ಅನನ್ಯ ಹೇಮೆ

ಮುಚ್ಚಿಕೊಂಡ ಕದಗಳ
ಆಹ್ವಾನವಿಲ್ಲದ ಅಂತಃಪುರದೊಳಗೂ
ಹೇಗೋ ನುಗ್ಗಿಬಿಡುತ್ತಾಳೆ
ಗೊತ್ತೇ ಆಗದಂತೆ
ಮೆಲ್ಲ ಮೆಲ್ಲಗೆ ಗೂಡುಕಟ್ಟಿ
ಕನಸಿನ ಮೊಟ್ಟೆ ಇಟ್ಟುಬಿಡುತ್ತಾಳೆ
ಇವಳದೇ ಜೀವಭಾವ
ಮೈಮನಗಳ ತುಂಬಿಕೊಂಡು
ಮೊಟ್ಟೆಯೊಡೆದು ಹುಟ್ಟಿಬಂದ
ಕನಸಿನ ಕಂದನಿಗೆ
ವರ್ಣನೆಗೆ ಸಿಲುಕದ
ಅದೆಷ್ಟು ವರ್ಣಗಳು!
ಒಳಗೆಲ್ಲಾ ಹೋಲಿ
ಎರಚಿದ ರಂಗುಗಳು!

ಬಣ್ಣದ ಅಂತಃಪುರಕೆಲ್ಲ
ಜೀವ ಬಂದಿದೆ ಈಗ
ಇವಳು ಕಚಗುಳಿ ಇರಿಸಿ
ಕುಣಿಸಿದಂತೆಲ್ಲಾ
ತಕಥೈ ಕುಣಿಯುತ್ತಾ
ಅಪೂರ್ಣ ಕಥೆಗಳೇ
ಇತಿಹಾಸವಾಗಿಬಿಡುವ
ಈ ನಾಡಿನಲ್ಲಿ
ಮಾನುಷ ಬಣ್ಣಗಳು
ಇವಳ ಆವ್ಹಾಯಿಸಿಕೊಂಡೂ
ಅರ್ಥವಿಲ್ಲದ ಕಥೆಗಳಾಗಿಬಿಡುತ್ತವೆ.

ಜೀವ ಸೆಲೆಯುಕ್ಕಿಸುವ
ಇವಳು ಮಾತ್ರ
ಏನೂ ಗೊತ್ತಿಲ್ಲದಂತೆ ಒಳಗೇ
ಎಂದೆಂದಿಗೂ ಮುಗಿಯದ
ಜೀವಂತ ಕವಿತೆಯಾಗಿ ಉಕ್ಕುತ್ತಾ
ಹರಿಯುತ್ತಲೇ ಇರುತ್ತಾಳೆ
ಎಲ್ಲೆಡೆಗೆ ಹಬ್ಬಿ
ಎಲ್ಲರನೂ ತಬ್ಬಿ
ಪ್ರೇಮಸಂದೇಶ ಸಾರುತ್ತಲೇ ಉಳಿಯುತ್ತಾಳೆ
ಈ ಅನನ್ಯ ಹೇಮೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವತಾರಿ ಬರುತ್ತಾನೆ
Next post ಶೋಭಾಯಾತ್ರೆ ಹೊಂಟ ಯಡೂರಿ ಹಿಕಮತ್ತು

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…