Home / ಕಥೆ / ಕಾದಂಬರಿ / ಮಲ್ಲಿ – ೩

ಮಲ್ಲಿ – ೩

ಡೆಪ್ಯುಟೀಕಮೀಷನರ್ ಸ್ವಂತವಾಗಿ ಸೈನ್ಮಾಡಿರುವ ಪತ್ರ ಬಂದಿದೆ ಪಟೇಲರಿಗೆ. ಊರಿಗೆ ಊರೇ ಬೆರೆತುಕೊಂಡುಹೋಗಿದೆ. “ರಾಣಿ ಮೊಮ್ಮಗ ಬರುತಾರಂತೆ : ಈಗ ನಮ್ಮ ಬುದ್ದಿಯವರು ಹೋಗಬೇಕಂತೆ” ಎಂದು ಊರಿನವರಿಗೆಲ್ಲಾ ಸಂತೋಷ. “ಏನೇ ಅನ್ನು, ದೊಡ್ಮಬುದ್ಧಿಯವರಂಗಲ್ಲ ಇವರು. ಅವರು ಊರುಬಿಟ್ಟು ಇನ್ನೆಲ್ಲೂ ಹೋಗುತ್ತಲೇ ಇರಲಿಲ್ಲ. ಇರೋವರೆಗೂ ಎಲೇಮರೇ ಕಾಯಂಗೆ ಇದ್ದು ಶಿನನ ಪಾದ ಸೇರಿದರು. ಇವರು ಹಂಗಲ್ಲ. ನೋಡು ಸುಬೇದಾರ್ರು, ಸಬ್ಡಿನಿರ್ಜರು, ದುಪಟೀಕಮೀಷನ್ರವರೆಗೂ ಹತ್ತಿ ಬುಟ್ಟವರೆ. ಈಗ ರಾಣಿ ಮೊಮ್ಮಗನ್ನೇ ನೋಡತಾರೆ ಅಂದಮೇಲೆ ಮಹಾರಾಜರವರೆಗೂ ಹೋಗಲೇಬೇಕೋ? ಹುಟ್ಟಿದರೂ ಇಂತಾ ಮಗ ಹುಟ್ಟಬೇಕು ಮನೇಲಿ. ನೋಡು ಆನೇಕಾಡನೋರ ಮನೆತನ ಎಂಥಾದ್ದು ಅಂತ ಭೂಲೋಕಕ್ಕೆಲ್ಲ ಹಬ್ಬಿ ಬಿಡುತದೋ! ಭಲೇ ಭಲೇ” ಎಂದು ಒಬ್ಬ ಮುದುಕ ಅಂದ.

“ಈ ನಮ್ಮ ಬುದ್ಧಿ ಯೋರಿಗೆ ಇಂಗ್ಲೀಷು ಅಷ್ಟು ಬಂದಿರೋದಲ್ಲಾ ಬೇಕಾದರೆ ರೆವಿನ್ಯೂ ಕಮಿರ್ಷರು, ಕೌನ್ಸಿಲ್ಲರು, ಕೊನೆಗೆ ದಿವಾನ್ಗಿರಿ ಕೂಡ ಮಾಡೇ ಮಾಡೋ ಬುದ್ದಿ. ಏನು ಮಾಡೋದು ; ಕಲೀಲಿಲ್ಲ.”

” ಹಂಗಂತ ಅವರಿಗೇನಾ ಕಮ್ಮಿಯಾಗಿರೋದು ? ಈ ಸುತ್ತ ಮುತ್ತಲಿನಲ್ಲಿ, ಯಳಂದೂರು ಜಹಗೀರುದಾರನ್ನ ಬಿಟ್ಟರೆ, ಈ ಗತ್ತು, ಈ ಗಮ್ಮತ್ತು, ಯಾರಿಗುಂಟು ? ಅವರಿಗೆ ಇಂಗ್ಲೀಷ್ ಬಂದು ಅವರು ಅಧಿಕಾರ ಮಾಡಿದ್ದರೆ, ಅದು ನಮ್ಮ ಪುಣ್ಯಕ್ಕೆ ಆಯಿತಿತ್ತು.”

” ಈಗತಾನೇ ಏನಂತೆ ? ಇನ್ನೂ ಅವರಿಗೆ ಮುವ್ವತ್ತೋ ಮುವ್ವ ತ್ತೈದೋ ? ಈಗಲೂ ಕಲೀಬೇಕು ಅಂದರೆ ಬಹಳ ದೊಡ್ಡದಾ! ಅವರು ಮನಸ್ಸು ಮಾಡಲಿ. ಈ ಠಸ್ ಪುಸ್ ಹ್ಯಾಟ್ ಬೂಟ್ ಎಲ್ಲಾ ಒಂದೇ ವರುಷದಲ್ಲಿ ಕಲೀದಿದ್ದರೆ, ನನ್ನ ಹೆಸರು ಬೇರೆ ಇಡು.”

