ಮದ ಮತ್ಸರ ಬಿಡದು.
ಮನದ ಕನಲು ನಿಲ್ಲದು.
ಒಡಲ ಗುಣ ಹಿಂಗದು.
ಇವ ಮೂರನು ಬಿಡದೆ ನಡಿಸುವನ್ನಕ್ಕ,
ಘನವ ಕಾಣಬಾರದು.
ಘನವ ಕಾಂಬುದಕ್ಕೆ,
ಮದಮತ್ಸರವನೆ ಬಿಟ್ಟು,
ಮನದ ಕನಲ ನಿಲಿಸಿ,
ಒಡಲ ಗುಣವನೆ ಹಿಂಗಿಸಿ,
ತಾ ಮೃಡರೂಪಾದಲ್ಲದೆ,
ಘನವ ಕಾಣಬಾರದೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಮದ ಮತ್ಸರ ಬಿಡದು.
ಮನದ ಕನಲು ನಿಲ್ಲದು.
ಒಡಲ ಗುಣ ಹಿಂಗದು.
ಇವ ಮೂರನು ಬಿಡದೆ ನಡಿಸುವನ್ನಕ್ಕ,
ಘನವ ಕಾಣಬಾರದು.
ಘನವ ಕಾಂಬುದಕ್ಕೆ,
ಮದಮತ್ಸರವನೆ ಬಿಟ್ಟು,
ಮನದ ಕನಲ ನಿಲಿಸಿ,
ಒಡಲ ಗುಣವನೆ ಹಿಂಗಿಸಿ,
ತಾ ಮೃಡರೂಪಾದಲ್ಲದೆ,
ಘನವ ಕಾಣಬಾರದೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****