Home / ಕವನ / ಕವಿತೆ / ಕಡಲಗರ್‍ಭ

ಕಡಲಗರ್‍ಭ

ಕಡಲಬಸಿರು ನೋಡುವ ಆಸೆಕಣ್ಗಳು-
ತನ್ನವೇ ಐದಾರು ಬಸಿರು
ನೆಲಕ್ಕುರುಳಿ ಬೆಳೆದು ನೀರಿಗಿಳಿದು
ಜಾಲರಿ ತುಂಬಿ ತುಂಬಿ ಮೀನುಗಳ
ತರುವ ಮಕ್ಕಳ ನೋಡಿ ನಕ್ಕಾಕೆ…
ಬೆಂಕಿಯ ನಾಲಿಗೆಗೆ ಸಿಕ್ಕು
ಸುಟ್ಟ ಮೀನುಗಳಿಗೆ ಅತ್ತಾಕೆ….
ಕತ್ತಲಕಾಯಕಕೆ ಬೆತ್ತಲಾಗಿ
ಹಗಲು ಹಣೆಬರಹಕೆ ಬಣ್ಣತುಂಬಿ
ಮನದೊಳಗೆ ಉಬ್ಬರ ಪಟ್ಟಾಕೆ…

ಮಳೆ ಮಳೆ ಮಳೆ ಹುಚ್ಚೆದ್ದ ಆಕಾಶ
ಮಳೆಸುರಿಸಿ ಹೊಳೆಹಳ್ಳ ತುಂಬಿ ಹರಿದು
ಕಡಲತಾಯಿ ಗರ್‍ಭವತಿ
ಕುಲುಕಾಟ ನೂರಾರು ಜೀವರಾಶಿಗಳೊಡಲು
ಬಣ್ಣ ಭಾವನೆಗಳ ಭಾರ ಹೊಯ್ದಾಟ.

ಬಿಟ್ಟೂಬಿಡದ ಉರಿಯನಾಲಿಗೆಗೆ ಸಿಕ್ಕು
ಒಳಗೊಳಗೆ ಬೆಂದು ನೋವುಂಡು
ನೆರಳಿ ಹೊರಳಿ ತೆವಳುತ ನಿಂತ ಕಡಲಗರ್‍ಭ
ಹಗಲೊಮ್ಮೆ ರಾತ್ರಿಯೊಮ್ಮೆ
ಕಡಲಗರ್‍ಭ ಕಂಡು ವಿಸ್ಮಯ
ಆಳ ಅಗಾಧತೆಗೆ ತನ್ನದೇ ಹೊಟ್ಟೆ ಸವರಿ
ಮಗದೊಮ್ಮೆ ಕಡಲಿನುಬ್ಬರಕೆ ದೃಷ್ಟಿ ಸರಿಸಿ
ಮೌನಿಯಾಗಿ ನಕ್ಕಾಕೆ.

ಕಡಲು ರಾಜನೆ? ಅವನಿಗದೆಂತಹ ಬಸಿರು!
ಕಡಲು ರಾಣಿಯೆ? ಅವಳಿಗದೆಲ್ಲಿಯ ನೆಮ್ಮದಿ!!
ಅದು ಬೆಸ್ತನರಮನೆ ಒಳಗೆ
ಹೆಂಡತಿಯ ದುಃಖದುಮ್ಮಾನಗಳಬ್ಬರ
ತಾಕಲಾಟದ ಗರ್‍ಭ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...