ಹೀಗೆ ಊರ ಅರಳಿಯ ಕಟ್ಟೆಯಮೇಲೆ ಎಲ್ಲರೂ ಎಳೆ ಬಿಸಿಲು ಕಾಯಿಸಿಕೊಳ್ಳುತ್ತ ಹರಟೆ ಹೊಡೆಯುತ್ತ ಕುಳಿತಿರುವಾಗ, ಕೆಂಪಿಯು ಅತ್ತ ಕಡೆ ನೀರಿಗೆ ಹರವಿ ತಕೊಂಡು ಹೊರಟಿದ್ದಳು. ಊರ ಗೌಡರೆಲ್ಲ ಕೂತಿರುವಾಗ ತಾನು ಬಿರುಬೀಸಾಗಿ ಹೊರಟರೆ ಆದೀತೆ ? ಮುಸುಕು ನೇರವಾಗಿ ತಲೆತುಂಬಾ ಹೊದೆದುಕೊಂಡು, ಸೆರಗು ಎಳೆದು ಕೊಂಡು ಮೈ ತುಂಬಾ ಹೊಡೆದುಕೊಂಡು, ತಲೆ ಬಗ್ಗಿಸಿಕೊಂಡು ಹೊರ ಟಳು. ಅಲ್ಲಿ ಅಡಕೆ ಹಾಕಿಕೊಂಡು ಹೊಗೆಸೊಪ್ಪು ತಿಕ್ಕುತ್ತ ಕುಳಿ ತಿದ್ದ ಗೌಡನೊಬ್ಬನು “ಏನು ಕೆಂಪಕ್ಕ, ನಿಮಗೂ ಪಯಣವಂತೆ ?” ಅಂದನು.

ಅವಳು ತನ್ನ ಸಂತೋಷವನ್ನು ಮುಚ್ಚಿಕೊಳ್ಳಲಾರದೆ, ಹೊರ ಸೂಸುವವಳಂತೆ ಮೊರದಗಲವಾಗಿರುವ ಮೊಕದ ತುಂಬಾ ನಗುವನ್ನು ಹಿಡಿತವಾಗಿ ನಗುತ್ತಾ, “ಏನೋ ಹಿರೀಕರ ಪುಣ್ಯ ನಿಮ್ಮ ಪಾದ. ನಿಮ್ಮೂರು ಬಂದು ಸೇರಿದೋ ; ನಿಮ್ಮ ಹೊಟ್ಟೆಯಲ್ಲಿ ಇಟ್ಟು ಕೊಂಡು ಕಾಪಾಡುತಿದೀರಿ.” ಅಂದು ಮುಂದೆ ಹೊರಟು ಹೋದಳು.

ಇನ್ನೊಬ್ಬನು “ಏನೇ ಅನ್ನು, ಮಾನವಂತೆ, ಹಲ್ಕಾಗಿಲ್ಕಾ ಅಲ್ಲ !” ಅಂದನು.

“ಅಂತಾ ಚೆಲ್ಲಾಟ ಆಡಿದ್ದರೆ, ನಮ್ಮೂರಲ್ಲಿ ನಿಲ್ಲಾಕೇ ಆಗುತಿರಲಿಲ್ಲ. ಒಂದೇ ದಿನ. ಓಡಿಸಿ ಬುಡುತ್ತಿದ್ದೊ! ಅದೂ ನಾಯ ಬುಟ್ಟು? ಅಂದ ಇನ್ನೊಬ್ಬ.

ಆ ಕೊನೆಯಲ್ಲಿ ಕೂತಿದ್ದವನ್ಕು “ಅವಳ ಮೊಕದ ಮೇಲೆ ಆ ರೂಪಾಯಗಲದ ಕುಂಕುಮ ಮೊಕದ ತುಂಬಾ ಅರತಿಣ, ನೋಡಿದರೆ, ಎಷ್ಟು, ಸಂತೋಷವಾಗುತ್ತದೆ ಅಂತೀಯಾ ?” ಅಂದೆ.

“ಎಲಾ! ಬಿಸಿಲಾಯಿತು. ಇನ್ನು ಹೊಲಗದ್ದೆ ಕಡೆ ನೋಡಿ ಕೊಂಡು ಬಸೋಕಿಲ್ಲವಾ? ಏಳೇಳಿ. ಹಗಲ ಮಾತು ಕೆಲಸ ಗೇಡು.”

ಎಲ್ಲರೂ ಎದ್ದು ಒದರಿಕೊಂಡು ಹೊರಟರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...