ಮೂಲ: ವಿಲಿಯಂ ಬಟ್ಲರ್ ಏಟ್ಸ್
ಪ್ರದರ್ಶನಕ್ಕಿಟ್ಟ ಮೂಕಮೃಗದಂತೆ
ಸುತ್ತ ತಿರುಗುವೆನು ನಾನು,
ನಾನು ಯಾರು ಎನ್ನುವುದೆ ತಿಳಿಯದು,
ಎಲ್ಲಿ ಹೊರಟಿರುವೆ ಏನು?
ನನಗೆ ಗೊತ್ತಿರುವುದೊಂದೇ ಮಾತು
ಪ್ರೇಮಿಸಿರುವೆ ನಾನು, ನಾಚಿಕೆ –
ಗೇಡಿ ಪೂರ ನಾನು.
ನನ್ನ ಆತ್ಮ ಆರಾಧಿಸುತ್ತಿದೆ
ತನಗೇ ಆಗದ್ದನ್ನು,
ನಾಲ್ಕೂ ಊರಿ ನಡೆಯುವ ಮೃಗಕ್ಕೆ
ತಕ್ಕದು ಅನಿಸಿದ್ದನ್ನು.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.