ಹೊತ್ತಲ್ಲದ ಹೊತ್ತಲ್ಲಿ

ಇಳೆಗೆ ಹೊಸರಾಗ ಕಲಿಸುವ ಹುಚ್ಚು
ಯಾಕೆ ಬಂತೋ ಈ ಮಳೆಗೆ?

ಹೊತ್ತು – ಗೊತ್ತು
ಒಂದೂ ಇಲ್ಲದೇ ಹೀಗೆ
ಸುರಿದು ಬಿಡುವುದೇ ಇಳೆಗೆ?

ನಡೆಯುತ್ತಾ ನಡೆಯುತ್ತಾ
ಅರ್ಧದಲ್ಲೇ ಥಟ್ಟನೆ
ಎಲ್ಲಾ ನಿಂತು
ಗಾಳಿ – ನೀರು – ಬೇರುಗಳೆಲ್ಲಾ
ಇಳೆಯೊಂದಿಗೇ
ಮೌನದಾಳದಲಿ ಹೂತಿರುವಾಗ
ಜೀವಂತಿಕೆ ಇಲ್ಲದೇ ಸೋತಿರುವಾಗ

ಇಳೆಗೆ ಹೊಸರಾಗ ಕಲಿಸುವ ಹುಚ್ಚು
ಯಾಕೆ ಬಂತೋ ಈ ಮಳೆಗೆ?

ಬೇಕೋ – ಬೇಡವೋ
ಆಗಲೋ – ಈಗಲೋ
ಎಂದನುಮಾನಿಸುತ್ತಲೇ
ಮೆಲ್ಲಗೆ ಕದ ತೆರೆದು
ಮುಗ್ಧತೆಯಿಂದ ಮಳೆಯ ಕಥೆಗೆ
ಕಿವಿ ನೀಡಿದ್ದ ಇಳೆಗೆ
ಸದ್ದಿಲ್ಲದೇ ರಪರಪನೆ ಬಡಿದು
ತೊಯ್ದು ತೊಪ್ಪೆಯಾಗಿಸಿದ ಮಳೆಗೆ
ಮೀಸೆಯಂಚಿನಲ್ಲೇ ನಗು
ಇಳೆಯನ್ನರಳಿಸಿದ ಬೀಗು!

ಏನೂ ಆಗಿಯೇ ಇಲ್ಲವೆಂಬಂತೆ
ಮಳೆ ನೀರು ಕೊಡವಿ
ಮಿಂದು ಮಡಿಯುಟ್ಟ ಇಳೆ
ತನ್ನೆದೆಯಾಳದ ಮಾತಿಗೆ
ಜೀವ ಬಂದುದ ನೋಡಿ ಹಿಗ್ಗುತ್ತದೆ
ಹಮ್ಮಿನಲಿ ದೂರ ಸರಿದು ನಿಂತ
ಮಳೆಯ ತಬ್ಬಿ
ನೂರು ಹೊಸರಾಗಗಳ ಹಾಡುತ್ತದೆ
ಕಂಡೂ ಕಾಣದಂತೆ
ಗೆಲುವಿನ ನಗೆ ನಗುತ್ತದೆ!
ಇಳೆಯ ಮೈ ಮನದ ತುಂಬೆಲ್ಲಾ
ಈಗ ಚಿಗುರು ಹೂ – ಹಣ್ಣು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೇಣು
Next post ಸಿಡಿ, ಟಿಪ್ಪು ಠುಸ್ : ಸೋಭಾಯಾತ್ರೆ ಬುಸ್

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…