ಚಿಕ್ಕಂದಿನ ನೆನಪುಗಳು

ಚಿಕ್ಕ ಶಿಶುವಾಗಿದ್ದ ಕಾಲವಿತ್ತೊಂದು;
ಲೆಕ್ಕಿಸಲ್ಕೊಡಲಿತ್ತು ಅಡಿ ಎರಡು ಒಂದು;
ಫಕ್ಕನಾ ಸ್ಮರಣೆಗೊಸರುವುದಶ್ರು ಬಿಂದು;
ಮಿಕ್ಕ ನೆನಹುಗಳು ಕೊಡವಾ ತೋಷವೆಂದೂ.

ಅಂದು ಅಮ್ಮನ ಕಂಕುಳಲಿ ಆಡುತಿದ್ದೆ;
ಅಂದು ಅಪ್ಪನ ಕಾಲ ಕುದುರೆ ಮಾಡಿದ್ದೆ
ಅಂದು ಪಾಠವು ಕಾಟವೆಂದು ತಿಳಿದಿದ್ದೆ,
ಅಂದು ನಾಚಿಕೆ ಲಜ್ಜೆಗಳನರಿಯದಿದ್ದೆ.

ಆಗ ಧರೆ ಕಾಣಿಸಿತು ಬಲು ಚಿಕ್ಕದಾಗಿ;
ಆ ಗಲಭೆ ಗುಲ್ಲು ಕೇಳಿಸಿತು ಸವಿಯಾಗಿ;
ಆಗಸದ ಮಿಣುಕು ಗೋಲಿಯ ಹಿಡಿಯ ಹೋಗಿ,
ಆಗದಿರೆ ಅಳುತಿದ್ದೆ ಕೈನೆಗಹಿ ಕೂಗಿ.

ಬೆಟ್ಟ ತಲೆಯಲಿ ಕಂಡು ಹೊಳೆವ ಚಂದ್ರನನು,
ದಿಟ್ಟಿಸಿ ಅದರ ಸೊಬಗು ಸವಿಸೊಗಸುಗಳನು,
ತಟ್ಟನೆ ನುಡಿದೆ “ಅಲ್ಲಿ ನಾ ಹೋಗಲೇನು?
ಬಟ್ಟಲಂತಿಹ ಮಂಡಲದಲಿರುವುದೇನು?”

ಸಂಜೆಯಲಿ ನೀಲ ಪಡುಗಡಲು ನೋಡಿದೆನು,
ಅಂಜಲದರೊಡಲೊಳಗೆ ರವಿ ಹೋಗುವುದನು;
ಮುಂಜಾನೆ ಮಿಂದು ಬಂದಾ ನೇಸರನ್ನು,
ರಂಜಿಸುತ ಮೂಡು ಬಾನೊಳು ಹೊಳೆವುದನ್ನು.

ಮೊದಲು ಭಜಿಸಿದೆನು ಈಶನನು ಸ್ತುತಿಗೈದು;
ತೊದಲು ನಾಲಿಗೆಯಲ್ಲಿ ತಾಯುಡಿಯ ಹಿಡಿದು,
ಅದೆ ಭಜನೆ ಇಂದಿರಲಿ-“ಸದ್ಭುದ್ಧಿಗಳನು
ಒದಗಿಸೈ ದೇವ! ನಿನ್ನನೆ ಅನುಸರಿಪೆನು.”

ಎಲ್ಲಿ ಆ ಬಾಲ್ಯದಾ ಶುಭದಿನಗಳೆಲ್ಲಿ?
ಎಲ್ಲಿ ಆ ಸಂತೋಷ, ಸೌಖ್ಯ ಇನ್ನೆಲ್ಲಿ?
“ನಿಲ್ಲು, ಸರಿಹೋಗು” ಎಂದಾ ದೇವನೆಲ್ಲಿ?
ಇಲ್ಲ ಎಲ್ಲಿಯು ಹೊರತು ಈ ಸ್ಮರಣೆಯಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊರೆವ ಹೊಟ್ಟೆ ಮೆರೆವಂತೆ ತಿನ್ನಿಸುವ ಸಕ್ಕರೆಗೀಪರಿ ಕೃಷಿ ಬೇಕೇ?
Next post ಆಲ್ಬರ್ಟ ಕಮೂನ “ದಿ ಔಟ್ ಸೈಡರ್” The Philosophy of the Absurd

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…