ಧಾರವಾಡದ ತಾಯೆ

ಧಾರವಾಡ ತಾಯೆ
ನಿನ್ನದೆಂತ ಮಾಯೆ!
ಚಿತ್ತ ತಣಿಸುವ ಸತ್ಯ ಸಾರುವ
ತತ್ತ್ವಲೇಪದ ಕಾವ್ಯ ಕರ್ಮಕೆ
ಮಡಿಲು ಆದ ತಾಯೆ-ಆಹ
ನಿನ್ನದೆಂತ ಮಾಯೆ!
ಲೋಕ ಮೆಚ್ಚುವ ಸತ್ವ ಮಿಂಚುವ
ಆದಿ ಪಂಪ ಆ ಕುವರವ್ಯಾಸರ
ನಿನ್ನ ಹೊನ್ನ ಸಿರಿ ಗರ್ಭದಿ ಅರಳಿಸಿ
ಜಗಕೆ ತಂದೆಯಲ್ಲೆ
ಓ ಧಾರವಾಡ ತಾಯೆ
ಮೆರೆಸಿ ನಿನ್ನ ಮಾಯೆ!
ಅಡಿಗಣ ಪ್ರಾಸಕೆ ನಿಲುಕದ ಪದವ
ಬರೆದಾs ಶರೀಫ ಕನಕರ ನುಡಿಯಲಿ
ತೋರುತ ನಿನ್ನಯ ಚಿನ್ಮಯ ಛಾಯೆ
ಎಲ್ಲೆಯ ಮೀರಿದೆಯಲ್ಲೆ
ಓ ಧಾರವಾಡ ತಾಯೆ
ತೋರಿ ನಿನ್ನ ಮಾಯೆ!
ಬೆಂದರೆ ಆಗುವ ಬೇಂದ್ರೆ ಎನ್ನುವ
ಕಾವ್ಯದ ಕರೆಯಲೆ ಗಂಗೆಯ ಇಳಿಸುವ
ಸತ್ಯದ ಸಾಕ್ಷಾತ್ಕಾರವ ತೋರುತ
ಮನದಿ ನಿಂತೆಯಲ್ಲೆ
ಓ ಧಾರವಾಡ ತಾಯಿ – ನಾ
ಅರಿಯೆ ನಿನ್ನ ಮಾಯೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವಗಾನ
Next post ಹೆಂಗಸು

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…