಲ್ಲ ಈಗ
ಘಟನೆ ಬಲು ಹಿಂದೆ ನಡೆದದ್ದು,
ಏನವಳ ಹೆಸರು? ಮಾಲತಿಯೋ, ತರಂಗಿಣಿಯೊ
ರಾಧಾಮಣಿಯೊ, ನೆನಪು ಮಬ್ಬು;
ಇರಲಿ ಬಿಡಿ ಅದನ್ನೀಗ, ಒಂದು ಮಾತಂತು ನಿಜ
ಅವಳ ಜಡೆ ಬೆನ್ನಲ್ಲಿ ಜಾರಿ,
ಕಾಡಿಗೆ ಹೊಳಪಿನ ನೋಟ ಎದೆ ಸೀಳುವಂತಿತ್ತು
ಶ್ರೀಹರೀ ಶ್ರೀಹರೀ ಶ್ರೀಹರೀ!

ಎಷ್ಟನೆಯ ಸ್ವರ್ಗಕ್ಕೋ ರವಾನೆಯಾದಂತಿದ್ದೆ
ರತಿದೇವಿ ರೆಕ್ಕೆಯನ್ನೇರಿ,
ರೆಕ್ಕೆಯ ಸ್ಪರ್ಶವಷ್ಟೆ ನೆನಪಿನಲ್ಲುಳಿದಿದೆ
ಉಳಿದ ವಿವರಗಳೆಲ್ಲ ತೀರಿ;
ವಿಗ್ರಹದ ಮೂಗು ತುಟಿ ಕೈಕಾಲು ಕೆತ್ತನೆ
ಹೂತುಹೋಗಿದೆ ಮರವೆಯಲ್ಲಿ,
ಕಡೆದಿದ್ದ ಕಲ್ಲಷ್ಟೆ ನೆನಪಲ್ಲಿ ಉಳಿದಿದೆ
ಶ್ರೀಹರೀ ಶ್ರೀಹರೀ ಶ್ರೀಹರಿ!

ಕುರುಡನಿಗೆ ಕಂಡೀತು ಏನು? ಆದರೆ ನೋಡಿ,
ಕತ್ತಲೆಯನ್ನೆ ಅವನು ಹಾಡಬಹುದು,
ಕತ್ತಲೆಯಲ್ಲಿ ನಾನು ಮಟ್ಟೊಂದ ರಚಿಸಿದರೆ
ಹಾಡಲು ಅದಕ್ಕೆ ಒಂದು ಗೀತೆ ಬೇಕು;
ಎರಡೂವರೆ ರೂಪಾಯಿ ಕೊಂಡ ಪ್ರೀತಿಯು ಹೀಗೆ
ಹಾಡೊಂದು ಹುಟ್ಟಲು ಆಯ್ತು ದಾರಿ,
ಆಕಾಶ ಪುಟ್ಟ ಕೊಳದಲ್ಲಿ ಪ್ರತಿಬಿಂಬಿಸಿತು
ಶ್ರೀಹರೀ ಶ್ರೀಹರೀ ಶ್ರೀಹರೀ!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...