ಗೆಳೆಯ

ಇರ್‍ವರಿದ್ದೆವು ಗೆಳೆಯರೊಮ್ಮೆ ಕದನವ ಮಾಡಿ
ನೊಂದಿರಲು ನಾನತ್ತೆ; ಗೆಳೆಯ ನಕ್ಕನು. ನನ್ನ
ಮೊಗವು ಕೆಂಪೇರುತಿರೆ ಬೈಗಂತ, ಬಾವನ್ನ-
ದುಸಿರನನುಭವಿಸಿದೊಲು ತಣ್ಣಗಿದ್ದನು ನೋಡಿ.
ಕಂಪಿಸಿತು ನನ್ನ ಮೈ, ಗೆಳೆಯ ಗಹಗಹಿಸಿದನು
ಬಿಸುಸುಯ್ದೆ; ಉಕ್ಕಿ ಬರುತಿರುವ ಕಂಬನಿ ಮಿಡಿದೆ.
ಆಗ ಬಡವನ ಹಳಿವ ಧನಿಕನಂದದಿ ಬರಿದೆ
ಅಣಕುವಾಡಿದ ಗೆಳೆಯ. ಅದನೆಲ್ಲ ಸಹಿಸಿದೆನು.

ಮುಂದೊಮ್ಮೆ ದೇಶಾಂತರಕೆ ಪಯಣ ಬೆಳಸಿರಲು
ನಾನು, ಗೆಳೆಯನು ಬಂದ; ಮೌನವ್ರತವನು ಮುರಿದು,
ಅಗಲುತಿಹ ನನ್ನ ನಾಲಿಂಗಿಸಿದ, ಕಣ್ಣೀರು
ಕೋಡಿವರಿಯಲು ತೋಳಲೆನ್ನ ತಕ್ಕೈಸಿರಲು,-
ಎದೆಯಾಳದಿಂದುಕ್ಕಿ ಬಂತೊಲುಮೆ ಮೇಲ್ವರಿದು
ಅದರಾಳವನು ಹೋಲಬಹುದಾದ ಮುನ್ನೀರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಂತೆ ಜಾರಲಿ
Next post ಕಾಡುತಾವ ನೆನಪುಗಳು – ೨೧

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…