Home / ಕವನ / ಕೋಲಾಟ / ಸ್ವಾಮಿ ಶಂಕರನಾ ನೆನೆದೇವೂ

ಸ್ವಾಮಿ ಶಂಕರನಾ ನೆನೆದೇವೂ

(ಅಡ್ಡ ಗುಣತದ ಪಡ)
ತಂದನಾನೋ ತಾನನಂದ್ರನಾನಾ
ತಂದನಾಽನೋ ತಾನನಾ || ೧ ||

ನವ್ಲ ರಾಯರ ಪಟ್ಣಕೇ ಬಂದರಿಬ್ರ ಕಲ್ಲಾರೂ
ನೆವಲಂತಿ ಕರ್ ದಾರೋ ಯೆಮ್ಮೆ ದಿಂಬವಾಗೇ || ೨ ||

ನಾಗಪ್ಪಾ ನಾದಾಗೇ ಹೋಗಪ್ಪಾ ಗುತ್ತೀಗೇ
ಬಾರಪ್ಪಾ ಶುಗ್ದೀ, ಬೆಲೆ ಮುಂದೇ
ನಾಗಮಂಡಲವೇ ಗಯಸೂನೋ || ನಾಗಪ್ಪಾ
ಮಂಡಲಕೇ, ನೀರಾ ಯರೆಶೂನೋ (ಯೆರೆಶೂನೆ) || ನಾಗಪ್ಪಾ
ಹುಲ್ಲಾನಾದೆಲ್ಲೀ ಬಯವಿಲ್ಲಾ || ೩ ||

ದಾಟಿರದಕೇ ವಿಶವಿಲ್ಲಾ || ನಾಗಪ್ಪಾ
ನಾಗಮಂಡಲವೇ ಗೆಯಸೂನೋ || ೪ ||

ತಂದನಂದಾನೋ ತಾನನಂದೆ, ನಾನಾರ
ತಂದನಂದಾನೇ ತಾನನಾನಾ || ೫ ||

ಸ್ವಾಮೀ, ನೆನವೆನೋ ಬೂಮಿಗೊಂದ ನೆನಿಯೋ
ಶಿವನೇ ಶಿವನಿಂಗಾ ಶರಣೋ || ೬ ||

ತಂದನ್ನೋ ನಾನೇ ತಾನನಂದೆ ನಾನಾರ
ತಂದನ್ನೇ ತಾನೇ ತಂದನಾನಾ || ೭ ||

ಸ್ವಾಮಿ ನೆನವೆನೋ ಬೂಮಿಯ ನೆನವೆನು
ಸ್ವಾಮಿ ಶಂಕರನಾ ನೆನೆವೆನೊ|| ೮ ||

ಸ್ವಾಮಿ ಶಂಕರನಾ ನೆನದಿಟ್ಟಲಾದೀದರೆ
ಬರದೀದ ಹಾಡೇ ಬರಲಂದೋ || (ಬೋರೆದ್ದೀ) ಬಂದಾರೇ || ೯ ||

ಶಲ್ಪ ಕೋಲು ಶಮನಾ ಮಯಲಲ್ಲಿ || ಮಯ್ಲಲ್ಲೀ ಶಲ್ಲೀದಾರೆ
ಮಲ್ಲಿಗೂವೊಂದೇ ಮುಡಿಯುವೆನೂ || (ಮುಡಿಯುವೆ) ಕಲವೇರಾ ಕಲವೇರಾ || ೧೦ ||

ಹಾಡು ತಪ್ಪಿದರೇ ನಗಬೇಡಿ || (ನಗಬೇಡಿ) ಕಲಬೇರಾ
ಹಾಡೀಗೆ ಜೆನಿಯಾ ಜನವಿಲ್ಲಾ || ಬಾವಾದೀರ || ೧೧ ||

ಹಾಡು ತಪ್ಪಿದರೇ ನೆಗಬೇಡೀ || ಕಲಬೇರಾ
ಹಾಡಿಗೆ ಜೆನಿಯಾ ಮೂದಲಿಲ್ಲ || ಬಾವಾದೀರೇ
ಜೋಡಿನಾ ಜನವೇ ಬರಲಿಲ್ಲಾ || ೧೨ ||

ಇಂದನಂದಾನೋ ತಾನನಂದೆ ನಾನಾರ
ತಂದ ನಂದಾನೋ ತಾನನಾನಾ || ೧೩ ||
*****
ಹೇಳಿದವರು: ಕುಪ್ಪ ಬೇಡು ಗೌಡ, ಕಲವೇ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...