ಧಾರವಾಡದ ತಾಯೆ

ಧಾರವಾಡ ತಾಯೆ
ನಿನ್ನದೆಂತ ಮಾಯೆ!
ಚಿತ್ತ ತಣಿಸುವ ಸತ್ಯ ಸಾರುವ
ತತ್ತ್ವಲೇಪದ ಕಾವ್ಯ ಕರ್ಮಕೆ
ಮಡಿಲು ಆದ ತಾಯೆ-ಆಹ
ನಿನ್ನದೆಂತ ಮಾಯೆ!
ಲೋಕ ಮೆಚ್ಚುವ ಸತ್ವ ಮಿಂಚುವ
ಆದಿ ಪಂಪ ಆ ಕುವರವ್ಯಾಸರ
ನಿನ್ನ ಹೊನ್ನ ಸಿರಿ ಗರ್ಭದಿ ಅರಳಿಸಿ
ಜಗಕೆ ತಂದೆಯಲ್ಲೆ
ಓ ಧಾರವಾಡ ತಾಯೆ
ಮೆರೆಸಿ ನಿನ್ನ ಮಾಯೆ!
ಅಡಿಗಣ ಪ್ರಾಸಕೆ ನಿಲುಕದ ಪದವ
ಬರೆದಾs ಶರೀಫ ಕನಕರ ನುಡಿಯಲಿ
ತೋರುತ ನಿನ್ನಯ ಚಿನ್ಮಯ ಛಾಯೆ
ಎಲ್ಲೆಯ ಮೀರಿದೆಯಲ್ಲೆ
ಓ ಧಾರವಾಡ ತಾಯೆ
ತೋರಿ ನಿನ್ನ ಮಾಯೆ!
ಬೆಂದರೆ ಆಗುವ ಬೇಂದ್ರೆ ಎನ್ನುವ
ಕಾವ್ಯದ ಕರೆಯಲೆ ಗಂಗೆಯ ಇಳಿಸುವ
ಸತ್ಯದ ಸಾಕ್ಷಾತ್ಕಾರವ ತೋರುತ
ಮನದಿ ನಿಂತೆಯಲ್ಲೆ
ಓ ಧಾರವಾಡ ತಾಯಿ – ನಾ
ಅರಿಯೆ ನಿನ್ನ ಮಾಯೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವಗಾನ
Next post ಹೆಂಗಸು

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…