ಸುಮ್ಮನೆ ಹೀಗೇ..

ಅಂದಿನಂತೆಯೇ ಇಂದೂ
ಕ್ಷಣಗಳ ಯುಗವಾಗಿಸಿ
ಮುಖಾಮುಖಿ ಕುಳಿತಿದ್ದೇವೆ
ಏತಕ್ಕೋ ಕಾಡಿದ್ದೇವೆ!
ಅಥವಾ ಸುಮ್ಮನೆ ಹೀಗೇ…

ಭಾವುಕತೆ ಮೀರಿದ್ದೇವೆ
ಸ್ಥಿತಪ್ರಜ್ಞರಾಗಿದ್ದೇವೆ
ಮಾತಿಗೆ ಅರ್ಥವಿಲ್ಲ
ಮೌನ ವ್ಯರ್ಥವಲ್ಲ!
ತಿಳಿದಿದ್ದೇವೆ.

ಬಹುದೂರ ಸಾಗಿದ್ದೇವೆ
ಏನೆಲ್ಲಾ ನೀಗಿದ್ದೇವೆ
ಹಮ್ಮುಗಳನಿಳಿಸಿ ಬಾಗಿದ್ದೇವೆ
ಮತ್ತೆ ಮತ್ತೆ ಕಾಲನ ಕೈಗೆ
ಸಿಕ್ಕು ಮಾಗಿದ್ದೇವೆ
ಸ್ವಲ್ಪ ಬೆಳೆದಿದ್ದೇವೆ?
ಮತ್ತೆ ಈಗ ಎದುರಾಗಿದ್ದೇವೆ!

ತುಟಿತೆರೆಯದೆಯೂ ಆಡಿದ
ಸಾವಿರ ಅವ್ಯಕ್ತ ಮಾತು
ಮನಗಳಿಗೆ ಗೊತ್ತು!
ತಿಳಿದಿರಬಹುದು ಹೊತ್ತು
ಏಕೆ ಬೇರೆಯವರ ಮಾತು?

ಏತಕ್ಕೋ ಕಾದಿದ್ದರೂ…
ನಿರಾಳ ಕುಳಿತಿದ್ದೇವೆ
ನಿಟ್ಟುಸಿರ ಎಣಿಸಿದ್ದೇವೆ
ಪರಸ್ಪರ ನೋವುಗಳ
ಕೊಟ್ಟು ಪಡೆದಿದ್ದೇವೆ
ಸುಮ್ಮನೆ ಮುಗ್ಧತೆ
ನಟಿಸುತ್ತೇವೆ ಹೀಗೆ…

ಮುಖಾಮುಖಿ ಕುಳಿತಿದ್ದೆವು!
ಕುಳಿತಿದ್ದೇವೆ!
ಕುಳಿತಿರುತ್ತೇವೆ?
ಬದುಕು ಚಿಕ್ಕದು
ಕಾಲ ದೊಡ್ಡದು
ನಾವು ಸುಮ್ಮನೆ ಹೀಗೇ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಕಮಾನ್ಯರು
Next post ಗೋಕಾಕ್ ಚಳುವಳಿ ಅಂತ ರಂಪ ಮಾಡ್ಲಿಕತ್ತಾನಲ್ರಿ ಚಂಪಾ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…