Home / ಕಥೆ / ಕಾದಂಬರಿ / ಮಲ್ಲಿ – ೩

ಮಲ್ಲಿ – ೩

ಡೆಪ್ಯುಟೀಕಮೀಷನರ್ ಸ್ವಂತವಾಗಿ ಸೈನ್ಮಾಡಿರುವ ಪತ್ರ ಬಂದಿದೆ ಪಟೇಲರಿಗೆ. ಊರಿಗೆ ಊರೇ ಬೆರೆತುಕೊಂಡುಹೋಗಿದೆ. “ರಾಣಿ ಮೊಮ್ಮಗ ಬರುತಾರಂತೆ : ಈಗ ನಮ್ಮ ಬುದ್ದಿಯವರು ಹೋಗಬೇಕಂತೆ” ಎಂದು ಊರಿನವರಿಗೆಲ್ಲಾ ಸಂತೋಷ. “ಏನೇ ಅನ್ನು, ದೊಡ್ಮಬುದ್ಧಿಯವರಂಗಲ್ಲ ಇವರು. ಅವರು ಊರುಬಿಟ್ಟು ಇನ್ನೆಲ್ಲೂ ಹೋಗುತ್ತಲೇ ಇರಲಿಲ್ಲ. ಇರೋವರೆಗೂ ಎಲೇಮರೇ ಕಾಯಂಗೆ ಇದ್ದು ಶಿನನ ಪಾದ ಸೇರಿದರು. ಇವರು ಹಂಗಲ್ಲ. ನೋಡು ಸುಬೇದಾರ್ರು, ಸಬ್ಡಿನಿರ್ಜರು, ದುಪಟೀಕಮೀಷನ್ರವರೆಗೂ ಹತ್ತಿ ಬುಟ್ಟವರೆ. ಈಗ ರಾಣಿ ಮೊಮ್ಮಗನ್ನೇ ನೋಡತಾರೆ ಅಂದಮೇಲೆ ಮಹಾರಾಜರವರೆಗೂ ಹೋಗಲೇಬೇಕೋ? ಹುಟ್ಟಿದರೂ ಇಂತಾ ಮಗ ಹುಟ್ಟಬೇಕು ಮನೇಲಿ. ನೋಡು ಆನೇಕಾಡನೋರ ಮನೆತನ ಎಂಥಾದ್ದು ಅಂತ ಭೂಲೋಕಕ್ಕೆಲ್ಲ ಹಬ್ಬಿ ಬಿಡುತದೋ! ಭಲೇ ಭಲೇ” ಎಂದು ಒಬ್ಬ ಮುದುಕ ಅಂದ.

“ಈ ನಮ್ಮ ಬುದ್ಧಿ ಯೋರಿಗೆ ಇಂಗ್ಲೀಷು ಅಷ್ಟು ಬಂದಿರೋದಲ್ಲಾ ಬೇಕಾದರೆ ರೆವಿನ್ಯೂ ಕಮಿರ್ಷರು, ಕೌನ್ಸಿಲ್ಲರು, ಕೊನೆಗೆ ದಿವಾನ್ಗಿರಿ ಕೂಡ ಮಾಡೇ ಮಾಡೋ ಬುದ್ದಿ. ಏನು ಮಾಡೋದು ; ಕಲೀಲಿಲ್ಲ.”

” ಹಂಗಂತ ಅವರಿಗೇನಾ ಕಮ್ಮಿಯಾಗಿರೋದು ? ಈ ಸುತ್ತ ಮುತ್ತಲಿನಲ್ಲಿ, ಯಳಂದೂರು ಜಹಗೀರುದಾರನ್ನ ಬಿಟ್ಟರೆ, ಈ ಗತ್ತು, ಈ ಗಮ್ಮತ್ತು, ಯಾರಿಗುಂಟು ? ಅವರಿಗೆ ಇಂಗ್ಲೀಷ್ ಬಂದು ಅವರು ಅಧಿಕಾರ ಮಾಡಿದ್ದರೆ, ಅದು ನಮ್ಮ ಪುಣ್ಯಕ್ಕೆ ಆಯಿತಿತ್ತು.”

” ಈಗತಾನೇ ಏನಂತೆ ? ಇನ್ನೂ ಅವರಿಗೆ ಮುವ್ವತ್ತೋ ಮುವ್ವ ತ್ತೈದೋ ? ಈಗಲೂ ಕಲೀಬೇಕು ಅಂದರೆ ಬಹಳ ದೊಡ್ಡದಾ! ಅವರು ಮನಸ್ಸು ಮಾಡಲಿ. ಈ ಠಸ್ ಪುಸ್ ಹ್ಯಾಟ್ ಬೂಟ್ ಎಲ್ಲಾ ಒಂದೇ ವರುಷದಲ್ಲಿ ಕಲೀದಿದ್ದರೆ, ನನ್ನ ಹೆಸರು ಬೇರೆ ಇಡು.”

