Home / ಕವನ / ಕವಿತೆ / ಬೆಂಗಳೂರಿನ ಕವಿತೆ

ಬೆಂಗಳೂರಿನ ಕವಿತೆ

ಮೊದಲು ಆಕಾಶವಿತ್ತು,
ಆಕಾಶಕ್ಕೆ ಕಣ್ಣಿತ್ತು, ಕಿವಿಯಿತ್ತು
ಆದರೆ ಕಾಲುಗಳಿರಲಿಲ್ಲ
ಬ್ರಹ್ಮಾಂಡದ ಮೇಲೆ
ತೇಲಾಡುತ್ತಿತ್ತು

ಹಸುಗೂಸು-ಅಂಬೆಗಾಲಿಕ್ಕಿ ನೀನು ಬಂದೆ
ಜಗವೆಲ್ಲ ಖಾಲಿ ಇತ್ತು ನೀನು ಕಂಡೆ
ನಿನ್ನ ಕಣ್ಣುಗಳಲ್ಲಿ ಆಶ್ಚರ್ಯವಿತ್ತು,
ಹೊಳಪಿತ್ತು, ನಗುವಿತ್ತು, ಅಳುವಿತ್ತು
ನೀನು ತಂದೆ:

ಮೌನಕ್ಕೆ ಜೀವ ತುಂಬುವ ಅರ್ಥ
ನಿನ್ನ ಬಗೆಗಣ್ಣಲ್ಲಿ ನೂರಾರು ನವಿಲು
ಎಲ್ಲಾ ನವಿಲುಗಳು ಬಿಟ್ಟು ಹೋಗಿವೆ ತಮ್ಮ ನವಿಲುಗರಿ
ನಿನ್ನ ಹಣೆ ಮೇಲೆ ನಿಲ್ಲವುದೆ ಗರಿಯ ಗುರಿ ?
ತಿಳಿಯಲಿಲ್ಲ

ನೀನು ಹೊರಟೆ
ನಿನ್ನ ನಗು ಅಳೆದಿದ್ದು ಊರವಿಸ್ತಾರ
ನೀನು ಈಗಲೂ ನಗುವೆ.  ಯಾವ ಆರ್ಥ ?

ನೀ ಕಟ್ಟಿದೂರು ಇದು ಬೆಂಗಳೂರು
ಇಲ್ಲಿ ಕಾಮನ ಬಿಲ್ಲುಗಳಿವೆ ನವಿರಾಗಿ ನೆಡುವ
ನೂರಾರು ಮುಳ್ಳುಗಳಿವೆ ಇಲ್ಲಿ
ನಾನು ಬಂದೆ. ಇಲ್ಲಿ ನಾನು ಕಂಡೆ.
ತಿಳಿಯಬಾರದ್ದನ್ನೂ ತಿಳಿಯಬೇಕಾದ್ದನ್ನೂ
ತಿಳಿದುಕೊಂಡೆ.
ಈಗ ಹೇಳಿಬಿಡುವೆ

ಉದ್ಯಾನಗಳ ನಗರಿ-ನಿನ್ನ ಪ್ರೀತಿಸುವೆ
ನನ್ನ ಗೆಳೆಯರನೆಲ್ಲ ಕೈ ಮಾಡಿ ಕರೆವೆ
ಬೆಂಗಳೂರಿಗೆ ಬಾ ಬೆಂಗಳೂರಿಗೆ ಬಾ
ಬೆಂಗಳೂರೇ-ಒಮ್ಮೆ
ನನ್ನ ಊರಿಗೆ ಬಾ

ನಿನ್ನ ಮೈ ಸುಡುವ ಸೂರ್ಯ
ತನ್ನ ಮ್ಮೆ ತೊಳೆವ ಊರು
ಅವನ ಅವಿತಿಟ್ಟುಕೊಳುವ
ನನ್ನೂರ ವಿಸ್ತಾರ ಕಡಲು-
ನನ್ನೂರ ಅತಿಸಹಜ ಚೆಲುವು-
ಬೆಂಗಳೂರಿಗೆ ಬಾ ಬೆಂಗಳೂರಿಗೆ ಬಾ
ಬೆಂಗಳೂರೇ-ಒಮ್ಮೆ
ನನ್ನ ಊರಿಗೆ ಬಾ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...