Home / ಕವನ / ಕೋಲಾಟ / ಕೋಲಾಟದ ತುಂಡು ಪದಗಳು (ಚಿತ್ತಾರ ಬೊಂಬೆ)

ಕೋಲಾಟದ ತುಂಡು ಪದಗಳು (ಚಿತ್ತಾರ ಬೊಂಬೆ)

ಚಿತ್ತಾರ ಬೊಂಬೆ ನೀ ಯೆತ್ತಲಾಗ್ ಹೋದೇ?
ಯೆತ್ತಲಾಗಿ ಹೋದಾರೇನು? ಚಿತ್ತ ನಿನ ಮೇನೇ || ೧ ||

ಮೋವದಾ ಬೊಂಬೆ ನೀ, ಮೋ ಸ ಮಾಡಿ ಹೋದೇ
ಮೋಸ ಮಾಡಿ ಹೋದರೇನು? ದೇಸ ನಿನ್ನ ಮೇನೆ || ೨ ||

ಗೊಂಡಿ ಹೂಗಿಂನ ಮಾಲೀ, ಪುಂಡಿರ ತುರಬೀನ ಮೇನೇ
ನೋಡ್ ನನ್ ಕೋಲ್ ಪದನಾ ಚಿನ್ನದ ದುರೂಗದ ಮೇನೇ || ೩ ||

ಅಲ್ ಬಿತ್ ಮೂಗ್ತೀ ಇಲ್ ಬಿತ್ ಮೂಗ್ತೀ
ಬಾವನೋರ ಮೊಕ ನೋಡಿ ಬಾವಿಲ್ ಬಿತ್ತು ಮೂಗ್ತೀ || ೪ ||

ಅಕ್ನಮಂಡೆ ಸೋಗ್ ಮಂಡೆ ನನ್ನ ಮಂಡೆ ಗುಜರ್ ಮಂಡೆ
ಅಕ್ನ ಬಿಟ್ ಹೋಗೋ ಬಾವಾ ನನ ತಕ ಹೋಗೋ || ೫ ||

ಪುಂಡಗಾರ ಹಣ್ಣೇ
ಉದುರಂಗೀ ಹೂಂಗೇ ಉದರೇ ನನ್ನಂಗಳಕೇ || ೬ ||

ಚದುರರು ಚೂಡುವರು ಬರುಹೊತ್ತು ಮಲ್ಲುಗಿ ಹೊಂಗೇ
ಉದುರೇ ನನ್ನ ಸಾಲೀ ಸೆರಗೀಗೆ || ೭ ||
*****
ಹೇಳಿದವರು: ತಿಮ್ಮು ಮಾರಿ ನಾಯ್ಕ, ತಾರಿಬಾಗಿಲ, ಹೆಗಡೆ ಊರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...