Home / ಕವನ / ಕವಿತೆ / ಕಡಲಗರ್‍ಭ

ಕಡಲಗರ್‍ಭ

ಕಡಲಬಸಿರು ನೋಡುವ ಆಸೆಕಣ್ಗಳು-
ತನ್ನವೇ ಐದಾರು ಬಸಿರು
ನೆಲಕ್ಕುರುಳಿ ಬೆಳೆದು ನೀರಿಗಿಳಿದು
ಜಾಲರಿ ತುಂಬಿ ತುಂಬಿ ಮೀನುಗಳ
ತರುವ ಮಕ್ಕಳ ನೋಡಿ ನಕ್ಕಾಕೆ…
ಬೆಂಕಿಯ ನಾಲಿಗೆಗೆ ಸಿಕ್ಕು
ಸುಟ್ಟ ಮೀನುಗಳಿಗೆ ಅತ್ತಾಕೆ….
ಕತ್ತಲಕಾಯಕಕೆ ಬೆತ್ತಲಾಗಿ
ಹಗಲು ಹಣೆಬರಹಕೆ ಬಣ್ಣತುಂಬಿ
ಮನದೊಳಗೆ ಉಬ್ಬರ ಪಟ್ಟಾಕೆ…

ಮಳೆ ಮಳೆ ಮಳೆ ಹುಚ್ಚೆದ್ದ ಆಕಾಶ
ಮಳೆಸುರಿಸಿ ಹೊಳೆಹಳ್ಳ ತುಂಬಿ ಹರಿದು
ಕಡಲತಾಯಿ ಗರ್‍ಭವತಿ
ಕುಲುಕಾಟ ನೂರಾರು ಜೀವರಾಶಿಗಳೊಡಲು
ಬಣ್ಣ ಭಾವನೆಗಳ ಭಾರ ಹೊಯ್ದಾಟ.

ಬಿಟ್ಟೂಬಿಡದ ಉರಿಯನಾಲಿಗೆಗೆ ಸಿಕ್ಕು
ಒಳಗೊಳಗೆ ಬೆಂದು ನೋವುಂಡು
ನೆರಳಿ ಹೊರಳಿ ತೆವಳುತ ನಿಂತ ಕಡಲಗರ್‍ಭ
ಹಗಲೊಮ್ಮೆ ರಾತ್ರಿಯೊಮ್ಮೆ
ಕಡಲಗರ್‍ಭ ಕಂಡು ವಿಸ್ಮಯ
ಆಳ ಅಗಾಧತೆಗೆ ತನ್ನದೇ ಹೊಟ್ಟೆ ಸವರಿ
ಮಗದೊಮ್ಮೆ ಕಡಲಿನುಬ್ಬರಕೆ ದೃಷ್ಟಿ ಸರಿಸಿ
ಮೌನಿಯಾಗಿ ನಕ್ಕಾಕೆ.

ಕಡಲು ರಾಜನೆ? ಅವನಿಗದೆಂತಹ ಬಸಿರು!
ಕಡಲು ರಾಣಿಯೆ? ಅವಳಿಗದೆಲ್ಲಿಯ ನೆಮ್ಮದಿ!!
ಅದು ಬೆಸ್ತನರಮನೆ ಒಳಗೆ
ಹೆಂಡತಿಯ ದುಃಖದುಮ್ಮಾನಗಳಬ್ಬರ
ತಾಕಲಾಟದ ಗರ್‍ಭ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...