ವಾಟರ್‌ಬೈಕ್ ಕಥೆ

ವಾಟರ್‌ಬೈಕ್ ಕಥೆ

ಪೆಟ್ರೋಲ್- ಡಿಸೇಲ್ ಇತ್ಯಾದಿ ಬಳಕೆಯ ಬದಲು ಪರ್‍ಯಾಯ ಇಂಧನದ ಬಳಕೆಯ ಬಗ್ಗೆ ಸುದೀರ್‍ಘ ಚಿಂತನೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇದೆ.

ಹಣ ಉಳಿಸುವ ಆಲೋಚನೆ ಒಂದೆಡೆಯಾದರೆ, ಪೆಟ್ರೋಲ್ ಡಿಸೇಲ್ ಕೊರತೆಯನ್ನು ನೀಗಿಸುವ ಯೋಚನೆಯು ನಿರಂತರವಾಗಿ ಸಾಗುತ್ತಲೇ ಇದೆ.

ಆದರೆ… ಇಷ್ಟು ವರ್ಷಗಳಾದರೂ ಹರ್ಷದ ಸುದ್ದಿ ಮಾತ್ರ ಇಲ್ಲವೇ ಇಲ್ಲ ಎನಬೇಡಿ!

ಬ್ರೆಜಿಲ್‌ನ ಸಾವೋಪೌಲೊದ ರಿಕಾರ್‍ಡೋ ಜಿವಡೋ ನೀರಿನಿಂದ ಬೈಕ್ ಓಡಿಸುತ್ತಿದ್ದಾನೆ! ಬರೋಬ್ಬರಿ ಒಂದು ಲೀಟರ್ ನೀರಿಗೆ ಈತನಲ್ಲಿರುವ ಬೈಕ್ ೩೦೦ ಮೈಲಿ ಓಡುವುದು. ಇವರು ಇಂಧನದ ಬದಲು ನೀರನ್ನು ತುಂಬಿಸಿ ಬೈಕ್ ಓಡಿಸುವ ವೀಡಿಯೋವನ್ನು ಕೂಡಾ ಈಗಾಗಲೇ ಬಿಡುಗಡೆಗೊಳಿಸಿರುವರು.

ಇವರ ಬಳಿ ಇರುವ ಬೈಕಿನ ಹೆಸರು- ಟಿ ಪವರ್ ಎಚ್‌ಓ ಎಂದು. ಇದೊಂದು ಸುಂದರ ವಾಟರ್ ಬೈಕ್, ಅಂದರೆ ನೀರ ಮೇಲೆ ಚಲಿಸುವುದಲ್ಲ. ರಸ್ತೆ ಮೇಲೆ ಸಲಿಸಾಗಿ ಓಡುವುದು.

ಸಾವೋಪೌಲೊದ ರಿಕಾರ್‍ಡೊ ಅವರ ಸಂಶೋಧನೆಯ ಪ್ರಕಾರ ಬೈಕ್‌ನಲ್ಲಿ ಕಾರ್ ಬ್ಯಾಟರಿಯೊಂದನ್ನು ಅಳವಡಿಸಿರುವರು. ಇದರಿಂದಾಗಿ ಇದು ವಿದ್ಯುತ್ ಉತ್ಪಾದಿಸಿ ನೀರಿನ ಕಣಗಳಿಂದ ಜಲಜನಕ ಪ್ರತ್ಯೇಕಿಸುತ್ತದೆ. ಹೀಗಾಗಿ ದಹನ ಕ್ರಿಯೆಯುಂಟಾಗಿ, ಅದರಿಂದ ಬಿಡುಗಡೆಯಾಗುವ ಶಕ್ತಿಯಿಂದ ಬೈಕ್ ಓಡುವುದು!

ಅಬ್ಬಾ! ಇಂಧನ ಉಳಿತಾಯ ಹಾಗೂ ವಾಯುಮಾಲಿನ್ಯ ಇತ್ಯಾದಿ ತಪ್ಪಿಸಿ ಪರ್‍ಯಾಯ ಇಂಧನದ ವ್ಯವಸ್ಥೆಯಾಗುವ ಎಲ್ಲ ಮೂಲಗಳನ್ನು ಈಗಾಗಲೇ ಸಂಶೋಧಿಸಲಾಗಿದೆ.

ಆದ್ದರಿಂದ ಇವೆಲ್ಲ ಪರ್‍ಯಾಯ ಇಂಧನಗಳಾಗಿ ಎಲ್ಲ ಕಡೆ ಬಳಕೆಯಾದರೆ ಬಹಳಷ್ಟು ಸಮಸ್ಯೆಗಳು ಇಲ್ಲವಾಗಿ ಹೊಸಹೊಸ ಆವಿಷ್ಕಾರಗಳಿಗೆ ಎಡೆ ಮಾಡಿಕೊಡುತ್ತವೆಂದು ಭಾವಿಸಲಾಗಿದೆ.

ಅಂತೂ ಇಂತೂ ನಾವು ನೀವು ಕಾಯೋಣವಲ್ಲವೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೆನ್ಷನ್
Next post ಮಾಡಿದಷ್ಟೂ ಮುಗಿಯದೆ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys