ಭಕ್ತನೊಬ್ಬ ಹನುಮಂತನ ಗುಡಿಗೆ ಹೋಗುವಾಗ ಬಾಗಿಲಲ್ಲೇ ಚಪ್ಪಲಿಗಳನ್ನು ಬಿಟ್ಟು ಒಳಕ್ಕೆ ಹೋಗಿ ದರ್ಶನ ಪಡೆದು ಹಿಂದಕ್ಕೆ ಬಂದು ಚಪ್ಪಲಿ ಹಾಕಿಕೊಳ್ಳಲು ಹೋದರೆ ಚಪ್ಪಲಿಗಳೇ ನಾಪತ್ತೆ! ಅವು ಹೊಸ ಚಪ್ಪಲಿಗಳು. ತುಂಬಾ ಖಿನ್ನನಾಗಿ ಮತ್ತೆ ದೇವರ ಬಳಿ ಹೋಗಿ “ನಾನು ಎಷ್ಟು ಅಂತ ಚಪ್ಪಲಿ ಕೊಳ್ಳೋದು? ಈಗಾಗಲೇ ಹತ್ತಾರು ಜೊತೆ ಅಲ್ಲಿ-ಇಲ್ಲಿ ಸುತ್ತಾಡುವಾಗ ಕಳೆದು ಕೊಂಡೆ. ಈ ಸಂಕಷ್ಟ ದಿಂದ ನೀನೇ ಪಾರುಮಾಡಬೇಕು.” ಎಂದು ಮೊರೆ ಇಟ್ಟ. ಹನುಮಂತ ಪ್ರತ್ಯಕ್ಷವಾಗಿ, “ವತ್ಸಾ ಅಲ್ಲಿ, ಇಲ್ಲಿ ನಾನು ಯಾವಾಗಲಾದರೂ ಸುತ್ತುವುದನ್ನು ನೀನು ಕಂಡಿದ್ದೀಯಾ? ನನ್ನ ಹಾಗೆ ಹಾಯಾಗಿ ಯಾಕೆ ನೀನು ಇರಬಾರದು? ನನಗೆ ಚಪ್ಪಲಿಗಳ ಅಗತ್ಯವೇ ಇಲ್ಲ!” ಅಂದ.
***
Related Post
ಸಣ್ಣ ಕತೆ
-
ಸಂಶೋಧನೆ
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಏಕಾಂತದ ಆಲಾಪ
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ಯಾರು ಹೊಣೆ?
"ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…