Home / ಕವನ / ಕವಿತೆ / ಚಿಕ್ಕಂದಿನ ನೆನಪುಗಳು

ಚಿಕ್ಕಂದಿನ ನೆನಪುಗಳು

ಚಿಕ್ಕ ಶಿಶುವಾಗಿದ್ದ ಕಾಲವಿತ್ತೊಂದು;
ಲೆಕ್ಕಿಸಲ್ಕೊಡಲಿತ್ತು ಅಡಿ ಎರಡು ಒಂದು;
ಫಕ್ಕನಾ ಸ್ಮರಣೆಗೊಸರುವುದಶ್ರು ಬಿಂದು;
ಮಿಕ್ಕ ನೆನಹುಗಳು ಕೊಡವಾ ತೋಷವೆಂದೂ.

ಅಂದು ಅಮ್ಮನ ಕಂಕುಳಲಿ ಆಡುತಿದ್ದೆ;
ಅಂದು ಅಪ್ಪನ ಕಾಲ ಕುದುರೆ ಮಾಡಿದ್ದೆ
ಅಂದು ಪಾಠವು ಕಾಟವೆಂದು ತಿಳಿದಿದ್ದೆ,
ಅಂದು ನಾಚಿಕೆ ಲಜ್ಜೆಗಳನರಿಯದಿದ್ದೆ.

ಆಗ ಧರೆ ಕಾಣಿಸಿತು ಬಲು ಚಿಕ್ಕದಾಗಿ;
ಆ ಗಲಭೆ ಗುಲ್ಲು ಕೇಳಿಸಿತು ಸವಿಯಾಗಿ;
ಆಗಸದ ಮಿಣುಕು ಗೋಲಿಯ ಹಿಡಿಯ ಹೋಗಿ,
ಆಗದಿರೆ ಅಳುತಿದ್ದೆ ಕೈನೆಗಹಿ ಕೂಗಿ.

ಬೆಟ್ಟ ತಲೆಯಲಿ ಕಂಡು ಹೊಳೆವ ಚಂದ್ರನನು,
ದಿಟ್ಟಿಸಿ ಅದರ ಸೊಬಗು ಸವಿಸೊಗಸುಗಳನು,
ತಟ್ಟನೆ ನುಡಿದೆ “ಅಲ್ಲಿ ನಾ ಹೋಗಲೇನು?
ಬಟ್ಟಲಂತಿಹ ಮಂಡಲದಲಿರುವುದೇನು?”

ಸಂಜೆಯಲಿ ನೀಲ ಪಡುಗಡಲು ನೋಡಿದೆನು,
ಅಂಜಲದರೊಡಲೊಳಗೆ ರವಿ ಹೋಗುವುದನು;
ಮುಂಜಾನೆ ಮಿಂದು ಬಂದಾ ನೇಸರನ್ನು,
ರಂಜಿಸುತ ಮೂಡು ಬಾನೊಳು ಹೊಳೆವುದನ್ನು.

ಮೊದಲು ಭಜಿಸಿದೆನು ಈಶನನು ಸ್ತುತಿಗೈದು;
ತೊದಲು ನಾಲಿಗೆಯಲ್ಲಿ ತಾಯುಡಿಯ ಹಿಡಿದು,
ಅದೆ ಭಜನೆ ಇಂದಿರಲಿ-“ಸದ್ಭುದ್ಧಿಗಳನು
ಒದಗಿಸೈ ದೇವ! ನಿನ್ನನೆ ಅನುಸರಿಪೆನು.”

ಎಲ್ಲಿ ಆ ಬಾಲ್ಯದಾ ಶುಭದಿನಗಳೆಲ್ಲಿ?
ಎಲ್ಲಿ ಆ ಸಂತೋಷ, ಸೌಖ್ಯ ಇನ್ನೆಲ್ಲಿ?
“ನಿಲ್ಲು, ಸರಿಹೋಗು” ಎಂದಾ ದೇವನೆಲ್ಲಿ?
ಇಲ್ಲ ಎಲ್ಲಿಯು ಹೊರತು ಈ ಸ್ಮರಣೆಯಲ್ಲಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...