Home / ಕವನ / ಕವಿತೆ / ಮುಖವಾಡಗಳು

ಮುಖವಾಡಗಳು

ಜನ್ಮ ಜನ್ಮಾಂತರದ ಶಾಪ ನಿಮಗಂಟಿದೆ
ಬೇಡವೆ ನಿಮಗೆ ಪರಿಹಾರ?
ನೋಡಿಲ್ಲಿ ನೋಡಲ್ಲಿ ಮೃತ್ಯುವಿನ ದೂತ
ಕಾಯುತಿರುವ ನಿಮ್ಮ ಮನೆಯ
ಮುಂಬಾಗಿಲು ಹಿಂಬಾಗಿಲು-

ಶಕುನ ಜಾತಕ ಜ್ಯೋತಿಷಿಗಳು
ಕಾಲಜ್ಞಾನಿ ಸಂಖ್ಯಾಶಾಸ್ತ್ರ ವಾಸ್ತುದವರು
ದಿನ ಬೆಳಗಾದರೆ ಗಂಟಲು ಕಿರುಚಿ ಹೇಳಿ ಹೇಳಿ
ಹೆದರಿಸಿ ಎದೆಯೊಡೆಸಿ ಸಾಯಿಸುತಿಹರು ಮುಗ್ಧರ-

ಮತ್ತೆ ಪರಿಹಾರಕೆ ಅವರೇ ದಾಳಗಳನೆಸೆದು
ಕತ್ತಲೆಕೋಣೆಗೆ ಹೊಗೆಹಾಕಿ ದೇವರೆ ಬಂದಿಹನಿಲ್ಲಿ
ಮಾತನಾಡುವನು ನಿಮ್ಮೊಂದಿಗೆ ಭಯ ಬೀಳದಿರಿ
ನೋಡಿ ನೋಡಿ ಕೇಳಿ ಭಕ್ತರೆ ಭಕ್ತಿ ಇರಲಿ…
ಮುಖವಾಡ ಸ್ವಾಮಿಗಳ
ಒಳಗೊಳಗೇ ನಗು ಹಣದ ಚೀಲ ಝಣಝಣ.

ಮಾಟಮಂತ್ರ ವಶೀಕರಣ ನರಬಲಿ ಪ್ರಾಣಿಬಲಿ
ಹರಕೆ ಮಡೆಸ್ನಾನ ಪಂಕ್ತಿಭೇದ ದೇವದಾಸಿ
ಬೆತ್ತಲಸೇವೆ ಪಾದಪೂಜೆ ಅಡ್ಡಪಲ್ಲಕ್ಕಿ
ಆಹಾ! ಒಂದೇಽ ಎರಡೇಽ ಇವರ
ನಂಬಿಕೆ ಬಿಂಬಿಸುವ ಹುನ್ನಾರ.

ಅಯ್ಯೋ ದುರ್‍ಭಾಗ್ಯ ದೇಶವೆ
ಎಷ್ಟೊಂದು ನರಳುವಿಕೆ ಅಂಧಕಾರ
ಹುಣ್ಣಿಮೆಯ ಬೆಳಕಿನಲ್ಲೂ ಅಮವಾಸ್ಯೆ ಕತ್ತಲೆಯೆನುತ
ಭೂತಪ್ರೇತಗಳೆಂದು ಅರಿಷಿಣ ಕುಂಕುಮ ಎರಚುವವರು-
ರಾಜಕೀಯ ಖುರ್ಚಿಗೂ ಬಲಿ; ಉರುಳಿಸಲೂ ಬಲಿ
ಕುರಿ ಕೋಳಿ ಹಸು ಕಾಡೆಮ್ಮೆ ಸಾಕಿಲ್ಲ ಇವಕೆ
ಹಸುಗೂಸು ಕಂದಮ್ಮಗಳು ಬೇಕಿವಕೆ
ತಪ್ಪಿದರೆ ಕಂಠಕೆ ಬೆಚ್ಚಿಬೀಳಿಸುವ ಹುನ್ನಾರ.

ಗೂಬೆ ಗೂಗೂ ಅಂದರೊಂದು ಕಾಗೆ ಕಾಕಾ ಅಂದರೊಂದು
ಹಲ್ಲಿ ಲೊಚಗುಟ್ಟಿದರೊಂದು ಬೆಕ್ಕು ದಾಟಿದರೊಂದು
ಅಪಶಕುನದ ಮಾತೆತ್ತಿ ಸಾಯಿಸುವ ಪಾತಕಿಗಳು.

ಬಣ್ಣದ ವೇಷಗಳ ಭಯಂಕರ ಮುಖವಾಡಗಳು
ಕಳಚಿ ಬೀಳಲಿ ಮಾನವೀಯತೆ ಮೆರೆಯಲಿ…
ಚಿಂತನ ಮಂಥನಗಳಿಗೆ ಹೆದ್ದಾರಿಯಾಗಲಿ…
ಮನುಜರಾಗಲಿ ವಿಶ್ವಾಸಬೆಳೆಸಲಿ.
*****
೧. ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬಂದ ವಿಷಯ: ಇದರ ಬಗೆಗೆಯೇ ಒಂದು ಕರಡು ರಚನಾ ಸಮಿತಿ ಮಾಡಬೇಕೆನ್ನುವ ಒತ್ತಾಯ-೨೫ ನವೆಂಬರ್ ೨೦೧೩
೨. ಮೂಢನಂಬಿಕೆಯವರು ವಿಚಾರವಾದಿಗಳಾದ ಮಹಾರಾಷ್ಟ್ರದ ನರೇಂದ್ರ ದಾಬೋಲಕರ್, ಗುಲ್ಬರ್ಗದ ಲಿಂಗಣ್ಣ ಸತ್ಯಂಪೇಟೆ, ಧಾರವಾಡದ ಡಾ. ಎಂ. ಎಂ. ಕಲಬುರ್ಗಿ ಅವರನ್ನು ಕೊಂದರು.
೩ ಸರಕಾರಕ್ಕೆ ಮಾಡಬೇಕಾದಂತಹ ಅನೇಕ ಕೆಲಸಗಳಿವೆ: ಕೃಷಿಸಮಸ್ಯೆ, ನೆಲ, ಜಲ, ಮಹಿಳೆ, ಮಕ್ಕಳು, ಶಿಕ್ಷಣ, ಯುವಕರಿಗೆ ಉದ್ಯೋಗ, ವೃದ್ಧರ ಸಮಸ್ಯೆ ಮುಂತಾದವುಗಳು. ಸುಮ್ಮನೆ ಎಲ್ಲರ ಸಮಯ ಹಾಳು + ದುಡ್ಡುದಂಡ.

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...