Home / ಕವನ / ಕವಿತೆ / ಅನನ್ಯ ಹೇಮೆ

ಅನನ್ಯ ಹೇಮೆ

ಮುಚ್ಚಿಕೊಂಡ ಕದಗಳ
ಆಹ್ವಾನವಿಲ್ಲದ ಅಂತಃಪುರದೊಳಗೂ
ಹೇಗೋ ನುಗ್ಗಿಬಿಡುತ್ತಾಳೆ
ಗೊತ್ತೇ ಆಗದಂತೆ
ಮೆಲ್ಲ ಮೆಲ್ಲಗೆ ಗೂಡುಕಟ್ಟಿ
ಕನಸಿನ ಮೊಟ್ಟೆ ಇಟ್ಟುಬಿಡುತ್ತಾಳೆ
ಇವಳದೇ ಜೀವಭಾವ
ಮೈಮನಗಳ ತುಂಬಿಕೊಂಡು
ಮೊಟ್ಟೆಯೊಡೆದು ಹುಟ್ಟಿಬಂದ
ಕನಸಿನ ಕಂದನಿಗೆ
ವರ್ಣನೆಗೆ ಸಿಲುಕದ
ಅದೆಷ್ಟು ವರ್ಣಗಳು!
ಒಳಗೆಲ್ಲಾ ಹೋಲಿ
ಎರಚಿದ ರಂಗುಗಳು!

ಬಣ್ಣದ ಅಂತಃಪುರಕೆಲ್ಲ
ಜೀವ ಬಂದಿದೆ ಈಗ
ಇವಳು ಕಚಗುಳಿ ಇರಿಸಿ
ಕುಣಿಸಿದಂತೆಲ್ಲಾ
ತಕಥೈ ಕುಣಿಯುತ್ತಾ
ಅಪೂರ್ಣ ಕಥೆಗಳೇ
ಇತಿಹಾಸವಾಗಿಬಿಡುವ
ಈ ನಾಡಿನಲ್ಲಿ
ಮಾನುಷ ಬಣ್ಣಗಳು
ಇವಳ ಆವ್ಹಾಯಿಸಿಕೊಂಡೂ
ಅರ್ಥವಿಲ್ಲದ ಕಥೆಗಳಾಗಿಬಿಡುತ್ತವೆ.

ಜೀವ ಸೆಲೆಯುಕ್ಕಿಸುವ
ಇವಳು ಮಾತ್ರ
ಏನೂ ಗೊತ್ತಿಲ್ಲದಂತೆ ಒಳಗೇ
ಎಂದೆಂದಿಗೂ ಮುಗಿಯದ
ಜೀವಂತ ಕವಿತೆಯಾಗಿ ಉಕ್ಕುತ್ತಾ
ಹರಿಯುತ್ತಲೇ ಇರುತ್ತಾಳೆ
ಎಲ್ಲೆಡೆಗೆ ಹಬ್ಬಿ
ಎಲ್ಲರನೂ ತಬ್ಬಿ
ಪ್ರೇಮಸಂದೇಶ ಸಾರುತ್ತಲೇ ಉಳಿಯುತ್ತಾಳೆ
ಈ ಅನನ್ಯ ಹೇಮೆ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...