Home / ಕವನ / ಕವಿತೆ / ಮುಖವಾಡಗಳು

ಮುಖವಾಡಗಳು

ಜನ್ಮ ಜನ್ಮಾಂತರದ ಶಾಪ ನಿಮಗಂಟಿದೆ
ಬೇಡವೆ ನಿಮಗೆ ಪರಿಹಾರ?
ನೋಡಿಲ್ಲಿ ನೋಡಲ್ಲಿ ಮೃತ್ಯುವಿನ ದೂತ
ಕಾಯುತಿರುವ ನಿಮ್ಮ ಮನೆಯ
ಮುಂಬಾಗಿಲು ಹಿಂಬಾಗಿಲು-

ಶಕುನ ಜಾತಕ ಜ್ಯೋತಿಷಿಗಳು
ಕಾಲಜ್ಞಾನಿ ಸಂಖ್ಯಾಶಾಸ್ತ್ರ ವಾಸ್ತುದವರು
ದಿನ ಬೆಳಗಾದರೆ ಗಂಟಲು ಕಿರುಚಿ ಹೇಳಿ ಹೇಳಿ
ಹೆದರಿಸಿ ಎದೆಯೊಡೆಸಿ ಸಾಯಿಸುತಿಹರು ಮುಗ್ಧರ-

ಮತ್ತೆ ಪರಿಹಾರಕೆ ಅವರೇ ದಾಳಗಳನೆಸೆದು
ಕತ್ತಲೆಕೋಣೆಗೆ ಹೊಗೆಹಾಕಿ ದೇವರೆ ಬಂದಿಹನಿಲ್ಲಿ
ಮಾತನಾಡುವನು ನಿಮ್ಮೊಂದಿಗೆ ಭಯ ಬೀಳದಿರಿ
ನೋಡಿ ನೋಡಿ ಕೇಳಿ ಭಕ್ತರೆ ಭಕ್ತಿ ಇರಲಿ…
ಮುಖವಾಡ ಸ್ವಾಮಿಗಳ
ಒಳಗೊಳಗೇ ನಗು ಹಣದ ಚೀಲ ಝಣಝಣ.

ಮಾಟಮಂತ್ರ ವಶೀಕರಣ ನರಬಲಿ ಪ್ರಾಣಿಬಲಿ
ಹರಕೆ ಮಡೆಸ್ನಾನ ಪಂಕ್ತಿಭೇದ ದೇವದಾಸಿ
ಬೆತ್ತಲಸೇವೆ ಪಾದಪೂಜೆ ಅಡ್ಡಪಲ್ಲಕ್ಕಿ
ಆಹಾ! ಒಂದೇಽ ಎರಡೇಽ ಇವರ
ನಂಬಿಕೆ ಬಿಂಬಿಸುವ ಹುನ್ನಾರ.

ಅಯ್ಯೋ ದುರ್‍ಭಾಗ್ಯ ದೇಶವೆ
ಎಷ್ಟೊಂದು ನರಳುವಿಕೆ ಅಂಧಕಾರ
ಹುಣ್ಣಿಮೆಯ ಬೆಳಕಿನಲ್ಲೂ ಅಮವಾಸ್ಯೆ ಕತ್ತಲೆಯೆನುತ
ಭೂತಪ್ರೇತಗಳೆಂದು ಅರಿಷಿಣ ಕುಂಕುಮ ಎರಚುವವರು-
ರಾಜಕೀಯ ಖುರ್ಚಿಗೂ ಬಲಿ; ಉರುಳಿಸಲೂ ಬಲಿ
ಕುರಿ ಕೋಳಿ ಹಸು ಕಾಡೆಮ್ಮೆ ಸಾಕಿಲ್ಲ ಇವಕೆ
ಹಸುಗೂಸು ಕಂದಮ್ಮಗಳು ಬೇಕಿವಕೆ
ತಪ್ಪಿದರೆ ಕಂಠಕೆ ಬೆಚ್ಚಿಬೀಳಿಸುವ ಹುನ್ನಾರ.

ಗೂಬೆ ಗೂಗೂ ಅಂದರೊಂದು ಕಾಗೆ ಕಾಕಾ ಅಂದರೊಂದು
ಹಲ್ಲಿ ಲೊಚಗುಟ್ಟಿದರೊಂದು ಬೆಕ್ಕು ದಾಟಿದರೊಂದು
ಅಪಶಕುನದ ಮಾತೆತ್ತಿ ಸಾಯಿಸುವ ಪಾತಕಿಗಳು.

ಬಣ್ಣದ ವೇಷಗಳ ಭಯಂಕರ ಮುಖವಾಡಗಳು
ಕಳಚಿ ಬೀಳಲಿ ಮಾನವೀಯತೆ ಮೆರೆಯಲಿ…
ಚಿಂತನ ಮಂಥನಗಳಿಗೆ ಹೆದ್ದಾರಿಯಾಗಲಿ…
ಮನುಜರಾಗಲಿ ವಿಶ್ವಾಸಬೆಳೆಸಲಿ.
*****
೧. ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬಂದ ವಿಷಯ: ಇದರ ಬಗೆಗೆಯೇ ಒಂದು ಕರಡು ರಚನಾ ಸಮಿತಿ ಮಾಡಬೇಕೆನ್ನುವ ಒತ್ತಾಯ-೨೫ ನವೆಂಬರ್ ೨೦೧೩
೨. ಮೂಢನಂಬಿಕೆಯವರು ವಿಚಾರವಾದಿಗಳಾದ ಮಹಾರಾಷ್ಟ್ರದ ನರೇಂದ್ರ ದಾಬೋಲಕರ್, ಗುಲ್ಬರ್ಗದ ಲಿಂಗಣ್ಣ ಸತ್ಯಂಪೇಟೆ, ಧಾರವಾಡದ ಡಾ. ಎಂ. ಎಂ. ಕಲಬುರ್ಗಿ ಅವರನ್ನು ಕೊಂದರು.
೩ ಸರಕಾರಕ್ಕೆ ಮಾಡಬೇಕಾದಂತಹ ಅನೇಕ ಕೆಲಸಗಳಿವೆ: ಕೃಷಿಸಮಸ್ಯೆ, ನೆಲ, ಜಲ, ಮಹಿಳೆ, ಮಕ್ಕಳು, ಶಿಕ್ಷಣ, ಯುವಕರಿಗೆ ಉದ್ಯೋಗ, ವೃದ್ಧರ ಸಮಸ್ಯೆ ಮುಂತಾದವುಗಳು. ಸುಮ್ಮನೆ ಎಲ್ಲರ ಸಮಯ ಹಾಳು + ದುಡ್ಡುದಂಡ.

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