Home / ಕಥೆ / ಕಾದಂಬರಿ / ಮಲ್ಲಿ – ೩

ಮಲ್ಲಿ – ೩

ಡೆಪ್ಯುಟೀಕಮೀಷನರ್ ಸ್ವಂತವಾಗಿ ಸೈನ್ಮಾಡಿರುವ ಪತ್ರ ಬಂದಿದೆ ಪಟೇಲರಿಗೆ. ಊರಿಗೆ ಊರೇ ಬೆರೆತುಕೊಂಡುಹೋಗಿದೆ. “ರಾಣಿ ಮೊಮ್ಮಗ ಬರುತಾರಂತೆ : ಈಗ ನಮ್ಮ ಬುದ್ದಿಯವರು ಹೋಗಬೇಕಂತೆ” ಎಂದು ಊರಿನವರಿಗೆಲ್ಲಾ ಸಂತೋಷ. “ಏನೇ ಅನ್ನು, ದೊಡ್ಮಬುದ್ಧಿಯವರಂಗಲ್ಲ ಇವರು. ಅವರು ಊರುಬಿಟ್ಟು ಇನ್ನೆಲ್ಲೂ ಹೋಗುತ್ತಲೇ ಇರಲಿಲ್ಲ. ಇರೋವರೆಗೂ ಎಲೇಮರೇ ಕಾಯಂಗೆ ಇದ್ದು ಶಿನನ ಪಾದ ಸೇರಿದರು. ಇವರು ಹಂಗಲ್ಲ. ನೋಡು ಸುಬೇದಾರ್ರು, ಸಬ್ಡಿನಿರ್ಜರು, ದುಪಟೀಕಮೀಷನ್ರವರೆಗೂ ಹತ್ತಿ ಬುಟ್ಟವರೆ. ಈಗ ರಾಣಿ ಮೊಮ್ಮಗನ್ನೇ ನೋಡತಾರೆ ಅಂದಮೇಲೆ ಮಹಾರಾಜರವರೆಗೂ ಹೋಗಲೇಬೇಕೋ? ಹುಟ್ಟಿದರೂ ಇಂತಾ ಮಗ ಹುಟ್ಟಬೇಕು ಮನೇಲಿ. ನೋಡು ಆನೇಕಾಡನೋರ ಮನೆತನ ಎಂಥಾದ್ದು ಅಂತ ಭೂಲೋಕಕ್ಕೆಲ್ಲ ಹಬ್ಬಿ ಬಿಡುತದೋ! ಭಲೇ ಭಲೇ” ಎಂದು ಒಬ್ಬ ಮುದುಕ ಅಂದ.

“ಈ ನಮ್ಮ ಬುದ್ಧಿ ಯೋರಿಗೆ ಇಂಗ್ಲೀಷು ಅಷ್ಟು ಬಂದಿರೋದಲ್ಲಾ ಬೇಕಾದರೆ ರೆವಿನ್ಯೂ ಕಮಿರ್ಷರು, ಕೌನ್ಸಿಲ್ಲರು, ಕೊನೆಗೆ ದಿವಾನ್ಗಿರಿ ಕೂಡ ಮಾಡೇ ಮಾಡೋ ಬುದ್ದಿ. ಏನು ಮಾಡೋದು ; ಕಲೀಲಿಲ್ಲ.”

” ಹಂಗಂತ ಅವರಿಗೇನಾ ಕಮ್ಮಿಯಾಗಿರೋದು ? ಈ ಸುತ್ತ ಮುತ್ತಲಿನಲ್ಲಿ, ಯಳಂದೂರು ಜಹಗೀರುದಾರನ್ನ ಬಿಟ್ಟರೆ, ಈ ಗತ್ತು, ಈ ಗಮ್ಮತ್ತು, ಯಾರಿಗುಂಟು ? ಅವರಿಗೆ ಇಂಗ್ಲೀಷ್ ಬಂದು ಅವರು ಅಧಿಕಾರ ಮಾಡಿದ್ದರೆ, ಅದು ನಮ್ಮ ಪುಣ್ಯಕ್ಕೆ ಆಯಿತಿತ್ತು.”

” ಈಗತಾನೇ ಏನಂತೆ ? ಇನ್ನೂ ಅವರಿಗೆ ಮುವ್ವತ್ತೋ ಮುವ್ವ ತ್ತೈದೋ ? ಈಗಲೂ ಕಲೀಬೇಕು ಅಂದರೆ ಬಹಳ ದೊಡ್ಡದಾ! ಅವರು ಮನಸ್ಸು ಮಾಡಲಿ. ಈ ಠಸ್ ಪುಸ್ ಹ್ಯಾಟ್ ಬೂಟ್ ಎಲ್ಲಾ ಒಂದೇ ವರುಷದಲ್ಲಿ ಕಲೀದಿದ್ದರೆ, ನನ್ನ ಹೆಸರು ಬೇರೆ ಇಡು.”

