ಅವತಾರಿ ಬರುತ್ತಾನೆ

ಅವನು ಬರುತ್ತಾನೆ
ಮಾತುಗಳ ಮಾಲೆಹಾಕಿಕೊಂಡು ಮೌನದ ಬೇಲಿ ಸುತ್ತಿಕೊಂಡು
ತನ್ನ ಪರಾಕು ಪಂಪ ತಾನೇ ಒತ್ತಿಕೊಳ್ಳುತ್ತ ಅಥವಾ ಒತ್ತಿಸಿಕೊಳ್ಳುತ್ತ
ತಲೆ ನಿಗುರಿಸಿ ಎದೆ ಉಬ್ಬಿಸಿ ಬಿಮ್ಮನೆ ಬೀಗಿ ಬರುತ್ತಾನೆ
ಮಾತಿನ ಹೊಳೆಯಲ್ಲಿ ಮಂತ್ರ ಮಹಾರಾಜರ ತೇಲಿಸಿ ಮುಳುಗಿಸುತ್ತ
ಬಾಯ ಒರಳಲ್ಲಿ ಹಿರಿಯರನರೆದಾಡುತ್ತ

ಹಲ್ಲ ತೀಟೆಯಲ್ಲಿ ಕಿರಿಯರ ಕೊರೆದು ಸಣ್ಣ ಮಾಡುತ್ತ
ಮೂಗಿನ ನೇರಕ್ಕೆ ಜಗವನಳೆದು ಸೀನಿ ಸುರಿಯುತ್ತ
ಬಡಾಯಿ ಬಾಹುಗಳ ಉದ್ದಗಲಗಳಿಗೆ ಚಾಚಿ ತಬ್ಬಿ
ಹೂಟ್ಟೆಯುಬ್ಬರ ತೋರುತ್ತ ತನ್ನಪ್ಪನೊಬ್ಬನೇ ಪರಮ ಪುರುಷ
ತನ್ನವಗವಳೊಬ್ಬಳೇ ಜಗಮೀರಿದ ಗರತಿ ಎನುತ್ತ

ತನ್ನ ವಂಶ ವೃಕ್ಷಕ್ಕೆ ಅನಾದಿ ಬೀಜದ ಪಾವಿತ್ರ್ಯ ತೋರುತ್ತ
ಹಗಲಿನ ಮುಖಕ್ಕೆ ಕೊಳ್ಳಿ ತೋರಿಸುತ್ತ
ವಿಶ್ವಗೂಢತೆಯ ರೋಮರೋಮಗಳಲ್ಲಿ ತುಂಬಿಕೊಂಡು
ತಾನು ಕುಡಿದೊಂದೆರಡು ಬಾವಿಗಳಲ್ಲಿ ಸಾಗರಗಳ ಮುಕ್ಕಳಿಸುತ್ತ
ತನ್ನ ಬಾಯಲ್ಲೀರೇಳು ಲೋಕಗಳ ಬಿಂಬಿಸಿ
ಕೃಪಾಪೋಷಕ ನಗೆಯಿಂದ ಜಗವ ಪಾವನಗೊಳಿಸಿ

ನಮ್ಮನು ಉದ್ಧರಿಸುಲು ಬರುತ್ತಾನೆ
ಬಂದು ನಿಂತು ಜಗದಗಲ ಮುಗಿಲಗಲವಾದ
ತನ್ನುದರದಡಿಯಲ್ಲಿ ನಮಗೆ ಕಾವು ಕೊಡುತ್ತಾನೆ
ಬೆಚ್ಚಗಿದೆಯೆಂದು ನಾವು ಆಶ್ರಯ ಪಡೆದೆವೋ ಸರಿ
ಕಪ್ಪ ನೆರಳಪುಟ್ಟಿ ನಮ್ಮ ಮುಚ್ಚಿ
ಉಸಿರುಕಟ್ಟಿ ನಾವು ಮೂಕರಾಗಿ
ಬಿಳಿಚಿಕೊಂಡು ಬೆಪ್ಪರಾದರೆ ಅವನ ತಪ್ಪೇ?

ನೋಡು ಅವನು ಬಂದೇ ಬರುತ್ತಾನೆ
ಬಿಡಿಸಿಕೊಳ್ಳಲು ನೀನು ಯತ್ನಿಸಿದಂತೆಲ್ಲಾ
ಪರಲೋಕಕೇರುವ ಪರಿಪೂರ್ಣ ಪವಾಡದೇಣಿಯಿಂದಾದರೂ
ನಿನ್ನ ಸೆಳೆದು ತನ್ನ ಸುತ್ತಲೇ ಜೇಡನಂತೆ ತಿರುಗಾಡಿಸುತ್ತಾ
ಕೊನೆಗೆ ನಿನ್ನ ನುಂಗಿ ನೀರು ಕುಡಿಯುತ್ತಾನೆ
ಸೋಹಮ್ಮೆಂದು ನಿನ್ನ ಸೊನ್ನೆಯಾಗಿಸುತ್ತಾನೆ
ನೀನು ನೀನಾಗುಳಿಯಬೇಕೆಂದರೆ ದೂರ ಓಡು
ಅಗೋ ಬಂದ! ಬಂದೇ ಬರುತ್ತಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಳಿಯನ ಅರ್ಹತೆ
Next post ಅನನ್ಯ ಹೇಮೆ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys