ಒಡನಾಮ

ಬೆಳಕಿನಾಚೆಗೂ ಬೆಳಕು ಕೋಟಿ ಸೂರ್‍ಯ
ನನ್ನ ನಡೆಸುವವನು ನೀನು ತಾರೆ
ದಟ್ಟದರಿದ್ರನು ನಾನು ಭಾವದಿಂದ
ನಿತ್ಯ ನಿರ್‍ಮಿಕಲ್ಪನು ನಿ ಮೇರು ಸೂರ್‍ಯ

ಕೋಟಿ ಕೋಟಿ ಬ್ರಹ್ಮಾಂಡ ಯಜಮಾನ
ಆದರೂ ಕೇಳಬಲೆ ನನ್ನ ಕ್ಷೀಣ ದನಿ
ನನ್ನ ಅಂತರಾಳದಿ ನಡೆದ ಆ ಚಿಂತನೆ
ನೀನು ಆಲಿಸಲುಂಟು ನೀ ಯಜಮಾನಿ

ಆಕಾಶ ಪಾತಾಳ ಭೂ ಮಂಡಲ ನಿನ್ನದು
ಮತ್ತೇ ಜೀವ ಜೀವರಲಿ ನನ್ನ ರೂಪ
ಆದರೂ ಚೈತನ್ಯದಾಗರ ನಿ ಮಾಯಾವಿ
ಸರ್‍ವರಿಗೂ ನೀಡಿರುವ ಭಿನ್ನ ಕೂಪ

ಆದಿಯೂ ಅಂತ್ಯವು ಇರದ ಈ ಆತ್ಮ
ಇದರ ಕಾರಣ ಕರ್‍ತ ನೀನೆ ದೇವ
ನನ್ನದನ್ನೆ ಮರೆತು ಇನ್ನೊಂದರಲಿ ಬೆರೆತು
ಆಡುವುದನ್ನು ನೀ ನೋಡುವೆ ನಕ್ಕು ದೇವ

ಕ್ಷಯದ ಬಾಳು ಇದು ಬರೀ ಕನಸು
ವಾಸ್ತವ ಕನಸುಗಳಲಿ ಬದುಕಿನಾಟ
ನಿನ್ನ ವಿಶಾಲನೇತ್ರದಲಿ ಕರಗುವಾಸೆ
ಮಾಣಿಕ್ಯ ವಿಠಲನ ನಿತ್ಯ ಒಡನಾಟ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೩೬

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…