ಮೋಹಾನಂದ

ಗೋಪಾಲ ಗೋವಿಂದ ಯಶೋದೆ ಕಂದ
ತೋರೋ ನಿನ್ನಯ ವದನಾರವಿಂದ
ಕಾತರಿಸುತಿಹೆ ನಾನು ನಿನ್ನೆಯ ಕಾಣಲು
ದರುಶನವ ನೀಡೋ ರಾಧೇ ಗೋವಿಂದ

ಮಾಯಾ ಪ್ರಪಂಚ ಮರೆಸುತ್ತಿದೆ ನಿನ್ನ
ಆಸೆ ತೋರಿದ ಕಾಮ ಕಾಂಚನದಿಂದ
ನನ್ನ ರೂಪವೇ ನಾ ಮರೆತಿಹೆ ಕೇಶವ
ಸತಿ ಸುತರೆಂಬ ನಿತ್ಯ ಲೋಭದಿಂದ

ಕಣ್ಣಗಳಲ್ಲಿ ತುಂಬಿ ಹರಿದಿವೆ ಕಂಬನಿ ಕೃಷ್ಣ
ಏಕೈಕ ನಿನ್ನ ಕರಣಾ ಭಾವದಿಂದ
ಕೊಳಲು ಭಾವಗಾನ ಆಲಿಸಬೇಕೆಂದಿಹೆ
ನಿನ್ನಲಿ ಕರಗುವ ತನ್ಮಯ ಭಾವದಿಂದ

ನೀನಿಲ್ಲದ ನೀರಸವಾಗಿದೆ ಜೀವಾನಂದ
ಆನಂದ ಮರೆತು ದುಃಖ ದುಮ್ಮಾನದಿಂದ
ನಾಥನು ನೀನು ಮತ್ತೆ ಅನಾಥ ನಾನು
ಮಾಣಿಕ್ಯ ವಿಠಲನ ಭಕ್ತಿ ಮೋಹಾನಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೩೨
Next post ಮಲ್ಲಿ – ೧೦

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…