Home / ಕವನ / ಕವಿತೆ / ಬಡವನ್ ದೇವ್ರು

ಬಡವನ್ ದೇವ್ರು

ಸಾವರ್ ಜನಕೆ ಸಾವರ್ ದೇವ್ರು !
ಬಡವನ ದೇವ್ರು ವೊಟ್ಟೆ !
ದುಡ್ಡಿನ್ ಡಬ್ಬಿ ! ಯೋಳಾದ್ ಕೇಳು !
ಸತ್ಯಕ್ ನಾ ಬಾಯ್ ಕೊಟ್ಟೆ ! ೧

ತಿನ್ನದ್ ಕಲ್ಲಿನ್ ದೇವರ್ ಮುಂದೆ
ತಿಂಡಿ ತುಂಬಿದ ತಟ್ಟೆ !
ಕಾಲಿ ತಿಂದು ಕಾಲಿ ತಿಂದು
ಕೆರಳುರಳೈತೆ ವೊಟ್ಟೆ ! ೨

ಬಡವನ್ ದೇವ್ರನ್ ಕೆರಳಿಸ್ಬಾರ್‍ದು-
ಲೋಕಕ್ ಒಳ್ಳೇದಲ್ಲ !
ಬಡವನ್ ದೇವ್ರಿಗ್ ನೆರಳಿಸ್ತಿದ್ರೆ-
ಲೋಕಕ್ ಬೆಳಕೇ ಇಲ್ಲ ! ೩

ನೀ ಮುಗ್ದ್ ಪೂಜೇ ಮಾಡೋ ದೇವ್ರು
ಮುನ್ನೂರು ಮುವ್ವತ್ ಕೋಟಿ
ಇದ್ರೂ, ಬಡವನ್ ದೇವ್ರೀಗೂನೆ
ತೋರ್‍ಸು ಆ ಪೈಪೋಟಿ. ೪

ತಿನ್ಲೂನಾರ್‍ವು ದುಡಿಲೂನಾರ್‍ವು
ಕಲ್ಲಿನ್ ದೇವರ್ ಗುಂಪು !
ಬಡವನ್ ದೇವಿರ್‍ಗ್ ನೀನ್ ಇಕ್ಕಿದ್ರೆ
ನಿನ್ಗೆ ಬಾಳ ತಂಪು ! ೫

ನಂ ದೇವರ್‍ಗೆ ಬೋನ ನೀಡು-
ದರ್‍ಮ ಬರತೈತ್ ನಿಂಗೆ ;
ದುಡ್ಡಿನ್ ಡಬ್ಬಿ ಕರಗೀತ್ ಅಂತ
ಸುಂಕೆ ಕುಂತ್ರೆ ಯೆಂಗೆ ? ೬

ಅಗ್ನಾನೀಗೆ ಮೆಲ್ಗ್ ಯೋಳ್ತಾರೆ
ಎಂಟ್ ಅತ್ತ್ ಸಾರಿ ಬುದ್ದಿ;
ಕೇಳ್ದೆ ವೋದ್ರೆ ಗೊತ್ತೈತಲ್ಲ-
ಯಿಡಕೊಂಡ್ ಮಾಡ್ಸೋದ್ ಒದ್ದಿ ! ೭

ಬಡವನ್ ದೇವ್ರನ್ ಕೆಣಕ್ಲೆ ಬಾರ್‍ದು-
ನೀ ಕಂಡಿಲ್ ಅದರ್ ಯೇಟ !
ಬಡವನ್ ದೇವ್ರು, ಲೋಕಾನ್ ನುಂಗೋ
ಜೋಲಾಮುಕಿ ! ಬೇಟ ! ೮

ಬಡವನ್ ದೇವ್ರು ಗರ್‍ಜಿಸ್ತಿದ್ರೆ
ಕೇಳಿಸ್ತಿದ್ರ್, ಆ ಸದ್ದು-
ಕಲ್ಲಿನ್ ದೇವ್ರು ಗಿಲ್ಲಿನ್ ದೇವ್ರು
ಪೇರಿ ಕಿತ್ತಾರ್‌ ಎದ್ದು! ೯

ಬೆನ್ನಿನ್ ಚರ್‍ಮ ಬದ್ರಾಗ್ ಇರಲಿ !
ಬಡವನ್‌ ದೇವ್ರಿಗ್ ಬೊಗ್ಗು !
ಕಲ್ಲಿನ್ ದೇವಿರ್ಗ್ ಉಲ್ನೆ ತಿನ್ಸಿ
ಸದ್ಯಕ್ ಉಳದೇಂತ್‌ ಯಿಗ್ಗು ? ೧೦

ಲೋಕಕ್ ಸಾಂತಿ-ಬಡವನ್ ದೇವ್ರು
ಮಲಗಿರೋವರಗೂನೆ !
ಬಡವನ್ ದೇವ್ರು ಎದ್ದ್ ನಿಂತಾಂದ್ರೆ
ಪ್ರಳಯ ಅದಕೇ ತಾನೆ ! ೧೧

ಪ್ರಳಯ ಬಂದ್ರೆ ಯಾರ್‍ಗ್ ಏನ್ ಸುಕ ?
ನಾಸ-ಅರಸೂ ಆಳೂ !
ಸಾಯೋರ್ ಜತೆಗೇ ಸಾಯೋ ಬದಲು
ಎಲ್ಲಾರ್ ಸಂಗ್ಡ ಬಾಳು ! ೧೨
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...