Home / ಕವನ / ಕೋಲಾಟ / ಈ ಹೂವಿನ ಕೋಲೇ

ಈ ಹೂವಿನ ಕೋಲೇ

ಕೋಲು ಕೋಲನ ಕೋಲಿನಾ ಈ ಹೂವಿನಾ ಕೋಲೇ
ಕೋಲೂ ಕೋಲೂ ಕೋಲನಾ | ಈ ಹೂವಿನಾ ಕೋಲೇ
ತಾತಾಯೆಂಬೋದು ತಂದಿ
ಚಿನ್ನಾಯೆಂಬೋದು ತಾಯಿ
ತಾಯಿ ತಂದಿ ಸತ್ತಮ್ಯಾಲೆ ತಬಲೀ ಕಾಣೋ ಮಾವಾಯ್ಯಾ
ಕೋಲೂ ಕೋಲನ ಕೋಲೋ | ಈ ಹೂವಿನಾ ಕೋಲು ||
ಹಳ್ಳಿವಳಗೀ ಜನ
ಹಳ್ಳೆಯ ಹೊಯ್ದಕೊಂಡು
ಕೊಳ್ಳಗೆ ಬೆಳಕಿನೊಳಗೇ
ತಿನ್ನತಾರೋ ಮಾವಯ್ಯಾ
ಕೋಲು ಕೋಲನ್ನ ಕೋಲಿನಾ | ಈ ಹೂವಿನ ಕೋಲೇ
ಕಾರಗೆಣಿಸು ಹೊಲವಾ
ಕಾವಲತ್ತು ಜಾಣಾ
ಹೋಗಿ ಹೊಲವಾ ಹೊಕ್ಯುವಲ್ಲೊ ಸಿವನೇ
ಹೊಲದಾವಾ ಮಡಿಕಾರು ಬಂಡಿ ಓಡಿ ಬಂದಾ
ಓಡಿ ಓಡಿ ಬಂದಾ ಹುಡ್ಗನ ಗೋಣಾ ಕೊಯ್ದಾ
ಆ ಪಾಪ ನಾನೇ ನೋಡಬಾರದು
ಹುಡ್ಗನ ತಾಯಿ-ತಂದೆ ಓಡಿ ಓಡಿ ಬಂದು
ಹಿಡೀ ಮಣ್ಣ ಕೊಟ್ಟೋ
ಅತ್ತು ಕರದೂ ಮಾಡಿ
ಹುಡ್ಗನ ಗುಡ್ಡಿ ಮ್ಯಾಲ ಬೀಳಿ ಸಸಿ ಹುಟ್ಟಿ
ಆಟಾತ್ ಈಟಾತ್ ಆಳ ದೊಡ್ಡದಾತೂ
ಆದ ಗಿಡವಾ ಕಡಸೀ ಬಂಡೀಸಾಲೀ ಮಾಡ್ಸಿ
ನಾಡ ನಡುವೇ ಕಡಸೀ ಅಚ್ಚವೇ ಮಾಡ್ಸೀ
ಹರೀಗಳ ಕಡಸೀ ಕೋಲಗಳ ಮಾಡೀ
ಅವು ಕೋಲ ಗೋಳಾ ಬಂಡೀ ಮ್ಯಾಲೆ ಹೇರಿ
ಸ್ವಾಮ್ಯಾ ಶಿವನಾ ಅನ್ನೋ ಯತ್ತನ್ನ ಕಟ್ಟಿ
ಚಹಾ ಅಂದ್ರ ಬಂಡೀ ಸಾಗಿನಲ್ಲ ದೋಶವೇ
ಯಾವ ಬೂಮಿ ತಾಯೀ ಬಂಡೀ ತರ
ನನ್ಗೆ ವಂದೆ ಹಬ್ಬಾ || ಹೇಳಿಕೊಡೊಚೆನ್ನಾ ||
ನಿನ್ಗೆ ವಂದ್ ಹಬ್ಬಾ ಶೀಗಿ ಹಣವೇ ಹಬ್ಬಾ
ಚಹಾ ಅಂದ ಬಂಡೀ ಸಾಗಿತಲ್ಲೋ ಸಿವನೇ ||
ಹತ್ತಂಬಾಳ ಹಲಗೇ ಬಡ್ಡಿ (ಅಣೀ)
ಇವತ ಚವಿರಾ ಚವರಾ ಬೀಸಿ
ನಮ್ಮನ್ನ ಹಿಂಡ್ತಿ ನೀರೀಗೆ ಹೋಗೀ
ಇನ್ನೂ ಬರಲಿಲ್ಲಾ ಇನ್ನೂ ಬರಲಿಲ್ಲಾ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...