Home / ಲೇಖನ / ವಿಜ್ಞಾನ / ವಾಟರ್‌ಬೈಕ್ ಕಥೆ

ವಾಟರ್‌ಬೈಕ್ ಕಥೆ

ಪೆಟ್ರೋಲ್- ಡಿಸೇಲ್ ಇತ್ಯಾದಿ ಬಳಕೆಯ ಬದಲು ಪರ್‍ಯಾಯ ಇಂಧನದ ಬಳಕೆಯ ಬಗ್ಗೆ ಸುದೀರ್‍ಘ ಚಿಂತನೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇದೆ.

ಹಣ ಉಳಿಸುವ ಆಲೋಚನೆ ಒಂದೆಡೆಯಾದರೆ, ಪೆಟ್ರೋಲ್ ಡಿಸೇಲ್ ಕೊರತೆಯನ್ನು ನೀಗಿಸುವ ಯೋಚನೆಯು ನಿರಂತರವಾಗಿ ಸಾಗುತ್ತಲೇ ಇದೆ.

ಆದರೆ… ಇಷ್ಟು ವರ್ಷಗಳಾದರೂ ಹರ್ಷದ ಸುದ್ದಿ ಮಾತ್ರ ಇಲ್ಲವೇ ಇಲ್ಲ ಎನಬೇಡಿ!

ಬ್ರೆಜಿಲ್‌ನ ಸಾವೋಪೌಲೊದ ರಿಕಾರ್‍ಡೋ ಜಿವಡೋ ನೀರಿನಿಂದ ಬೈಕ್ ಓಡಿಸುತ್ತಿದ್ದಾನೆ! ಬರೋಬ್ಬರಿ ಒಂದು ಲೀಟರ್ ನೀರಿಗೆ ಈತನಲ್ಲಿರುವ ಬೈಕ್ ೩೦೦ ಮೈಲಿ ಓಡುವುದು. ಇವರು ಇಂಧನದ ಬದಲು ನೀರನ್ನು ತುಂಬಿಸಿ ಬೈಕ್ ಓಡಿಸುವ ವೀಡಿಯೋವನ್ನು ಕೂಡಾ ಈಗಾಗಲೇ ಬಿಡುಗಡೆಗೊಳಿಸಿರುವರು.

ಇವರ ಬಳಿ ಇರುವ ಬೈಕಿನ ಹೆಸರು- ಟಿ ಪವರ್ ಎಚ್‌ಓ ಎಂದು. ಇದೊಂದು ಸುಂದರ ವಾಟರ್ ಬೈಕ್, ಅಂದರೆ ನೀರ ಮೇಲೆ ಚಲಿಸುವುದಲ್ಲ. ರಸ್ತೆ ಮೇಲೆ ಸಲಿಸಾಗಿ ಓಡುವುದು.

ಸಾವೋಪೌಲೊದ ರಿಕಾರ್‍ಡೊ ಅವರ ಸಂಶೋಧನೆಯ ಪ್ರಕಾರ ಬೈಕ್‌ನಲ್ಲಿ ಕಾರ್ ಬ್ಯಾಟರಿಯೊಂದನ್ನು ಅಳವಡಿಸಿರುವರು. ಇದರಿಂದಾಗಿ ಇದು ವಿದ್ಯುತ್ ಉತ್ಪಾದಿಸಿ ನೀರಿನ ಕಣಗಳಿಂದ ಜಲಜನಕ ಪ್ರತ್ಯೇಕಿಸುತ್ತದೆ. ಹೀಗಾಗಿ ದಹನ ಕ್ರಿಯೆಯುಂಟಾಗಿ, ಅದರಿಂದ ಬಿಡುಗಡೆಯಾಗುವ ಶಕ್ತಿಯಿಂದ ಬೈಕ್ ಓಡುವುದು!

ಅಬ್ಬಾ! ಇಂಧನ ಉಳಿತಾಯ ಹಾಗೂ ವಾಯುಮಾಲಿನ್ಯ ಇತ್ಯಾದಿ ತಪ್ಪಿಸಿ ಪರ್‍ಯಾಯ ಇಂಧನದ ವ್ಯವಸ್ಥೆಯಾಗುವ ಎಲ್ಲ ಮೂಲಗಳನ್ನು ಈಗಾಗಲೇ ಸಂಶೋಧಿಸಲಾಗಿದೆ.

ಆದ್ದರಿಂದ ಇವೆಲ್ಲ ಪರ್‍ಯಾಯ ಇಂಧನಗಳಾಗಿ ಎಲ್ಲ ಕಡೆ ಬಳಕೆಯಾದರೆ ಬಹಳಷ್ಟು ಸಮಸ್ಯೆಗಳು ಇಲ್ಲವಾಗಿ ಹೊಸಹೊಸ ಆವಿಷ್ಕಾರಗಳಿಗೆ ಎಡೆ ಮಾಡಿಕೊಡುತ್ತವೆಂದು ಭಾವಿಸಲಾಗಿದೆ.

ಅಂತೂ ಇಂತೂ ನಾವು ನೀವು ಕಾಯೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...