ಗ್ರಹಚಾರ

ನಾನು ನೀನಾಡಿಸುವ ಸೂತ್ರದ ಗೊಂಬೆ
ಆದರೆ ನಿನ್ನ ಮರೆತು ಬಾಳಿರುವೆ
ಎಲ್ಲಕ್ಕೂ ನಾನೆಂಬ ಅಹಂಕಾರದಲಿ
ನನ್ನ ಮೂಲಧಾಮವೆ ಮರೆತಿರುವೆ

ನಾವು ನಮ್ಮವರೆಲ್ಲ ಭವದ ಜಾತ್ರೆಯಲಿ
ಆದರೆ ಜಾತ್ರೆಯೇ ಆಗಿದೆ ನೈಜ ಪಾತ್ರೆ
ಮತ್ತೆ ಮತ್ತೆ ಕಷ್ಟ ನಷ್ಟಗಳ ಮರೆಸಲು
ನುಂಗುತ್ತಿರುವೆ ನಾ ಕಾಂಪೋಸ್ ಮಾತ್ರೆ

ಸಾಗರದ ಯಾವ ತೀರದಲ್ಲೂ ನಾನು
ಅಥವಾ ನೀರ ಮಧ್ಯದಲ್ಲಿ ಮುಳಗಿಹನೊ
ಏನೊಂದು ಅರಿಯದ ನಾನೋರ್‍ವ
ನಾನೇ ಈ ಜಗತ್ತು ಹೊತ್ತಂತೆ ಇಹನೊ

ಬೆಳಗು ಕತ್ತಲುಗಳ ಬಾಳ ರಾತ್ರಿ
ಮತ್ತೊಮ್ಮೆ ಸಾವು ಕಾಳರಾತ್ರಿ
ಸಾವನ್ನು ಮರೆತು ಬದುಕನ್ನೆ ಚಿತ್ರಿಸುವ
ನಾವು ಹೆಣೆಯುವವು ಹುಸಿಸ್ವಪ್ನಗಳ ರಾತ್ರಿ

ಹೌದೌದು ನಮಗೆ ಈಗಷ್ಟೇ ಎಚ್ಚರ
ಎಷ್ಟೊತ್ತಿನ ವರೆಗೂ ಈ ವಿಚಾರ
ಕಾಮ ಕ್ರೋಧ ಕ್ರಿಯೆ ಜಾಲ ಬೀಸಿದರಾಯ್ತು
ಮಾಣಿಕ್ಯ ವಿಠಲನಾಗದ ಗ್ರಹಚಾರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೭
Next post ಪಾಪಿಯ ಪಾಡು – ೨೦

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…