Home / ಕವನ / ಕವಿತೆ / ಕರುನಾಡು ತಾಯ್ನಾಡು

ಕರುನಾಡು ತಾಯ್ನಾಡು

ಕರುನಾಡು ತಾಯ್ನಾಡು
ಕನ್ನಡದಾ ಸಿರಿನಾಡು
ಕನ್ನಡವು ಎಂದೆನಿತು ನುಡಿ ಮನವೆ||

ಶಿಲ್ಪ ಸಿಂಧೂರ ಕಲ್ಪಧಾರೆಯಲ್ಲಿ
ಪವಡಿಸುತಿದೆ ನಿನ್ನಲ್ಲಿ ಅನಂತಬಿಂಬ
ಸುಯ್ ಗುಟ್ಟುವ ತಂಗಾಳಿಯಲಿ
ಗಾನ ಝೇಂಕಾರ ಕೇಳ ಬರುತಿದೆ ನಿತ್ಯ ಸತ್ಯ||

ಗಗನ ಮೌನ ಸದೃಶ್ಯಧಾರೆಯಲ್ಲಿ
ಕಾರ್ಮೋಡಗಳ ಸೆರೆಯಲ್ಲಿ
ಸಿಡಿಲೊಂದು ಬಡಿದೆಬ್ಬಸಿ ಪೇಳುತಿದೆ ನಿತ್ಯಸತ್ಯ||

ಜೋಗದ ಸಿರಿಯಾಗಿ ಐಸಿರಿಯ ತೋರಿ
ಜಲಪಾತದ ಅಲೆಯಾಗಿ ಕಲರವ ದನಿಸೇರಿ
ಮಿಂಚು ಹೊಳಪಾಗಿ ತಾಯ್‌ನಾಡಸಿರಿನುಡಿಯುತಿದೆ ನಿತ್ಯಸತ್ಯ||

ಶಶಿಯು ಬಂದಾಗ ಉಷೆಯ ಕಂಡಾಗ
ಹೂಗಳರಳಿದವು ಆಗ ಚೈತ್ರ ಬಂತೊಂದು
ವರ್ಷದಾಗ ನಗುನಗುತಲಿ ಹಾಡೊಂದಹಾಡಿ
ನಲಿಯಿತು ಬೃ೦ಗ ಕನ್ನಡವೇ ನಿತ್ಯಸತ್ಯ||

ಅಮ್ಮಾ ಎಂದೆನುತಲಿ ನುಡಿಯುತ
ಬಂತೊಂದು ಶಿಶುವು ಹಾಲಕರೆಯ
ದನಿಯಲ್ಲಿ ಮುಗಳ್ ನಗೆಯ ಚೆಲ್ಲುತಾ
ಹಾಲ್‌ಗಲ್ಲ ಸವರಿ ರವಿಯು ಹೊಂಗಿರಣಕೆ
ಮರೆಮಾಚಿ ನಾಚಿ ನುಡಿಯಿತು ನಿತ್ಯಸತ್ಯ||
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...