ಕಡಲಗರ್‍ಭ

ಕಡಲಬಸಿರು ನೋಡುವ ಆಸೆಕಣ್ಗಳು-
ತನ್ನವೇ ಐದಾರು ಬಸಿರು
ನೆಲಕ್ಕುರುಳಿ ಬೆಳೆದು ನೀರಿಗಿಳಿದು
ಜಾಲರಿ ತುಂಬಿ ತುಂಬಿ ಮೀನುಗಳ
ತರುವ ಮಕ್ಕಳ ನೋಡಿ ನಕ್ಕಾಕೆ…
ಬೆಂಕಿಯ ನಾಲಿಗೆಗೆ ಸಿಕ್ಕು
ಸುಟ್ಟ ಮೀನುಗಳಿಗೆ ಅತ್ತಾಕೆ….
ಕತ್ತಲಕಾಯಕಕೆ ಬೆತ್ತಲಾಗಿ
ಹಗಲು ಹಣೆಬರಹಕೆ ಬಣ್ಣತುಂಬಿ
ಮನದೊಳಗೆ ಉಬ್ಬರ ಪಟ್ಟಾಕೆ…

ಮಳೆ ಮಳೆ ಮಳೆ ಹುಚ್ಚೆದ್ದ ಆಕಾಶ
ಮಳೆಸುರಿಸಿ ಹೊಳೆಹಳ್ಳ ತುಂಬಿ ಹರಿದು
ಕಡಲತಾಯಿ ಗರ್‍ಭವತಿ
ಕುಲುಕಾಟ ನೂರಾರು ಜೀವರಾಶಿಗಳೊಡಲು
ಬಣ್ಣ ಭಾವನೆಗಳ ಭಾರ ಹೊಯ್ದಾಟ.

ಬಿಟ್ಟೂಬಿಡದ ಉರಿಯನಾಲಿಗೆಗೆ ಸಿಕ್ಕು
ಒಳಗೊಳಗೆ ಬೆಂದು ನೋವುಂಡು
ನೆರಳಿ ಹೊರಳಿ ತೆವಳುತ ನಿಂತ ಕಡಲಗರ್‍ಭ
ಹಗಲೊಮ್ಮೆ ರಾತ್ರಿಯೊಮ್ಮೆ
ಕಡಲಗರ್‍ಭ ಕಂಡು ವಿಸ್ಮಯ
ಆಳ ಅಗಾಧತೆಗೆ ತನ್ನದೇ ಹೊಟ್ಟೆ ಸವರಿ
ಮಗದೊಮ್ಮೆ ಕಡಲಿನುಬ್ಬರಕೆ ದೃಷ್ಟಿ ಸರಿಸಿ
ಮೌನಿಯಾಗಿ ನಕ್ಕಾಕೆ.

ಕಡಲು ರಾಜನೆ? ಅವನಿಗದೆಂತಹ ಬಸಿರು!
ಕಡಲು ರಾಣಿಯೆ? ಅವಳಿಗದೆಲ್ಲಿಯ ನೆಮ್ಮದಿ!!
ಅದು ಬೆಸ್ತನರಮನೆ ಒಳಗೆ
ಹೆಂಡತಿಯ ದುಃಖದುಮ್ಮಾನಗಳಬ್ಬರ
ತಾಕಲಾಟದ ಗರ್‍ಭ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೫
Next post ಕಳ್ಳರ ಕೂಟ – ೧

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…