ಹೀಗೆ ಊರ ಅರಳಿಯ ಕಟ್ಟೆಯಮೇಲೆ ಎಲ್ಲರೂ ಎಳೆ ಬಿಸಿಲು ಕಾಯಿಸಿಕೊಳ್ಳುತ್ತ ಹರಟೆ ಹೊಡೆಯುತ್ತ ಕುಳಿತಿರುವಾಗ, ಕೆಂಪಿಯು ಅತ್ತ ಕಡೆ ನೀರಿಗೆ ಹರವಿ ತಕೊಂಡು ಹೊರಟಿದ್ದಳು. ಊರ ಗೌಡರೆಲ್ಲ ಕೂತಿರುವಾಗ ತಾನು ಬಿರುಬೀಸಾಗಿ ಹೊರಟರೆ ಆದೀತೆ ? ಮುಸುಕು ನೇರವಾಗಿ ತಲೆತುಂಬಾ ಹೊದೆದುಕೊಂಡು, ಸೆರಗು ಎಳೆದು ಕೊಂಡು ಮೈ ತುಂಬಾ ಹೊಡೆದುಕೊಂಡು, ತಲೆ ಬಗ್ಗಿಸಿಕೊಂಡು ಹೊರ ಟಳು. ಅಲ್ಲಿ ಅಡಕೆ ಹಾಕಿಕೊಂಡು ಹೊಗೆಸೊಪ್ಪು ತಿಕ್ಕುತ್ತ ಕುಳಿ ತಿದ್ದ ಗೌಡನೊಬ್ಬನು “ಏನು ಕೆಂಪಕ್ಕ, ನಿಮಗೂ ಪಯಣವಂತೆ ?” ಅಂದನು.

ಅವಳು ತನ್ನ ಸಂತೋಷವನ್ನು ಮುಚ್ಚಿಕೊಳ್ಳಲಾರದೆ, ಹೊರ ಸೂಸುವವಳಂತೆ ಮೊರದಗಲವಾಗಿರುವ ಮೊಕದ ತುಂಬಾ ನಗುವನ್ನು ಹಿಡಿತವಾಗಿ ನಗುತ್ತಾ, “ಏನೋ ಹಿರೀಕರ ಪುಣ್ಯ ನಿಮ್ಮ ಪಾದ. ನಿಮ್ಮೂರು ಬಂದು ಸೇರಿದೋ ; ನಿಮ್ಮ ಹೊಟ್ಟೆಯಲ್ಲಿ ಇಟ್ಟು ಕೊಂಡು ಕಾಪಾಡುತಿದೀರಿ.” ಅಂದು ಮುಂದೆ ಹೊರಟು ಹೋದಳು.

ಇನ್ನೊಬ್ಬನು “ಏನೇ ಅನ್ನು, ಮಾನವಂತೆ, ಹಲ್ಕಾಗಿಲ್ಕಾ ಅಲ್ಲ !” ಅಂದನು.

“ಅಂತಾ ಚೆಲ್ಲಾಟ ಆಡಿದ್ದರೆ, ನಮ್ಮೂರಲ್ಲಿ ನಿಲ್ಲಾಕೇ ಆಗುತಿರಲಿಲ್ಲ. ಒಂದೇ ದಿನ. ಓಡಿಸಿ ಬುಡುತ್ತಿದ್ದೊ! ಅದೂ ನಾಯ ಬುಟ್ಟು? ಅಂದ ಇನ್ನೊಬ್ಬ.

ಆ ಕೊನೆಯಲ್ಲಿ ಕೂತಿದ್ದವನ್ಕು “ಅವಳ ಮೊಕದ ಮೇಲೆ ಆ ರೂಪಾಯಗಲದ ಕುಂಕುಮ ಮೊಕದ ತುಂಬಾ ಅರತಿಣ, ನೋಡಿದರೆ, ಎಷ್ಟು, ಸಂತೋಷವಾಗುತ್ತದೆ ಅಂತೀಯಾ ?” ಅಂದೆ.

“ಎಲಾ! ಬಿಸಿಲಾಯಿತು. ಇನ್ನು ಹೊಲಗದ್ದೆ ಕಡೆ ನೋಡಿ ಕೊಂಡು ಬಸೋಕಿಲ್ಲವಾ? ಏಳೇಳಿ. ಹಗಲ ಮಾತು ಕೆಲಸ ಗೇಡು.”

ಎಲ್ಲರೂ ಎದ್ದು ಒದರಿಕೊಂಡು ಹೊರಟರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...