ಹಿಂಸೆ ಏಕೆ!

ನಿನ್ನ ಮನವು ಮೃದುವಿನಂತೆ ಕಠಿಣವೊ!
ಹಾಗೆಂದು ನಿನ್ನಲ್ಲಿ ಪ್ರಶ್ನೆ ಹಾಕಲೆ
ಹೌದು ಸಕಲ ಜೀವಿಂಗಳಲಿ ದಯೆ ನಿಡಿ
ಮರು ಕ್ಷಣವೆ ಪ್ರಾಣಿಗಳಿಗೆ ಕೀಟಲೆ

ಜೀವನ ನಿದ್ರಾ ಭಯ, ಕಾಮ
ಸಕಲ ಜೀವಿಂಗಳ ಇಂಗಿತವದು
ನಿಷ್ಟಾಪದಿ ನಿನಾ ಆಹಾರ ಕದ್ದರೆ
ವೈಚಾರಿಕ ನೀನಗಿಯೂ ಕೊಲ್ಲುವುದು

ಮನುಜ ದಯತೋರದಿರ್‍ದಡೆ
ಪ್ರಾಣಿಗಳ ಅವಸಾನ ನಿಶ್ಚಿತವು
ಎಲ್ಲವೂ ನಷ್ಟಿಸಿ ನೀನೆ ಬಾಳಬೇಕೆಂಬ
ತಿಳಿಯದೇ! ನಿನ್ನ ಬದುಕು ಅಶ್ಚಿತವು

ವೇದಾಂತ ಮಾತುಗಳ ಹೇಳಿದರಾಗದು
ನಿನ್ನ ಹೆಜ್ಜೆ ಹೆಜ್ಜೆಗಳಲೆ ಅವು ಕಾಣಬೇಕು
ನಡೆಯುವಾಗ ನಿಂತಾಗ ಕುಳಿತಾಗ
ಪ್ರಾಣಿಗಳ ಹಿಂಸಿಸದಂತೆ ಎಚ್ಚರಬೇಕು

ನಿನ್ನ ಒಂದೊಂದು ಕರ್‍ಮಗಳೆಲ್ಲ
ದೇವನ ಪುಸ್ತಕದಲಿ ಪ್ರಕಟವಾಗಿದವು
ಶುದ್ಧ ಕರ್‍ಮ ಶುದ್ಧ ಜೀವನ ಮಾತ್ರ
ಮಾಣಿಕ್ಯ ವಿಠಲನ ನೆನದವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨೫
Next post ಮಲ್ಲಿ – ೩

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…