Home / ಕವನ / ಕೋಲಾಟ / ಕನ್ನಡದ ಗಂಡಸರೆ

ಕನ್ನಡದ ಗಂಡಸರೆ

ಕನ್ನಡದ ಗಂಡಸರೆ ಧ್ವನಿ ನೀಡಿ ಕನ್ನಡಕೆ
ಕೋಲು ಕೋಲೆನ್ನಿರೊ
ಕಂಚಿನ ಧ್ವನಿ ನೀಡಿ
ಕಹಳೆಯ ಧ್ವನಿ ನೀಡಿ
ಶಂಖದ ಧ್ವನಿ ನೀಡಿ
ಕೋಲು….

ಕನ್ನಡದ ಕನ್ನೆಯರೆ ಧ್ವನಿ ನೀಡಿ ಕನ್ನಡಕೆ
ಕೋಲು ಕೋಲೆನ್ನಿರೊ
ಚಿನ್ನದ ಧ್ವನಿ ನೀಡಿ
ರನ್ನದ ಧ್ವನಿ ನೀಡಿ
ಬೆಳ್ಳಿಯ ಧ್ವನಿ ನೀಡಿ
ಕೋಲು….

ಹಾಡು ಕರೆಯುವುದೋ ಕನ್ನಡ
ನಾಡು ಕರೆಯುವುದೊ
ಕೋಲು ಕೋಲೆನ್ನಿರೊ
ಕಾಲಿನ ಗೆಜ್ಜೆ ಕರೆಯುವುದೋ ಪ್ರತಿ
ಹೆಜ್ಜೆ ಕರೆಯುವುದೊ
ಕೋಲು….

ಹೂವಿನ ಕೋಲು ತನ್ನಿರೊ
ನವಿಲಿನ ಕೋಲು ತನ್ನಿರೊ
ಕೋಲು ಕೋಲೆನ್ನಿರೊ
ಕುಣಿಯುವ ಕೋಲು ತನ್ನಿರೊ
ಹಾಡುವ ಕೋಲು ತನ್ನಿರೊ
ಕೋಲು….

ದಾರಿ ದಾರಿಗೆ ಹೂವ ಚೆಲ್ಲಿರೊ
ಕೇರಿ ಕೇರಿಗೆ ಬಣ್ಣವ ಚೆಲ್ಲಿರೊ
ಕೋಲು ಕೋಲೆನ್ನಿರೊ
ಕನ್ನಡಮ್ಮನ ಮುಂದೆ ಮಲ್ಲಿಗೆ ಚೆಲ್ಲಿರೊ
ಶ್ರೀ ಗಂಧವ ಚೆಲ್ಲಿರೊ
ಕೋಲು….

ಕನ್ನಡ ಜನಪದ ಹಾಡುಗಳ ಹಾಡಿರೊ
ಕನ್ನಡದ ಜನಪರ ಹಾಡುಗಳ ಹಾಡಿರೊ
ಕೋಲು ಕೋಲೆನ್ನಿರೊ
ಕನ್ನಡದ ಮುನ್ನಡೆಯ ಹಾಡುಗಳ ಹಾಡಿರೊ
ಕನ್ನಡದ ಜಯಭೇರಿ ಹಾಡುಗಳ ಹಾಡಿರೊ
ಕೋಲು….

ಕನ್ನಡಮ್ಮನಿಗೆ ಜಯವೆನ್ನಿರೋ
ಕನ್ನಡ ತಾಯಿ ಚಿರವೆನ್ನಿರೋ
ಕೋಲು….
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...