ಷೇಕ್ಸ್‌ಪಿಯರ್

ಉತ್ತರಿಸಲೇಬೇಕು ನಮ್ಮ ಪ್ರಶ್ನೆಯ ಬೇರೆ
ಯವರು; ನೀ ಮಾತ್ರವೆ ಸ್ವತಂತ್ರ, ನಾವೋ ಬಿಡದೆ
ತಿರುತಿರುಗಿ ಕೇಳುವೆವು – ನೀ ಬರಿದೆ ನಗುತಿರುವೆ,
ಮೌನದಲೆ ಮೀರಿ ಜ್ಞಾನದ ಶಿಖರಗಳ ಮೇರೆ.
ಕಡಲಲ್ಲಿ ಅಡಿಯೂರಿ ಸ್ವರ್‍ಗವನೆ ಮನೆ ಸಾರಿ,
ಚಿಕ್ಕೆಗಳಿಗಷ್ಟೆ ಗೂಢವ ತೆರೆದ ಮೇರುಗಿರಿ
ಸಿಗದು ಮರ್‍ತ್ಯರ ವ್ಯರ್‍ಥ ಶೋಧಕ್ಕೆ, ಮೇಲೆ ಬರಿ
ಮುಗಿಲಂಚು ಕಟ್ಟಿರುವ ಬುಡ ಮಾತ್ರ ಕಾಣುವುದು.
ತನ್ನರಿವು ಎಣಿಕೆ, ಧೃತಿ, ಆತ್ಮಸಮ್ಮಾನಗಳ
ಬಲದಲ್ಲಿ ಚಿಕ್ಕೆ ರವಿಕಿರಣ ಹಿಡಿದವ. ನಾವು
ಎಣಿಸದೆಡೆ ನಡೆದೆ ಬುವಿಮೇಲೆ, ಬಿಡು ಒಳ್ಳೆಯದೆ.
ನಿತ್ಯಸತ್ವವು ಸಹಿಸಬೇಕು ವ್ಯಥೆ ಬಾಧೆಗಳ.

ನಮ್ಮ ಧೃತಿ ಮುರಿವ ದೌರ್‍ಬಲ್ಯ, ಮಣಿಸುವ ನೋವು
ನಿನ್ನ ಮುಖಭಾವದಲಿ ಮಾತ್ರ ದನಿ ಪಡೆದಿದೆ.

– ಮ್ಯಾಥ್ಯು ಆರ್‍ನಲ್ಡ್
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರುಗಳ್ಳೀ ವೀರಾಜಯ್ಯ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೮

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys