Home / ಕವನ / ಕವಿತೆ / ಬಡವನ್ ದೇವ್ರು

ಬಡವನ್ ದೇವ್ರು

ಸಾವರ್ ಜನಕೆ ಸಾವರ್ ದೇವ್ರು !
ಬಡವನ ದೇವ್ರು ವೊಟ್ಟೆ !
ದುಡ್ಡಿನ್ ಡಬ್ಬಿ ! ಯೋಳಾದ್ ಕೇಳು !
ಸತ್ಯಕ್ ನಾ ಬಾಯ್ ಕೊಟ್ಟೆ ! ೧

ತಿನ್ನದ್ ಕಲ್ಲಿನ್ ದೇವರ್ ಮುಂದೆ
ತಿಂಡಿ ತುಂಬಿದ ತಟ್ಟೆ !
ಕಾಲಿ ತಿಂದು ಕಾಲಿ ತಿಂದು
ಕೆರಳುರಳೈತೆ ವೊಟ್ಟೆ ! ೨

ಬಡವನ್ ದೇವ್ರನ್ ಕೆರಳಿಸ್ಬಾರ್‍ದು-
ಲೋಕಕ್ ಒಳ್ಳೇದಲ್ಲ !
ಬಡವನ್ ದೇವ್ರಿಗ್ ನೆರಳಿಸ್ತಿದ್ರೆ-
ಲೋಕಕ್ ಬೆಳಕೇ ಇಲ್ಲ ! ೩

ನೀ ಮುಗ್ದ್ ಪೂಜೇ ಮಾಡೋ ದೇವ್ರು
ಮುನ್ನೂರು ಮುವ್ವತ್ ಕೋಟಿ
ಇದ್ರೂ, ಬಡವನ್ ದೇವ್ರೀಗೂನೆ
ತೋರ್‍ಸು ಆ ಪೈಪೋಟಿ. ೪

ತಿನ್ಲೂನಾರ್‍ವು ದುಡಿಲೂನಾರ್‍ವು
ಕಲ್ಲಿನ್ ದೇವರ್ ಗುಂಪು !
ಬಡವನ್ ದೇವಿರ್‍ಗ್ ನೀನ್ ಇಕ್ಕಿದ್ರೆ
ನಿನ್ಗೆ ಬಾಳ ತಂಪು ! ೫

ನಂ ದೇವರ್‍ಗೆ ಬೋನ ನೀಡು-
ದರ್‍ಮ ಬರತೈತ್ ನಿಂಗೆ ;
ದುಡ್ಡಿನ್ ಡಬ್ಬಿ ಕರಗೀತ್ ಅಂತ
ಸುಂಕೆ ಕುಂತ್ರೆ ಯೆಂಗೆ ? ೬

ಅಗ್ನಾನೀಗೆ ಮೆಲ್ಗ್ ಯೋಳ್ತಾರೆ
ಎಂಟ್ ಅತ್ತ್ ಸಾರಿ ಬುದ್ದಿ;
ಕೇಳ್ದೆ ವೋದ್ರೆ ಗೊತ್ತೈತಲ್ಲ-
ಯಿಡಕೊಂಡ್ ಮಾಡ್ಸೋದ್ ಒದ್ದಿ ! ೭

ಬಡವನ್ ದೇವ್ರನ್ ಕೆಣಕ್ಲೆ ಬಾರ್‍ದು-
ನೀ ಕಂಡಿಲ್ ಅದರ್ ಯೇಟ !
ಬಡವನ್ ದೇವ್ರು, ಲೋಕಾನ್ ನುಂಗೋ
ಜೋಲಾಮುಕಿ ! ಬೇಟ ! ೮

ಬಡವನ್ ದೇವ್ರು ಗರ್‍ಜಿಸ್ತಿದ್ರೆ
ಕೇಳಿಸ್ತಿದ್ರ್, ಆ ಸದ್ದು-
ಕಲ್ಲಿನ್ ದೇವ್ರು ಗಿಲ್ಲಿನ್ ದೇವ್ರು
ಪೇರಿ ಕಿತ್ತಾರ್‌ ಎದ್ದು! ೯

ಬೆನ್ನಿನ್ ಚರ್‍ಮ ಬದ್ರಾಗ್ ಇರಲಿ !
ಬಡವನ್‌ ದೇವ್ರಿಗ್ ಬೊಗ್ಗು !
ಕಲ್ಲಿನ್ ದೇವಿರ್ಗ್ ಉಲ್ನೆ ತಿನ್ಸಿ
ಸದ್ಯಕ್ ಉಳದೇಂತ್‌ ಯಿಗ್ಗು ? ೧೦

ಲೋಕಕ್ ಸಾಂತಿ-ಬಡವನ್ ದೇವ್ರು
ಮಲಗಿರೋವರಗೂನೆ !
ಬಡವನ್ ದೇವ್ರು ಎದ್ದ್ ನಿಂತಾಂದ್ರೆ
ಪ್ರಳಯ ಅದಕೇ ತಾನೆ ! ೧೧

ಪ್ರಳಯ ಬಂದ್ರೆ ಯಾರ್‍ಗ್ ಏನ್ ಸುಕ ?
ನಾಸ-ಅರಸೂ ಆಳೂ !
ಸಾಯೋರ್ ಜತೆಗೇ ಸಾಯೋ ಬದಲು
ಎಲ್ಲಾರ್ ಸಂಗ್ಡ ಬಾಳು ! ೧೨
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...