ಗ್ರಹಚಾರ

ನಾನು ನೀನಾಡಿಸುವ ಸೂತ್ರದ ಗೊಂಬೆ
ಆದರೆ ನಿನ್ನ ಮರೆತು ಬಾಳಿರುವೆ
ಎಲ್ಲಕ್ಕೂ ನಾನೆಂಬ ಅಹಂಕಾರದಲಿ
ನನ್ನ ಮೂಲಧಾಮವೆ ಮರೆತಿರುವೆ

ನಾವು ನಮ್ಮವರೆಲ್ಲ ಭವದ ಜಾತ್ರೆಯಲಿ
ಆದರೆ ಜಾತ್ರೆಯೇ ಆಗಿದೆ ನೈಜ ಪಾತ್ರೆ
ಮತ್ತೆ ಮತ್ತೆ ಕಷ್ಟ ನಷ್ಟಗಳ ಮರೆಸಲು
ನುಂಗುತ್ತಿರುವೆ ನಾ ಕಾಂಪೋಸ್ ಮಾತ್ರೆ

ಸಾಗರದ ಯಾವ ತೀರದಲ್ಲೂ ನಾನು
ಅಥವಾ ನೀರ ಮಧ್ಯದಲ್ಲಿ ಮುಳಗಿಹನೊ
ಏನೊಂದು ಅರಿಯದ ನಾನೋರ್‍ವ
ನಾನೇ ಈ ಜಗತ್ತು ಹೊತ್ತಂತೆ ಇಹನೊ

ಬೆಳಗು ಕತ್ತಲುಗಳ ಬಾಳ ರಾತ್ರಿ
ಮತ್ತೊಮ್ಮೆ ಸಾವು ಕಾಳರಾತ್ರಿ
ಸಾವನ್ನು ಮರೆತು ಬದುಕನ್ನೆ ಚಿತ್ರಿಸುವ
ನಾವು ಹೆಣೆಯುವವು ಹುಸಿಸ್ವಪ್ನಗಳ ರಾತ್ರಿ

ಹೌದೌದು ನಮಗೆ ಈಗಷ್ಟೇ ಎಚ್ಚರ
ಎಷ್ಟೊತ್ತಿನ ವರೆಗೂ ಈ ವಿಚಾರ
ಕಾಮ ಕ್ರೋಧ ಕ್ರಿಯೆ ಜಾಲ ಬೀಸಿದರಾಯ್ತು
ಮಾಣಿಕ್ಯ ವಿಠಲನಾಗದ ಗ್ರಹಚಾರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೭
Next post ಪಾಪಿಯ ಪಾಡು – ೨೦

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…