ಕರ್‍ಣಾಟಕ ಸೀಮೆಯಾಗೆ…

ಮುಂಗೋಳಿ ಕೂಗಿತ್ತು ಕನ್ನಡದ ಪದ ಹಾಡಿ
ರಥವೇರಿ ಬರುತ್ತಿದ್ದ ನೇಸರಗೆ
ಬೆಳ್ಳಕ್ಕಿ ಹಿಂಡಾಗ ಬರೆದಿತ್ತು ಸ್ವಾಗತವ
ಹಾರಾಡಿ ನೀಲಿ ಆಗಸದಾಗೆ
ಮೊಗ್ಗಾದ ಹೂವುಗಳು ಅರಳ್ಯಾವೊ ದಳ ತೆರೆದು
ಚೆಲ್ಲುತ್ತ ಕನ್ನಡದ ಕಸ್ತೂರಿಯ
ಉಣಿಸುತ್ತ ಕಂಪನ್ನು ಬಗೆಬಗೆಯ ಜೀವಕ್ಕೆ
ಸಾರೈತೊ ಈ ಮಣ್ಣಿನ ಮಹಿಮೆಯ
ಗಿರಿ ನವಿಲು ಕುಣಿದಿತ್ತು ಹಸಿರಾದ ಗರಿಬಿಚ್ಚಿ
ಕಾವೇರಿ ಹೊಳೆಯ ಅಂಚಿನಾಗ
ಕಂಡ ಕಣ್ ಸೆಳೆದಿತ್ತು; ಸೆರೆ ಹಿಡಿದು ಬಿಡದಿತ್ತು
ಕರ್ಣಾಟ ಸೀಮೆಯ ಗತ್ತಿನಾಗ
ಅಂಬಾ ಎನ್ನುರ ಗೋವು ಕಚ್ಚೆ ರುಮಾಲ ರೈತ
ಹೊಂಟಾರು ಚಿನ್ನದ ಮಣ್ಣ ಮ್ಯಾಗ
ಬೆವರ್‍ಹನಿ ಇಳಿಸುತ್ತ ಕೈಲಾಸ ತೋರ್‍ಯಾರೊ
ಸ್ವರ್ಗಾವೆ ಇಳಿದಂತ ಭೂಮ್ಯಾಗ
ಕಪ್ಪಾದ ತೆರೆ ಸರಿಸಿ ಬಂದ ಬೆಳಕಿನ ರಾಯ
ಕರುನಾಡ ಸೀಮೆಯ ಸಿರಿ ತೋರಿದ
ಇದ ಕಂಡು ಮನಸೋತು ಮೈದುಂಬಿದ ನನ್ನ
ಈ ಮಣ್ಣ ಹಾಡಿಂದ ಕವಿ ಮಾಡಿದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಜಯಶ್ರೀ
Next post ಆಯ್ದಯ್ದರನಿತಯ್ದುತಯ್ದಿತಾ ಕಾಲಂ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…