Home / ಕವನ / ಕವಿತೆ / ಅರಿಷಿಣ ಹಚ್ಚೂ ಹಾಡು – ೧

ಅರಿಷಿಣ ಹಚ್ಚೂ ಹಾಡು – ೧

ದೇವ ದೇವರೆಣ್ಣಿ ಯಾವ ದೇವರೆಣ್ಣಿ|
ಮನಿಯ ದೇವಽರ ಮೊದಲೆಣ್ಣಿ|
ಹರಹರ ನಮ ಸಿವಗ ನೆಯ್ಯೆಣೆ ||೧||

ಬಾಲಽಗೆಣ್ಣಿ ಹಚ್ಚೊಟಿಗೆ ಬಾಗಿಲಿಗೆ ಬಿಸಿಲ್ಬಂದ|
ನಾಲ್ವತ್ತ್ವಾಟಽದ ಎಲಿ ಬಂದ| ಹರಹರ…. ||೨||

ಕಂದಽಗೆಣ್ಣಿ ಹೆಚ್ಚೊಟಿಗೆ ಅಂಗಳಕ ಬಿಸಿಲ್ಬಂದ|
ಐವತ್ತ್ವಾಟಽದ ಎಲಿ ಬಂದ| ಹರಹರ…. ||೩||

ನೀರಿಲ್ಲಽದಂಗಳಾಗ ನೀರ್‍ಯಾಕನಾಗ್ಯಾವ|
ಊರಿಗಿ ದೊಡ್ಡವರ ಮಗ ಮಿಂದ| ಹರಹರ…. ||೪||

ಕೆಸರಿಲ್ಲದಂಗಳಾಗ ಕೆಸರ್‍ಯಾಕನಾಗ್ಯಾವ|
ಹೆಸರಿಗಿ ದೊಡ್ಡವರ ಮಗ ಮಿಂದ| ಹರಹರ…. ||೫||

ಹೆಸರಿಽಗಿ ದೊಡ್ಡವರ ಮಗ ಮಿಂದ ತಮ್ಮಗ।
ಹಸರ ಪಲ್ಲಕ್ಕಿ ನೆರಳಾಗಿ| ಹೆರಹರ…. ||೬||
*****

ಅರಿಸಿಣ ಹಚ್ಚುವುದು ಲಗ್ನದ ಕಾಲದಲ್ಲಿ ಪ್ರಥಮದೀಕ್ಷೆಯುತಿರುವುದು. ವರನಿಗೆ ಅರಿಷಿಣ ಹಚ್ಚುವಾಗ ಇದನ್ನು ಹಾಡುತ್ತಾರೆ. ಆಗ ಮುತ್ತೈದೆಯರು ನೆರೆದು ಹಾಡುತ್ತ, ವರನ ತಲೆಗೆ ವೀಳ್ಯದ ಎಲೆಯಿಂದ ಎಣ್ಣೆಯನ್ನು ಹಚ್ಚಿ, ಮೈಗೆ ಅರಿಸಿಣವನ್ನು ಬಳಿದು, ಸ್ನಾನ ಮಾಡಿಸುವರು.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ದಪ್ರಯೋಗಗಳು:- ನಮ ಶಿವರ್=ನಮ್ಮ ಮದುಮಗನಿಗೆ. ನೆಯ್ಯೆಣ್ಣೆ=ಸ್ನಿಗ್ಧವಾದ ಎಣ್ಣೆ. ಹೆಚ್ಚೊಟಿಗೆ=ಹಚ್ಚುವಷ್ಟರಲ್ಲಿ. ತ್ವಾಟ=ತೋಟ.ಎಲಿ=ವೀಳ್ಯದ ಎಲೆ. ನೀರ್ಯಾಕನಾಗ್ಯಾವ=ನೀರೇಕೆ ಆಗಿವೆ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...