ಭಕ್ತನೊಬ್ಬ ಹನುಮಂತನ ಗುಡಿಗೆ ಹೋಗುವಾಗ ಬಾಗಿಲಲ್ಲೇ ಚಪ್ಪಲಿಗಳನ್ನು ಬಿಟ್ಟು ಒಳಕ್ಕೆ ಹೋಗಿ ದರ್ಶನ ಪಡೆದು ಹಿಂದಕ್ಕೆ ಬಂದು ಚಪ್ಪಲಿ ಹಾಕಿಕೊಳ್ಳಲು ಹೋದರೆ ಚಪ್ಪಲಿಗಳೇ ನಾಪತ್ತೆ! ಅವು ಹೊಸ ಚಪ್ಪಲಿಗಳು. ತುಂಬಾ ಖಿನ್ನನಾಗಿ ಮತ್ತೆ ದೇವರ ಬಳಿ ಹೋಗಿ “ನಾನು ಎಷ್ಟು ಅಂತ ಚಪ್ಪಲಿ ಕೊಳ್ಳೋದು? ಈಗಾಗಲೇ ಹತ್ತಾರು ಜೊತೆ ಅಲ್ಲಿ-ಇಲ್ಲಿ ಸುತ್ತಾಡುವಾಗ ಕಳೆದು ಕೊಂಡೆ. ಈ ಸಂಕಷ್ಟ ದಿಂದ ನೀನೇ ಪಾರುಮಾಡಬೇಕು.” ಎಂದು ಮೊರೆ ಇಟ್ಟ. ಹನುಮಂತ ಪ್ರತ್ಯಕ್ಷವಾಗಿ, “ವತ್ಸಾ ಅಲ್ಲಿ, ಇಲ್ಲಿ ನಾನು ಯಾವಾಗಲಾದರೂ ಸುತ್ತುವುದನ್ನು ನೀನು ಕಂಡಿದ್ದೀಯಾ? ನನ್ನ ಹಾಗೆ ಹಾಯಾಗಿ ಯಾಕೆ ನೀನು ಇರಬಾರದು? ನನಗೆ ಚಪ್ಪಲಿಗಳ ಅಗತ್ಯವೇ ಇಲ್ಲ!” ಅಂದ.
***
Related Post
ಸಣ್ಣ ಕತೆ
-
ಹುಟ್ಟು
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
-
ಬಲಿ
ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…
-
ಎರಡು…. ದೃಷ್ಟಿ!
ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ಜಡ
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…