Home / ಕವನ / ಕವಿತೆ / ಬಡವನ್ ದೇವ್ರು

ಬಡವನ್ ದೇವ್ರು

ಸಾವರ್ ಜನಕೆ ಸಾವರ್ ದೇವ್ರು !
ಬಡವನ ದೇವ್ರು ವೊಟ್ಟೆ !
ದುಡ್ಡಿನ್ ಡಬ್ಬಿ ! ಯೋಳಾದ್ ಕೇಳು !
ಸತ್ಯಕ್ ನಾ ಬಾಯ್ ಕೊಟ್ಟೆ ! ೧

ತಿನ್ನದ್ ಕಲ್ಲಿನ್ ದೇವರ್ ಮುಂದೆ
ತಿಂಡಿ ತುಂಬಿದ ತಟ್ಟೆ !
ಕಾಲಿ ತಿಂದು ಕಾಲಿ ತಿಂದು
ಕೆರಳುರಳೈತೆ ವೊಟ್ಟೆ ! ೨

ಬಡವನ್ ದೇವ್ರನ್ ಕೆರಳಿಸ್ಬಾರ್‍ದು-
ಲೋಕಕ್ ಒಳ್ಳೇದಲ್ಲ !
ಬಡವನ್ ದೇವ್ರಿಗ್ ನೆರಳಿಸ್ತಿದ್ರೆ-
ಲೋಕಕ್ ಬೆಳಕೇ ಇಲ್ಲ ! ೩

ನೀ ಮುಗ್ದ್ ಪೂಜೇ ಮಾಡೋ ದೇವ್ರು
ಮುನ್ನೂರು ಮುವ್ವತ್ ಕೋಟಿ
ಇದ್ರೂ, ಬಡವನ್ ದೇವ್ರೀಗೂನೆ
ತೋರ್‍ಸು ಆ ಪೈಪೋಟಿ. ೪

ತಿನ್ಲೂನಾರ್‍ವು ದುಡಿಲೂನಾರ್‍ವು
ಕಲ್ಲಿನ್ ದೇವರ್ ಗುಂಪು !
ಬಡವನ್ ದೇವಿರ್‍ಗ್ ನೀನ್ ಇಕ್ಕಿದ್ರೆ
ನಿನ್ಗೆ ಬಾಳ ತಂಪು ! ೫

ನಂ ದೇವರ್‍ಗೆ ಬೋನ ನೀಡು-
ದರ್‍ಮ ಬರತೈತ್ ನಿಂಗೆ ;
ದುಡ್ಡಿನ್ ಡಬ್ಬಿ ಕರಗೀತ್ ಅಂತ
ಸುಂಕೆ ಕುಂತ್ರೆ ಯೆಂಗೆ ? ೬

ಅಗ್ನಾನೀಗೆ ಮೆಲ್ಗ್ ಯೋಳ್ತಾರೆ
ಎಂಟ್ ಅತ್ತ್ ಸಾರಿ ಬುದ್ದಿ;
ಕೇಳ್ದೆ ವೋದ್ರೆ ಗೊತ್ತೈತಲ್ಲ-
ಯಿಡಕೊಂಡ್ ಮಾಡ್ಸೋದ್ ಒದ್ದಿ ! ೭

ಬಡವನ್ ದೇವ್ರನ್ ಕೆಣಕ್ಲೆ ಬಾರ್‍ದು-
ನೀ ಕಂಡಿಲ್ ಅದರ್ ಯೇಟ !
ಬಡವನ್ ದೇವ್ರು, ಲೋಕಾನ್ ನುಂಗೋ
ಜೋಲಾಮುಕಿ ! ಬೇಟ ! ೮

ಬಡವನ್ ದೇವ್ರು ಗರ್‍ಜಿಸ್ತಿದ್ರೆ
ಕೇಳಿಸ್ತಿದ್ರ್, ಆ ಸದ್ದು-
ಕಲ್ಲಿನ್ ದೇವ್ರು ಗಿಲ್ಲಿನ್ ದೇವ್ರು
ಪೇರಿ ಕಿತ್ತಾರ್‌ ಎದ್ದು! ೯

ಬೆನ್ನಿನ್ ಚರ್‍ಮ ಬದ್ರಾಗ್ ಇರಲಿ !
ಬಡವನ್‌ ದೇವ್ರಿಗ್ ಬೊಗ್ಗು !
ಕಲ್ಲಿನ್ ದೇವಿರ್ಗ್ ಉಲ್ನೆ ತಿನ್ಸಿ
ಸದ್ಯಕ್ ಉಳದೇಂತ್‌ ಯಿಗ್ಗು ? ೧೦

ಲೋಕಕ್ ಸಾಂತಿ-ಬಡವನ್ ದೇವ್ರು
ಮಲಗಿರೋವರಗೂನೆ !
ಬಡವನ್ ದೇವ್ರು ಎದ್ದ್ ನಿಂತಾಂದ್ರೆ
ಪ್ರಳಯ ಅದಕೇ ತಾನೆ ! ೧೧

ಪ್ರಳಯ ಬಂದ್ರೆ ಯಾರ್‍ಗ್ ಏನ್ ಸುಕ ?
ನಾಸ-ಅರಸೂ ಆಳೂ !
ಸಾಯೋರ್ ಜತೆಗೇ ಸಾಯೋ ಬದಲು
ಎಲ್ಲಾರ್ ಸಂಗ್ಡ ಬಾಳು ! ೧೨
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...