ಸುಮ್ಮನೆ ಹೀಗೇ..

ಅಂದಿನಂತೆಯೇ ಇಂದೂ
ಕ್ಷಣಗಳ ಯುಗವಾಗಿಸಿ
ಮುಖಾಮುಖಿ ಕುಳಿತಿದ್ದೇವೆ
ಏತಕ್ಕೋ ಕಾಡಿದ್ದೇವೆ!
ಅಥವಾ ಸುಮ್ಮನೆ ಹೀಗೇ…

ಭಾವುಕತೆ ಮೀರಿದ್ದೇವೆ
ಸ್ಥಿತಪ್ರಜ್ಞರಾಗಿದ್ದೇವೆ
ಮಾತಿಗೆ ಅರ್ಥವಿಲ್ಲ
ಮೌನ ವ್ಯರ್ಥವಲ್ಲ!
ತಿಳಿದಿದ್ದೇವೆ.

ಬಹುದೂರ ಸಾಗಿದ್ದೇವೆ
ಏನೆಲ್ಲಾ ನೀಗಿದ್ದೇವೆ
ಹಮ್ಮುಗಳನಿಳಿಸಿ ಬಾಗಿದ್ದೇವೆ
ಮತ್ತೆ ಮತ್ತೆ ಕಾಲನ ಕೈಗೆ
ಸಿಕ್ಕು ಮಾಗಿದ್ದೇವೆ
ಸ್ವಲ್ಪ ಬೆಳೆದಿದ್ದೇವೆ?
ಮತ್ತೆ ಈಗ ಎದುರಾಗಿದ್ದೇವೆ!

ತುಟಿತೆರೆಯದೆಯೂ ಆಡಿದ
ಸಾವಿರ ಅವ್ಯಕ್ತ ಮಾತು
ಮನಗಳಿಗೆ ಗೊತ್ತು!
ತಿಳಿದಿರಬಹುದು ಹೊತ್ತು
ಏಕೆ ಬೇರೆಯವರ ಮಾತು?

ಏತಕ್ಕೋ ಕಾದಿದ್ದರೂ…
ನಿರಾಳ ಕುಳಿತಿದ್ದೇವೆ
ನಿಟ್ಟುಸಿರ ಎಣಿಸಿದ್ದೇವೆ
ಪರಸ್ಪರ ನೋವುಗಳ
ಕೊಟ್ಟು ಪಡೆದಿದ್ದೇವೆ
ಸುಮ್ಮನೆ ಮುಗ್ಧತೆ
ನಟಿಸುತ್ತೇವೆ ಹೀಗೆ…

ಮುಖಾಮುಖಿ ಕುಳಿತಿದ್ದೆವು!
ಕುಳಿತಿದ್ದೇವೆ!
ಕುಳಿತಿರುತ್ತೇವೆ?
ಬದುಕು ಚಿಕ್ಕದು
ಕಾಲ ದೊಡ್ಡದು
ನಾವು ಸುಮ್ಮನೆ ಹೀಗೇ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಕಮಾನ್ಯರು
Next post ಗೋಕಾಕ್ ಚಳುವಳಿ ಅಂತ ರಂಪ ಮಾಡ್ಲಿಕತ್ತಾನಲ್ರಿ ಚಂಪಾ

ಸಣ್ಣ ಕತೆ

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…