Home / ಕವನ / ಅನುವಾದ / ಹಿಂದುಸ್ತಾನ್‌ ಹಮಾರಾ

ಹಿಂದುಸ್ತಾನ್‌ ಹಮಾರಾ

(ಲಾಹೋರಿನ ಡಾ ಶೇಖ್‌ ಮಹಮ್ಮದ್‌ ಇಖ್ಬಾಲರ ಉರ್ದು ಘಜಲನ್ನು ಅವಲಂಬಿಸಿ ಬರೆದುದು)

ನಮ್ಮವಳೀ ಭಾರತ ಜನನಿ ||ಧ್ರುವ||

ಭೂಮಂಡಲದಿ ರಮಣೀಯಂ
ಈ ಭಾರತವೆಮ್ಮಯ ನಿಲಯಂ,
ನಾವೀಕೆಯ ಮರಿದುಂಬಿಗಳು,
ಈಕೆಯೆಮ್ಮ ಜೀವನನಳಿನಿ ||೧||

ನಾವೆತ್ತಲಲೆದರು ಮುದದಿ
ಹೃದಯಂಗಳೀಕೆಯ ಪದದಿ,
ಇರಬಲ್ಲೆವಲ್ಲಿಯೆ ನಿಸದಂ
ಹರಿವುದೆತ್ತಲೆಮ್ಮೆದೆ ಧಮನಿ ||೨||

ಗಿರಿಗುಂಪುಗಳ ಮುಡಿಯೇರಿ
ಗಿರಿಯಾವುದೊ ಗಗನವಿಹಾರಿ-
ಅದೆ ನಮ್ಮ ಚಿರ ಪ್ರತಿಹಾರಿ,
ಅದೆ ಕಾವನೆಮ್ಮಯ ಕರುಣಿ ||೩||

ನೂರಾರು ನದಿಬಾಲೆಯರು
ಈಕೆಯಂಕದಲಿ ನಲಿಯುವರು,
ಈ ನವನಂದನದಿನಿದುಸುರಿಂ
ಕರುಬಾಂತುದಮರರ ಧರಣಿ ||೪||

ಧುನಿರಾಣಿ ಗಂಗೆಯೆ ನಿನಗೆ
ನೆನಪಿಹುದೇನಾ ಶುಭ ಗಳಿಗೆ
ಇಳಿದಂದು ನಿನ್ನಯ ದಡದಿ
ಮುನ್ನಮೆಮ್ಮ ಪರಿಸೆಯ ಸರಣಿ? ||೫||

ಧರುಮಂಗಳರುಹವು ನಮಗೆ
ಹಗೆಯನ್ನಿರಿಸಲೆಮ್ಮೊಳಗೆ-
ಭಾರತೇಯರಾವೆಮಗೊಂದೆ
ತವರೀಕೆಯೆ ನಮ್ಮಯ ಜನನಿ ||೬||

ಮುನ್ನಾದ ಹಲ ನಾಡಿಂದು
ಇತಿಹಾಸದಿ ಕನವರಿಪಂದು,
ಕಂದದು ಕುಂದದು ಎಂದೆಂದು
ಮೀಕೆಯ ಸೌಭಾಗ್ಯದ ತರಣಿ ||೭||

ನಿನ್ನ ನಾಮವನೆ ಪಾಡುವೆವು,
ನಾವಿದನೊಂದನೆ ಬೇಡುವೆವು-
ನಮ್ಮನಿಂತೆ ಜನುಮಜನುಮದಿ
ನಿನ್ನುದರದಿ ತಳೆಯೌ ಜನನಿ ||೮||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...