ಹೀಗೆ ಊರ ಅರಳಿಯ ಕಟ್ಟೆಯಮೇಲೆ ಎಲ್ಲರೂ ಎಳೆ ಬಿಸಿಲು ಕಾಯಿಸಿಕೊಳ್ಳುತ್ತ ಹರಟೆ ಹೊಡೆಯುತ್ತ ಕುಳಿತಿರುವಾಗ, ಕೆಂಪಿಯು ಅತ್ತ ಕಡೆ ನೀರಿಗೆ ಹರವಿ ತಕೊಂಡು ಹೊರಟಿದ್ದಳು. ಊರ ಗೌಡರೆಲ್ಲ ಕೂತಿರುವಾಗ ತಾನು ಬಿರುಬೀಸಾಗಿ ಹೊರಟರೆ ಆದೀತೆ ? ಮುಸುಕು ನೇರವಾಗಿ ತಲೆತುಂಬಾ ಹೊದೆದುಕೊಂಡು, ಸೆರಗು ಎಳೆದು ಕೊಂಡು ಮೈ ತುಂಬಾ ಹೊಡೆದುಕೊಂಡು, ತಲೆ ಬಗ್ಗಿಸಿಕೊಂಡು ಹೊರ ಟಳು. ಅಲ್ಲಿ ಅಡಕೆ ಹಾಕಿಕೊಂಡು ಹೊಗೆಸೊಪ್ಪು ತಿಕ್ಕುತ್ತ ಕುಳಿ ತಿದ್ದ ಗೌಡನೊಬ್ಬನು “ಏನು ಕೆಂಪಕ್ಕ, ನಿಮಗೂ ಪಯಣವಂತೆ ?” ಅಂದನು.

ಅವಳು ತನ್ನ ಸಂತೋಷವನ್ನು ಮುಚ್ಚಿಕೊಳ್ಳಲಾರದೆ, ಹೊರ ಸೂಸುವವಳಂತೆ ಮೊರದಗಲವಾಗಿರುವ ಮೊಕದ ತುಂಬಾ ನಗುವನ್ನು ಹಿಡಿತವಾಗಿ ನಗುತ್ತಾ, “ಏನೋ ಹಿರೀಕರ ಪುಣ್ಯ ನಿಮ್ಮ ಪಾದ. ನಿಮ್ಮೂರು ಬಂದು ಸೇರಿದೋ ; ನಿಮ್ಮ ಹೊಟ್ಟೆಯಲ್ಲಿ ಇಟ್ಟು ಕೊಂಡು ಕಾಪಾಡುತಿದೀರಿ.” ಅಂದು ಮುಂದೆ ಹೊರಟು ಹೋದಳು.

ಇನ್ನೊಬ್ಬನು “ಏನೇ ಅನ್ನು, ಮಾನವಂತೆ, ಹಲ್ಕಾಗಿಲ್ಕಾ ಅಲ್ಲ !” ಅಂದನು.

“ಅಂತಾ ಚೆಲ್ಲಾಟ ಆಡಿದ್ದರೆ, ನಮ್ಮೂರಲ್ಲಿ ನಿಲ್ಲಾಕೇ ಆಗುತಿರಲಿಲ್ಲ. ಒಂದೇ ದಿನ. ಓಡಿಸಿ ಬುಡುತ್ತಿದ್ದೊ! ಅದೂ ನಾಯ ಬುಟ್ಟು? ಅಂದ ಇನ್ನೊಬ್ಬ.

ಆ ಕೊನೆಯಲ್ಲಿ ಕೂತಿದ್ದವನ್ಕು “ಅವಳ ಮೊಕದ ಮೇಲೆ ಆ ರೂಪಾಯಗಲದ ಕುಂಕುಮ ಮೊಕದ ತುಂಬಾ ಅರತಿಣ, ನೋಡಿದರೆ, ಎಷ್ಟು, ಸಂತೋಷವಾಗುತ್ತದೆ ಅಂತೀಯಾ ?” ಅಂದೆ.

“ಎಲಾ! ಬಿಸಿಲಾಯಿತು. ಇನ್ನು ಹೊಲಗದ್ದೆ ಕಡೆ ನೋಡಿ ಕೊಂಡು ಬಸೋಕಿಲ್ಲವಾ? ಏಳೇಳಿ. ಹಗಲ ಮಾತು ಕೆಲಸ ಗೇಡು.”

ಎಲ್ಲರೂ ಎದ್ದು ಒದರಿಕೊಂಡು ಹೊರಟರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...