Home / ಕವನ / ಕವಿತೆ / ಮುಖವಾಡಗಳು

ಮುಖವಾಡಗಳು

ಜನ್ಮ ಜನ್ಮಾಂತರದ ಶಾಪ ನಿಮಗಂಟಿದೆ
ಬೇಡವೆ ನಿಮಗೆ ಪರಿಹಾರ?
ನೋಡಿಲ್ಲಿ ನೋಡಲ್ಲಿ ಮೃತ್ಯುವಿನ ದೂತ
ಕಾಯುತಿರುವ ನಿಮ್ಮ ಮನೆಯ
ಮುಂಬಾಗಿಲು ಹಿಂಬಾಗಿಲು-

ಶಕುನ ಜಾತಕ ಜ್ಯೋತಿಷಿಗಳು
ಕಾಲಜ್ಞಾನಿ ಸಂಖ್ಯಾಶಾಸ್ತ್ರ ವಾಸ್ತುದವರು
ದಿನ ಬೆಳಗಾದರೆ ಗಂಟಲು ಕಿರುಚಿ ಹೇಳಿ ಹೇಳಿ
ಹೆದರಿಸಿ ಎದೆಯೊಡೆಸಿ ಸಾಯಿಸುತಿಹರು ಮುಗ್ಧರ-

ಮತ್ತೆ ಪರಿಹಾರಕೆ ಅವರೇ ದಾಳಗಳನೆಸೆದು
ಕತ್ತಲೆಕೋಣೆಗೆ ಹೊಗೆಹಾಕಿ ದೇವರೆ ಬಂದಿಹನಿಲ್ಲಿ
ಮಾತನಾಡುವನು ನಿಮ್ಮೊಂದಿಗೆ ಭಯ ಬೀಳದಿರಿ
ನೋಡಿ ನೋಡಿ ಕೇಳಿ ಭಕ್ತರೆ ಭಕ್ತಿ ಇರಲಿ…
ಮುಖವಾಡ ಸ್ವಾಮಿಗಳ
ಒಳಗೊಳಗೇ ನಗು ಹಣದ ಚೀಲ ಝಣಝಣ.

ಮಾಟಮಂತ್ರ ವಶೀಕರಣ ನರಬಲಿ ಪ್ರಾಣಿಬಲಿ
ಹರಕೆ ಮಡೆಸ್ನಾನ ಪಂಕ್ತಿಭೇದ ದೇವದಾಸಿ
ಬೆತ್ತಲಸೇವೆ ಪಾದಪೂಜೆ ಅಡ್ಡಪಲ್ಲಕ್ಕಿ
ಆಹಾ! ಒಂದೇಽ ಎರಡೇಽ ಇವರ
ನಂಬಿಕೆ ಬಿಂಬಿಸುವ ಹುನ್ನಾರ.

ಅಯ್ಯೋ ದುರ್‍ಭಾಗ್ಯ ದೇಶವೆ
ಎಷ್ಟೊಂದು ನರಳುವಿಕೆ ಅಂಧಕಾರ
ಹುಣ್ಣಿಮೆಯ ಬೆಳಕಿನಲ್ಲೂ ಅಮವಾಸ್ಯೆ ಕತ್ತಲೆಯೆನುತ
ಭೂತಪ್ರೇತಗಳೆಂದು ಅರಿಷಿಣ ಕುಂಕುಮ ಎರಚುವವರು-
ರಾಜಕೀಯ ಖುರ್ಚಿಗೂ ಬಲಿ; ಉರುಳಿಸಲೂ ಬಲಿ
ಕುರಿ ಕೋಳಿ ಹಸು ಕಾಡೆಮ್ಮೆ ಸಾಕಿಲ್ಲ ಇವಕೆ
ಹಸುಗೂಸು ಕಂದಮ್ಮಗಳು ಬೇಕಿವಕೆ
ತಪ್ಪಿದರೆ ಕಂಠಕೆ ಬೆಚ್ಚಿಬೀಳಿಸುವ ಹುನ್ನಾರ.

ಗೂಬೆ ಗೂಗೂ ಅಂದರೊಂದು ಕಾಗೆ ಕಾಕಾ ಅಂದರೊಂದು
ಹಲ್ಲಿ ಲೊಚಗುಟ್ಟಿದರೊಂದು ಬೆಕ್ಕು ದಾಟಿದರೊಂದು
ಅಪಶಕುನದ ಮಾತೆತ್ತಿ ಸಾಯಿಸುವ ಪಾತಕಿಗಳು.

ಬಣ್ಣದ ವೇಷಗಳ ಭಯಂಕರ ಮುಖವಾಡಗಳು
ಕಳಚಿ ಬೀಳಲಿ ಮಾನವೀಯತೆ ಮೆರೆಯಲಿ…
ಚಿಂತನ ಮಂಥನಗಳಿಗೆ ಹೆದ್ದಾರಿಯಾಗಲಿ…
ಮನುಜರಾಗಲಿ ವಿಶ್ವಾಸಬೆಳೆಸಲಿ.
*****
೧. ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬಂದ ವಿಷಯ: ಇದರ ಬಗೆಗೆಯೇ ಒಂದು ಕರಡು ರಚನಾ ಸಮಿತಿ ಮಾಡಬೇಕೆನ್ನುವ ಒತ್ತಾಯ-೨೫ ನವೆಂಬರ್ ೨೦೧೩
೨. ಮೂಢನಂಬಿಕೆಯವರು ವಿಚಾರವಾದಿಗಳಾದ ಮಹಾರಾಷ್ಟ್ರದ ನರೇಂದ್ರ ದಾಬೋಲಕರ್, ಗುಲ್ಬರ್ಗದ ಲಿಂಗಣ್ಣ ಸತ್ಯಂಪೇಟೆ, ಧಾರವಾಡದ ಡಾ. ಎಂ. ಎಂ. ಕಲಬುರ್ಗಿ ಅವರನ್ನು ಕೊಂದರು.
೩ ಸರಕಾರಕ್ಕೆ ಮಾಡಬೇಕಾದಂತಹ ಅನೇಕ ಕೆಲಸಗಳಿವೆ: ಕೃಷಿಸಮಸ್ಯೆ, ನೆಲ, ಜಲ, ಮಹಿಳೆ, ಮಕ್ಕಳು, ಶಿಕ್ಷಣ, ಯುವಕರಿಗೆ ಉದ್ಯೋಗ, ವೃದ್ಧರ ಸಮಸ್ಯೆ ಮುಂತಾದವುಗಳು. ಸುಮ್ಮನೆ ಎಲ್ಲರ ಸಮಯ ಹಾಳು + ದುಡ್ಡುದಂಡ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...