Home / ಕವನ / ಕವಿತೆ / ಈ ಮೋಸ ದೋಸವಲ್ಲ

ಈ ಮೋಸ ದೋಸವಲ್ಲ

ಅಗಲೆಲ್ಲ ಬೆವರ್ ಅರ್‍ಸಿ
ಜೀತ ಕೆರ್‍ಕೊಂಡು
ಅಟ್ಟೀಗ್ ನಾ ಬತ್ತಂದ್ರೆ
ಮೈ ಕೈ ಮುರ್‍ಕೊಂಡು
ಜೋಬೆಲ್ಲ ಜಡ್ತಿ
ಮಾಡ್ತೌಳ್ ನನ್ ಎಡ್ತಿ! ೧

ಒಂದ್ ದಪ ತಂದ್ ಜೀತ
ಪೂರ ಕೊಟ್ಬುಟ್ಟಿ
ಯೆಂಡಕ್ ಒಂಬತ್ ಕಾಸ
ಕೇಳ್ದ್ರೆ ಬಾಯ್ಬುಟ್ಟಿ-
ಪೊರಕೇನ್ ಎತ್ತಿಡ್ದಿ
ಬಡಿದೌಳ್ ನನ್ ಎಡ್ತಿ! ೨

ಯೆಂಡಾನೆ ನಂ ದೇವ್ರು!
ತಿರ್‌ಮೂರ್‍ತಿ ಯೆಂಡ!
ನಮ್ಮುಟ್ಸಿ ಬದ್ಸೋದು
ಸಾಯ್ಸೋದು ಯೆಂಡ!
ಯೆಂಡ ಬುಡ್ತಂದ್ರೆ
ನಂ ಜೀಮ್ಕೆ ತೊಂದ್ರೆ! ೩

ಕಲಿಗಾಲ! ಸವಿಗಾಲ!
ಬದುಕೋಕ್ ಆಗಾಲ್ಲ!
ಸಾಚಾ ಮನಸರ್‍ಗನಕ
ಉಳಗಾಲಾನಿಲ್ಲ!
ಅದರಿಂದೊಂದ್ ಇಕ್ಮತ್
ಮಾಡ್ದೆ! ಬಲ್ ಗಮ್ಮತ್! ೪

ಯೆಂಡಕ್ ಬಂದ್ ಎಳ್ಡಾಣೆ
ಕೂದ್ಲಾಗ ಸಿಕ್ಸಿ
ಅಟ್ಟೀಗ್ ಬಂದ್ ತಕ್ಸಾನ
ಜೋಬ್ ಒದ್ರಿ ಬೊಗ್ಸಿ
ಯೆಡ್ತೀಗೆ ಮೋಸ
ಮಾಡ್ದ್ರೆ ಸಂತೋಸ! ೫

ಮೋಸ ನಂಗ್ ಮಾಡಂತ
ಬೇಡ್ತದ್ ಜಗತ್ತು!
ಅದಕೇನೆ ಯಿಡಿದೀನಿ
ಪಟ್ಟಾಗ್ ಇಕ್ಮತ್ತು!
ಈ ಮಾದ್ರಿ ಮೋಸ
ಆಗ್ದಣ್ಣ ದೋಸ! ೬
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...