Home / ಕವನ / ಕೋಲಾಟ / ಸ್ವಾಮಿ ಶಂಕರನಾ ನೆನೆದೇವೂ

ಸ್ವಾಮಿ ಶಂಕರನಾ ನೆನೆದೇವೂ

(ಅಡ್ಡ ಗುಣತದ ಪಡ)
ತಂದನಾನೋ ತಾನನಂದ್ರನಾನಾ
ತಂದನಾಽನೋ ತಾನನಾ || ೧ ||

ನವ್ಲ ರಾಯರ ಪಟ್ಣಕೇ ಬಂದರಿಬ್ರ ಕಲ್ಲಾರೂ
ನೆವಲಂತಿ ಕರ್ ದಾರೋ ಯೆಮ್ಮೆ ದಿಂಬವಾಗೇ || ೨ ||

ನಾಗಪ್ಪಾ ನಾದಾಗೇ ಹೋಗಪ್ಪಾ ಗುತ್ತೀಗೇ
ಬಾರಪ್ಪಾ ಶುಗ್ದೀ, ಬೆಲೆ ಮುಂದೇ
ನಾಗಮಂಡಲವೇ ಗಯಸೂನೋ || ನಾಗಪ್ಪಾ
ಮಂಡಲಕೇ, ನೀರಾ ಯರೆಶೂನೋ (ಯೆರೆಶೂನೆ) || ನಾಗಪ್ಪಾ
ಹುಲ್ಲಾನಾದೆಲ್ಲೀ ಬಯವಿಲ್ಲಾ || ೩ ||

ದಾಟಿರದಕೇ ವಿಶವಿಲ್ಲಾ || ನಾಗಪ್ಪಾ
ನಾಗಮಂಡಲವೇ ಗೆಯಸೂನೋ || ೪ ||

ತಂದನಂದಾನೋ ತಾನನಂದೆ, ನಾನಾರ
ತಂದನಂದಾನೇ ತಾನನಾನಾ || ೫ ||

ಸ್ವಾಮೀ, ನೆನವೆನೋ ಬೂಮಿಗೊಂದ ನೆನಿಯೋ
ಶಿವನೇ ಶಿವನಿಂಗಾ ಶರಣೋ || ೬ ||

ತಂದನ್ನೋ ನಾನೇ ತಾನನಂದೆ ನಾನಾರ
ತಂದನ್ನೇ ತಾನೇ ತಂದನಾನಾ || ೭ ||

ಸ್ವಾಮಿ ನೆನವೆನೋ ಬೂಮಿಯ ನೆನವೆನು
ಸ್ವಾಮಿ ಶಂಕರನಾ ನೆನೆವೆನೊ|| ೮ ||

ಸ್ವಾಮಿ ಶಂಕರನಾ ನೆನದಿಟ್ಟಲಾದೀದರೆ
ಬರದೀದ ಹಾಡೇ ಬರಲಂದೋ || (ಬೋರೆದ್ದೀ) ಬಂದಾರೇ || ೯ ||

ಶಲ್ಪ ಕೋಲು ಶಮನಾ ಮಯಲಲ್ಲಿ || ಮಯ್ಲಲ್ಲೀ ಶಲ್ಲೀದಾರೆ
ಮಲ್ಲಿಗೂವೊಂದೇ ಮುಡಿಯುವೆನೂ || (ಮುಡಿಯುವೆ) ಕಲವೇರಾ ಕಲವೇರಾ || ೧೦ ||

ಹಾಡು ತಪ್ಪಿದರೇ ನಗಬೇಡಿ || (ನಗಬೇಡಿ) ಕಲಬೇರಾ
ಹಾಡೀಗೆ ಜೆನಿಯಾ ಜನವಿಲ್ಲಾ || ಬಾವಾದೀರ || ೧೧ ||

ಹಾಡು ತಪ್ಪಿದರೇ ನೆಗಬೇಡೀ || ಕಲಬೇರಾ
ಹಾಡಿಗೆ ಜೆನಿಯಾ ಮೂದಲಿಲ್ಲ || ಬಾವಾದೀರೇ
ಜೋಡಿನಾ ಜನವೇ ಬರಲಿಲ್ಲಾ || ೧೨ ||

ಇಂದನಂದಾನೋ ತಾನನಂದೆ ನಾನಾರ
ತಂದ ನಂದಾನೋ ತಾನನಾನಾ || ೧೩ ||
*****
ಹೇಳಿದವರು: ಕುಪ್ಪ ಬೇಡು ಗೌಡ, ಕಲವೇ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...