ಕರ್‍ಣಾಟಕ ಸೀಮೆಯಾಗೆ…

ಮುಂಗೋಳಿ ಕೂಗಿತ್ತು ಕನ್ನಡದ ಪದ ಹಾಡಿ
ರಥವೇರಿ ಬರುತ್ತಿದ್ದ ನೇಸರಗೆ
ಬೆಳ್ಳಕ್ಕಿ ಹಿಂಡಾಗ ಬರೆದಿತ್ತು ಸ್ವಾಗತವ
ಹಾರಾಡಿ ನೀಲಿ ಆಗಸದಾಗೆ
ಮೊಗ್ಗಾದ ಹೂವುಗಳು ಅರಳ್ಯಾವೊ ದಳ ತೆರೆದು
ಚೆಲ್ಲುತ್ತ ಕನ್ನಡದ ಕಸ್ತೂರಿಯ
ಉಣಿಸುತ್ತ ಕಂಪನ್ನು ಬಗೆಬಗೆಯ ಜೀವಕ್ಕೆ
ಸಾರೈತೊ ಈ ಮಣ್ಣಿನ ಮಹಿಮೆಯ
ಗಿರಿ ನವಿಲು ಕುಣಿದಿತ್ತು ಹಸಿರಾದ ಗರಿಬಿಚ್ಚಿ
ಕಾವೇರಿ ಹೊಳೆಯ ಅಂಚಿನಾಗ
ಕಂಡ ಕಣ್ ಸೆಳೆದಿತ್ತು; ಸೆರೆ ಹಿಡಿದು ಬಿಡದಿತ್ತು
ಕರ್ಣಾಟ ಸೀಮೆಯ ಗತ್ತಿನಾಗ
ಅಂಬಾ ಎನ್ನುರ ಗೋವು ಕಚ್ಚೆ ರುಮಾಲ ರೈತ
ಹೊಂಟಾರು ಚಿನ್ನದ ಮಣ್ಣ ಮ್ಯಾಗ
ಬೆವರ್‍ಹನಿ ಇಳಿಸುತ್ತ ಕೈಲಾಸ ತೋರ್‍ಯಾರೊ
ಸ್ವರ್ಗಾವೆ ಇಳಿದಂತ ಭೂಮ್ಯಾಗ
ಕಪ್ಪಾದ ತೆರೆ ಸರಿಸಿ ಬಂದ ಬೆಳಕಿನ ರಾಯ
ಕರುನಾಡ ಸೀಮೆಯ ಸಿರಿ ತೋರಿದ
ಇದ ಕಂಡು ಮನಸೋತು ಮೈದುಂಬಿದ ನನ್ನ
ಈ ಮಣ್ಣ ಹಾಡಿಂದ ಕವಿ ಮಾಡಿದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಜಯಶ್ರೀ
Next post ಆಯ್ದಯ್ದರನಿತಯ್ದುತಯ್ದಿತಾ ಕಾಲಂ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys