Home / ಕವನ / ಕವಿತೆ / ಬೆಂಗಳೂರಿನ ಕವಿತೆ

ಬೆಂಗಳೂರಿನ ಕವಿತೆ

ಮೊದಲು ಆಕಾಶವಿತ್ತು,
ಆಕಾಶಕ್ಕೆ ಕಣ್ಣಿತ್ತು, ಕಿವಿಯಿತ್ತು
ಆದರೆ ಕಾಲುಗಳಿರಲಿಲ್ಲ
ಬ್ರಹ್ಮಾಂಡದ ಮೇಲೆ
ತೇಲಾಡುತ್ತಿತ್ತು

ಹಸುಗೂಸು-ಅಂಬೆಗಾಲಿಕ್ಕಿ ನೀನು ಬಂದೆ
ಜಗವೆಲ್ಲ ಖಾಲಿ ಇತ್ತು ನೀನು ಕಂಡೆ
ನಿನ್ನ ಕಣ್ಣುಗಳಲ್ಲಿ ಆಶ್ಚರ್ಯವಿತ್ತು,
ಹೊಳಪಿತ್ತು, ನಗುವಿತ್ತು, ಅಳುವಿತ್ತು
ನೀನು ತಂದೆ:

ಮೌನಕ್ಕೆ ಜೀವ ತುಂಬುವ ಅರ್ಥ
ನಿನ್ನ ಬಗೆಗಣ್ಣಲ್ಲಿ ನೂರಾರು ನವಿಲು
ಎಲ್ಲಾ ನವಿಲುಗಳು ಬಿಟ್ಟು ಹೋಗಿವೆ ತಮ್ಮ ನವಿಲುಗರಿ
ನಿನ್ನ ಹಣೆ ಮೇಲೆ ನಿಲ್ಲವುದೆ ಗರಿಯ ಗುರಿ ?
ತಿಳಿಯಲಿಲ್ಲ

ನೀನು ಹೊರಟೆ
ನಿನ್ನ ನಗು ಅಳೆದಿದ್ದು ಊರವಿಸ್ತಾರ
ನೀನು ಈಗಲೂ ನಗುವೆ.  ಯಾವ ಆರ್ಥ ?

ನೀ ಕಟ್ಟಿದೂರು ಇದು ಬೆಂಗಳೂರು
ಇಲ್ಲಿ ಕಾಮನ ಬಿಲ್ಲುಗಳಿವೆ ನವಿರಾಗಿ ನೆಡುವ
ನೂರಾರು ಮುಳ್ಳುಗಳಿವೆ ಇಲ್ಲಿ
ನಾನು ಬಂದೆ. ಇಲ್ಲಿ ನಾನು ಕಂಡೆ.
ತಿಳಿಯಬಾರದ್ದನ್ನೂ ತಿಳಿಯಬೇಕಾದ್ದನ್ನೂ
ತಿಳಿದುಕೊಂಡೆ.
ಈಗ ಹೇಳಿಬಿಡುವೆ

ಉದ್ಯಾನಗಳ ನಗರಿ-ನಿನ್ನ ಪ್ರೀತಿಸುವೆ
ನನ್ನ ಗೆಳೆಯರನೆಲ್ಲ ಕೈ ಮಾಡಿ ಕರೆವೆ
ಬೆಂಗಳೂರಿಗೆ ಬಾ ಬೆಂಗಳೂರಿಗೆ ಬಾ
ಬೆಂಗಳೂರೇ-ಒಮ್ಮೆ
ನನ್ನ ಊರಿಗೆ ಬಾ

ನಿನ್ನ ಮೈ ಸುಡುವ ಸೂರ್ಯ
ತನ್ನ ಮ್ಮೆ ತೊಳೆವ ಊರು
ಅವನ ಅವಿತಿಟ್ಟುಕೊಳುವ
ನನ್ನೂರ ವಿಸ್ತಾರ ಕಡಲು-
ನನ್ನೂರ ಅತಿಸಹಜ ಚೆಲುವು-
ಬೆಂಗಳೂರಿಗೆ ಬಾ ಬೆಂಗಳೂರಿಗೆ ಬಾ
ಬೆಂಗಳೂರೇ-ಒಮ್ಮೆ
ನನ್ನ ಊರಿಗೆ ಬಾ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...